Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಹಸ್ಯವಾಗಿ ನನ್ನನ್ನು ಭೇಟಿಯಾಗುತ್ತಿದ್ದ...

ರಹಸ್ಯವಾಗಿ ನನ್ನನ್ನು ಭೇಟಿಯಾಗುತ್ತಿದ್ದ ಮಗಳು ಕೈಯಲ್ಲಿದ್ದ ಗಾಯಗಳನ್ನು ಮುಚ್ಚಿಕೊಳ್ಳುತ್ತಿದ್ದಳು : ಅಲಿ ಅಹ್ಮದ್

ನನ್ನ ಕತೆ

ವಾರ್ತಾಭಾರತಿವಾರ್ತಾಭಾರತಿ16 May 2017 12:22 PM IST
share
ರಹಸ್ಯವಾಗಿ ನನ್ನನ್ನು ಭೇಟಿಯಾಗುತ್ತಿದ್ದ ಮಗಳು ಕೈಯಲ್ಲಿದ್ದ ಗಾಯಗಳನ್ನು ಮುಚ್ಚಿಕೊಳ್ಳುತ್ತಿದ್ದಳು : ಅಲಿ ಅಹ್ಮದ್

ಸುಮಾರು ಐದು ವರ್ಷಗಳ ತನಕ ನನ್ನ ಮಗಳು ನನ್ನನ್ನು ರಹಸ್ಯವಾಗಿ ಭೇಟಿಯಾಗಲು ಬರುತ್ತಿದ್ದಳು. ಆಕೆಯ ಪತಿ ಮನೆಗೆ ಭೇಟಿ ನೀಡುವುದು ನನಗೆ ನಿಷಿದ್ಧವಾಗಿತ್ತು. ಅವರಿಗೆ ಹೆಚ್ಚು ಹಣ ಕೊಡಲು ನನಗೆ ಸಾಧ್ಯವಿಲ್ಲವೆಂದಾದರೆ ನಾನು ಮತ್ತೆ ನನ್ನ ಮಗಳ ಮುಖ ನೋಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ನನ್ನ ಮಗಳನ್ನು ಭೇಟಿಯಾಗುವಾಗ ನಾನು ಬಹಳ ಎಚ್ಚರಿಕೆಯಿಂದಿರಬೇಕಿತ್ತು. ಪ್ರತಿ ಬಾರಿ ಆಕೆಯಲ್ಲಿ ನೀನು ಹೇಗಿದ್ದಿ ಎಂದು ಕೇಳಿದಾಗ ಆಕೆ ಬಹಳಷ್ಟು ನಗುತ್ತಿದ್ದಳು ಅಗತ್ಯಕ್ಕಿಂತ ಹೆಚ್ಚು ನಗುತ್ತಿದ್ದಳು. ಒಂದು ದಿನ ನಾವಿಬ್ಬರು ಯಾವುದೇ ಅಂಜಿಕೆಯಿಲ್ಲದೆ ಭೇಟಿಯಾಗಲು ಸಾಧ್ಯವೆಂದು ಕೆಲವೊಮ್ಮೆ ಆಕೆ ನನಗೆ ಹೇಳುತ್ತಿದ್ದಳು. ನಾನು ಎರಡು ಪಟ್ಟು ಹೆಚ್ಚು ದುಡಿಯುತ್ತಿರುವುದರಿಂದ ಆ ದಿನ ಬೇಗನೇ ಬರಲಿದೆಯೆಂದು ನಾನು ಆಕೆಗೆ ಹೇಳುತ್ತಿದ್ದೆ.

‘‘ನಿಮ್ಮ ಎಲ್ಲಾ ನೋವುಗಳಿಗೆ ನಾನು ಕಾರಣವಲ್ಲವೇ ಬಾಬಾ?’’ ಎಂದು ಆಕೆ ನನ್ನನ್ನು ನೋಡಿ ನಕ್ಕು ಹೇಳುತ್ತಿದ್ದಳು. ಆದರೆ ಆಕೆಯ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿ ನಾನು ಜೀವದಿಂದಿರಲು ಆಕೆಯೊಬ್ಬಳೇ ಕಾರಣ ಎಂದು ಹೇಳುತ್ತಿದ್ದೆ. ನಮಗೆ ಒಬ್ಬರನ್ನೊಬ್ಬರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇನ್ನೊಂದು ಕೆಲ ತಿಂಗಳು ನಾನು ಉಳಿತಾಯ ಮಾಡಬೇಕಿತ್ತು.

ಕೆಲವೊಮ್ಮೆ ಆಕೆಯ ಕೈಗಳು ಹಾಗೂ ಕಾಲುಗಳಲ್ಲಿ ಕೆಲವು ನೇರಳೆ ಗಾಯದ ಗುರುತುಗಳನ್ನು ನಾನು ನೋಡುತ್ತಿದ್ದೆ. ಅವುಗಳನ್ನು ಆಕೆ ಮುಚ್ಚಿಕೊಳ್ಳುತ್ತಿದ್ದಳು ಹಾಗೂ ನನಗೆ ಆಕೆ ಉತ್ತರ ನೀಡುತ್ತಿರಲಿಲ್ಲ. ಆಕೆಯ ಕೈಗಳನ್ನು ಹಿಡಿದು ಆಕೆಯನ್ನು ಯಾರೂ ಹಿಂಸಿಸದ ನಮ್ಮ ಮನೆಗೆ ಕರೆದುಕೊಂಡು ಬರಬೇಕೆಂದು ನನಗೆ ಅನಿಸುತ್ತಿತ್ತು. ಆದರೆ ಹಾಗೆ ಮಾಡಲು ನನಗೆ ಸಾಧ್ಯವಿಲ್ಲವಾಗಿತ್ತು.

ಪ್ರತಿ ವರ್ಷ ಕಳೆದಂತೆ ಅವರು ಬೇಡಿಕೆಯಿಡುತ್ತಿದ್ದ ವರದಕ್ಷಿಣೆಗಾಗಿ ನಾನು ಉಳಿತಾಯ ಮಾಡುತ್ತಲೇ ಇದ್ದೆ. ಒಂದು ದಿನ ನಾನು ತುಂಬಾ ಸಂತೋಷದಿಂದಿದ್ದೆ. ಆಕೆಯ ಅತ್ತೆ ಮಾವ ನಮಗೆ ತೊಂದರೆಯುಂಟು ಮಾಡದೇ ಇರುವಂತೆ ಮಾಡಲು ನಮ್ಮ ಮನೆಯನ್ನು ಮಾರಾಟ ಮಾಡುವುದಾಗಿ ಒಂದು ದಿನ ನನ್ನ ಮಗಳಿಗೆ ಹೇಳಿದೆ. ಆಕೆ ನಿರ್ಲಿಪ್ತತೆಯಿಂದ ನನ್ನ ಮುಖವನ್ನೇ ನೋಡಿದಳು. ತನ್ನ ಕರವಸ್ತ್ರದಲ್ಲಿ ನನಗಾಗಿ ಸ್ವಲ್ಪ ನಟ್ಸ್ ತಂದಿದ್ದಳು. ಅದನ್ನು ನನಗೆ ನೀಡಿ ಸ್ವಲ್ಪ ಸಮಯ ನನ್ನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದಳು.

ಆ ಕರವಸ್ತ್ರವನ್ನು ನನ್ನ ಬಳಿಯೇ ಇಟ್ಟುಕೊಳ್ಳುವಂತೆ ಹಾಗೂ ನನಗೆ ಅದು ಆಕೆಯ ನೆನಪು ಮಾಡುವುದೆಂದು ಆಕೆ ಹೇಳಿದಳು. ನನ್ನಿಂದ ದೂರ ಹೋಗುತ್ತಿದ್ದ ಆ ಹುಡುಗಿಯ ನೆರಳನ್ನು ನಾನು ನೋಡಿದೆ. ಆಕೆಯನ್ನು ನಮ್ಮ ಮನೆಗೆ ಕರೆದುಕೊಂಡು ಬರಬೇಕೆಂದು ನನಗೆ ತುಂಬಾ ಅನಿಸುತ್ತಿತ್ತು ಆಕೆಯನ್ನು ಅಲ್ಲಿ ಕೂಡಿ ಹಾಕಿ ಯಾರು ಕೂಡ ಮತ್ತೆ ಹಣಕ್ಕಾಗಿ ಆಕೆಯನ್ನು ಹಿಂಸಿಸದಂತೆ ಮಾಡಬೇಕೆಂದು ಅನಿಸುತ್ತಿತ್ತು.

ಆ ರಾತ್ರಿ ನನ್ನಲ್ಲಿದ್ದ ಎಲ್ಲಾ ವಸ್ತುಗಳನ್ನೂ ನಾನು ಒಟ್ಟುಗೂಡಿಸಿದೆ. ಅಝಾನ್ ಕೇಳಲು ಹಾಗೂ ನನ್ನ ಮಗಳ ಮನೆಗೆ ಹೊರಡಲು ಕಾಯುತ್ತಿದ್ದೆ. ಆದರೆ ನಾನು ಹೊರಡುವ ಮುನ್ನ ನನ್ನ ಮಗಳು ತೀರಿ ಹೋದಳು ಎಂಬ ಸುದ್ದಿ ನನಗೆ ಸಿಕ್ಕಿತು. ಅಲ್ಲಿಗೆ ನಾನು ಗ್ರಾಮಸ್ಥರೊಂದಿಗೆ ಹೋದಾಗ ಆಕೆಯ ಅತ್ತೆ ಮನೆಯವರು ಆಕೆಗಿದ್ದ ಹೃದಯದ ರೋಗವನ್ನು ವಿವರಿಸಿದರು.

ಆಕೆಯ ಮುಖವನ್ನು ನೋಡಿದೆ ಅದು ನೇರಳೆ ಬಣ್ಣಕ್ಕೆ ತಿರುಗಿತ್ತು, ದೇಹದ ತುಂಬೆಲ್ಲಾ ಇಂತಹುದೇ ಗುರುತುಗಳಿದ್ದವು. ಅಲ್ಲಿ ಒಂದು ನಿಮಿಷವೂ ತಡ ಮಾಡದೆ ಆಕೆಯ ದೇಹವನ್ನು ಜಾಗರೂಕತೆಯಿಂದ ನಮ್ಮ ಮನೆಗೆ ತಂದೆ. ನಾನು ತಡ ಮಾಡಿ ಬಿಟ್ಟಿದ್ದೆ ಇದೇ ಕಾರಣಕ್ಕೆ ಆಕೆ ಕಣ್ಣು ತೆರೆಯಲಿಲ್ಲ. ನಾನು ತುಂಬಾ ತಡ ಮಾಡಿ ಬಿಟ್ಟಿದ್ದೆ. ಆಕೆಯನ್ನು ದಫನಭೂಮಿಗೆ ಕೊಂಡೊಯ್ಯುವ ಮುನ್ನ ಗ್ರಾಮಸ್ಥರಿಗೆ ನನ್ನೊಂದಿಗೆ ಬರಲು ಹೇಳಿದೆ.

ಆ ದಿನ ಆ ಮನೆಯ ಪ್ರತಿಯೊಂದು ಪ್ರಾಣಿಯನ್ನು ನಾನು ಶಿಕ್ಷಿಸಿದೆ. ಗ್ರಾಮಸ್ಥರು ಅವರಿಗಾಗಿ ಪೊಲೀಸರನ್ನು ಕರೆ ತಂದರು. ಆ ಘಟನೆ ನಡೆದು 23 ವರ್ಷಗಳಾಗಿವೆ, ಆಂದಿನಿಂದ ಈ ಗ್ರಾಮದ ಯಾವೊಬ್ಬ ಹೆಣ್ಣುಮಗಳೂ ವರದಕ್ಷಿಣೆಗಾಗಿ ಅಸಹಾಯಕಳಾಗಿ ಸಾವನ್ನಪ್ಪದಂತೆ ನಾನು ನೋಡಿಕೊಂಡಿದ್ದೇನೆ. ನನ್ನ ಶಪ್ಲಾ ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ನನಗೆ ಗೊತ್ತು ಏಕೆಂದರೆ ಆಕೆಯನ್ನು ನನ್ನ ಮನೆಗೆ ತರಲು ನಾನು ತುಂಬಾ ತಡ ಮಾಡಿ ಬಿಟ್ಟಿದ್ದೆ. ಆದರೆ ಆಕೆಯನ್ನು ನಾನು ಮಿಸ್ ಮಾಡಿಕೊಂಡಾಗಲೆಲ್ಲಾ ಆ ಕರವಸ್ತ್ರವನ್ನು ನೋಡುತ್ತೇನೆ. ಆದರಲ್ಲಿ ‘ಬಾಬಾ’ ಎಂದು ಬರೆದಿದೆ.

- ಅಲಿ ಅಹ್ಮದ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X