ಉಡುಪಿ: ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಉಡುಪಿ, ಮೇ 15: ಬ್ರಹ್ಮಗಿರಿಯ ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯು ಸೋಮವಾರ ನೆರವೇರಿತು.
ಮಸೀದಿಯ ಮೌಲಾನ ಹಾಶಿಂ ಉಮ್ರಿ ನೇತೃತ್ವದಲ್ಲಿ ವಿಶೇಷ ನಮಾಝ್ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಪ್ರವಾದಿ (ಸ.ಅ.) ಯವರೂ ಕೂಡ ಮಳೆ ಬಾರದ ಸಂದರ್ಭಗಳಲ್ಲಿ ವಿಶೇಷ ನಮಾಝ್ ಗಳನ್ನು ನಿರ್ವಹಿಸಿ ಪ್ರಾರ್ಥಿಸುತ್ತಿದ್ದರು. ರಾಜ್ಯದಲ್ಲಿ ಭೀಕರ ಬರಗಾಲ ಕಾಣಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಹೀಗಾಗಿ ಈ ವಿಶೇಷ ಪ್ರಾರ್ಥನೆಯನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷ ಝಕರಿಯಾ ಅಸ್ಸಾದಿ, ಉಡುಪಿ ನಗರಸಭೆ ಸದಸ್ಯ ಹಸನ್ ಅಜ್ಜರಕಾಡು, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.
Next Story





