ಬಸ್ ಮೇಲೆ ಬಿದ್ದ ಬಂಡೆಕಲ್ಲು: ಐವರು ಮೃತ್ಯು
ಅಲ್ಮೋರಾ, ಮೇ 22: ಬಂಡೆಕಲ್ಲೊಂದು ಬಸ್ ಮೇಲೆ ಬಿದ್ದ ಪರಿಣಾಮ ಐವರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಉತ್ತರಾಖಂಡದ ಆಲ್ಮೋರಾದ ಕಾಕ್ರಿಘಾಟ್ ನಲ್ಲಿ ನಡೆದಿದೆ.
ಬೆಟ್ಟದಿಂದ ಉರುಳಿದ ಬಂಡೆಕಲ್ಲು ಬಸ್ ಮೇಲೆ ಬಿದ್ದಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಾರು 27 ಮಂದಿ ಪ್ರಯಾಣಿಕರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೂಕುಸಿತದ ಪರಿಣಾಮ ರಿಷಿಕೇಶ್-ಬದ್ರಿನಾಥ್ ಹೆದ್ದಾರಿಗೆ ತಡೆಯಾಗಿ ಸುಮಾರು 14,000 ಯಾತ್ರಾರ್ಥಿಗಳು ಸಂಕಷ್ಟದಲ್ಲಿರುವ ನಡುವೆಯೇ ಈ ಭೀಕರ ಘಟನೆ ಸಂಭವಿಸಿದೆ.
Next Story