Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹೊರವಲಯದ ಗಾಳಿಯ ತಂಪು-ಕಂಪು

ಹೊರವಲಯದ ಗಾಳಿಯ ತಂಪು-ಕಂಪು

​ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ20 May 2017 11:53 PM IST
share
ಹೊರವಲಯದ ಗಾಳಿಯ ತಂಪು-ಕಂಪು

ಕನ್ನಡ ಸಾಹಿತ್ಯ ಲೋಕದಲ್ಲಿ ‘ಮಾನವ್ಯ ಕವಿ’ ಎಂದು ಗುರುತಿಸಲ್ಪಟ್ಟವರು ಬಿ. ಎ. ಸನದಿ. ಇವರನ್ನು ‘ಮಾನವ್ಯ ಕವಿ’ ಎಂದು ಕರೆದವರು ಹಿರಿಯ ವಿಮರ್ಶಕ ಗೌರೀಶ ಕಾಯ್ಕಿಣಿಯವರು. ಸನದಿಯ ಕುರಿತಂತೆ ಬರೆದ ಕಿರು ಕೃತಿಗೆ ಈ ಹೆಸರನ್ನೇ ಅವರು ಇಟ್ಟಿದ್ದಾರೆ. ಅಂದರೆ ಎರಡು ಅರ್ಥವನ್ನು ಇದು ಒಳಗೊಂಡಿದೆ. ಮನವೀಯತೆಯನ್ನು ಕೇಂದ್ರವಾಗಿಟ್ಟುಕೊಂಡು ಕವಿತೆ ಬರೆದವರು ಮಾತ್ರವಲ್ಲ, ನವ್ಯದ ಅಂತರ್ಮುಖೀ ಭಾವಕ್ಕೆ ಸಿಲುಕಿಕೊಳ್ಳದೆ ನವೋದಯದಿಂದ ಸಂಪೂರ್ಣ ಕಳಚಿಕೊಳ್ಳದೆ ಬರೆಯುತ್ತಾ ಬಂದವರು. ತಮ್ಮ ಬರಹದ ಮೂಲಕವೇ ಹೊಸತೊಂದು ಕಾವ್ಯಪರಂಪರೆಯ ಸೂಚನೆ ಯನ್ನು ಕೊಟ್ಟವರು. ಸನದಿ ಹೊರನಾಡ ಕನ್ನಡಿಗರು. ತಾವು ಇದ್ದಲ್ಲೇ ಹಲವು ಭಾಷೆಗಳನ್ನು ತಮ್ಮದಾಗಿಸಿಕೊಂಡವರು. ಮರಾಠಿ, ಹಿಂದಿಯ ಜೊತೆಗೂ ಅವಿನಾ ಭಾವ ಸಂಬಂಧವನ್ನು ಹೊಂದಿದವರು. ಆದುದರಿಂದಲೇ ಇವರ ಹಲವು ಕವನ ಸಂಕಲನಗಳಲ್ಲಿ ಅನುವಾದಿತ ಕವನಗಳು ಕೆಲವಾದರೂ ಇರುತ್ತವೆ. ‘ಹೊರವಲಯದ ಗಾಳಿ’ ಕವನ ಸಂಕಲನ ಮಾತ್ರ ಇದಕ್ಕೆ ತುಸು ವಿಶಿಷ್ಟವಾದುದು. ಇಲ್ಲಿರುವ ಪದ್ಯಗಳೆಲ್ಲವೂ ಅನುವಾದಿತ ಕವಿತೆಗಳು. ಸಾಧಾರಣವಾಗಿ ಹಿಂದಿ, ಮರಾಠಿ, ಉರ್ದು ಕವಿತೆಗಳನ್ನು ಈ ಹಿಂದೆ ಹೆಚ್ಚು ಆಸಕ್ತಿಯಿಂದ ಅನುವಾದ ಮಾಡಿರುವ ಸನದಿಯವರು ಈ ಕೃತಿಯಲ್ಲಿ ಭಾರತೀಯ ಭಾಷೆಯ ಎಲ್ಲೆಯನ್ನು ದಾಟಿದ್ದಾರೆ. ಇಂಗ್ಲಿಷ್, ಅರಬಿ, ಚೀನಾ ಕವಿತೆಗಳ ಅನುವಾದಗಳು ಗಮನ ಸೆಳೆಯುತ್ತವೆ.
ಬಿಟ್ಟ ಬಾಣ ಮತ್ತು ಸುರಿದ ಹಾಡಿನ ವ್ಯತ್ಯಾಸ ವನ್ನು ಹೇಳುವ ಕವಿ ಹೆನ್ರಿ ಅವರ ‘ಆ್ಯರೋ ಎಂಟ್ ಸಾಂಗ್’, ಎಳೆತನ, ಹಕ್ಕಿಗಳ, ಹೂವುಗಳ ಹಾಡಿನಲ್ಲಿರುವ ಕೇಡು ರಹಿತ ಬದುಕಿನ ಭರವಸೆಯನ್ನು ಹೇಳುವ ಡೇವಿಸ್ ಅವರ ಕನ್‌ಫೆಶನ್ ‘ಒಪ್ಪಿಗೆ’ಯಾಗಿ ಕನ್ನಡಕ್ಕಿಳಿದಿದೆ. ‘ಹಿಮದೊಂದು ಸಂಜೆ ಕಾಡಂಚಿನಲಿ ನಿಂತಾಗ’ ರಾಬರ್ಟ್ ಫ್ರಾಸ್ಟ್ ಅವರ ಕವಿತೆ. ಕಾಡಿನ ರಮ್ಯತೆ, ಗಾಢತೆ, ನಿಗೂಢತೆಯನ್ನು ಹೇಳುವ ಕವಿತೆ ಇದು. ಹತ್ತಕ್ಕೂ ಅಧಿಕ ಚೀನಾದ ಕವಿತೆಗಳ ಅನುವಾದಗಳು ಇಲ್ಲಿವೆ. ಚೀನಾ ಎಂದಾಗ ಕೆಂಪು ರೂಪಕಗಳೇ ಆಗಬೇಕಾಗಿಲ್ಲ. ಅಲ್ಲಿನ ಪ್ರೇಮ ಮತ್ತು ರಮ್ಯತೆಗಳೂ ಸನದಿಯ ಲಯದಲ್ಲಿ ಹೃದಯವನ್ನು ಸ್ಪರ್ಶಿಸುತ್ತವೆ. ಹಾಗೆಯೇ ಅರಬಿ ಕವಿತೆಗಳು, ನಿಗ್ರೋಗಳ ಕಪ್ಪು ವರ್ಣದಿಂದ ಪುಟಿದೆದ್ದ ಧ್ವನಿಗಳೂ ಇಲ್ಲಿವೆ. ನವೋದಯದ ಲಯವನ್ನು ಇಟ್ಟುಕೊಂಡು ಎಲ್ಲ ಪದ್ಯಗಳೂ ರೂಪ ತಾಳಿವೆ. ಸನದಿಯ ಕೈಯಲ್ಲಿ ಎಲ್ಲ ಕವಿತೆಗಳೂ ಹೊಸದಾಗಿ ಜನ್ಮತಾಳಿವೆ. ನಮ್ಮದೇ ನೆಲದ ಕವಿತೆಗಳಾಗಿ ನಮ್ಮನ್ನು ಆಕರ್ಷಿಸುತ್ತವೆ. ಸುಂದರ ಪುಸ್ತಕ ಪ್ರಕಾಶನ ಧಾರವಾಡ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 70 ರೂ. ಆಸಕ್ತರು 9448556458 ದೂರವಾಣಿಯನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X