Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಿಲ್ಲಿಯಿಂದ ಅಮೆರಿಕಕ್ಕೆ ಒಂದು ರೂ.ಗೆ...

ದಿಲ್ಲಿಯಿಂದ ಅಮೆರಿಕಕ್ಕೆ ಒಂದು ರೂ.ಗೆ ಏರ್ ಇಂಡಿಯಾ ಟಿಕೆಟ್!

ವಾರ್ತಾಭಾರತಿವಾರ್ತಾಭಾರತಿ22 May 2017 11:08 PM IST
share
ದಿಲ್ಲಿಯಿಂದ ಅಮೆರಿಕಕ್ಕೆ ಒಂದು ರೂ.ಗೆ ಏರ್ ಇಂಡಿಯಾ ಟಿಕೆಟ್!

ಹೊಸದಿಲ್ಲಿ, ಮೇ 22: ಸಾಮಾನ್ಯವಾಗಿ ವಿಮಾನಯಾನ ದರಗಳು ಆರಂಭವಾಗುವುದೇ ಸಾವಿರಾರು ರೂ.ಗಳಿಂದ. ಸೀಸನ್ ಗಳಲ್ಲಂತೂ ಈ ದರ ಬಹಳಷ್ಟು ಹೆಚ್ಚಳವಾಗುವುದು ಸಾಮಾನ್ಯ. ಪ್ರಾದೇಶಿಕ ವಿಮಾನಗಳ ದರವೇ ದುಬಾರಿಯಾಗಿರುವಾಗ ಇಲ್ಲೊಬ್ಬ ಯುವಕನಿಗೆ ಏರ್ ಇಂಡಿಯಾ ದಿಲ್ಲಿಯಿಂದ ಅಮೆರಿಕ ಪ್ರಯಾಣಕ್ಕೆ ನೀಡಿರುವ ಟಿಕೆಟ್ ದರ ಕೇವಲ 1 ರೂ.

ವಿಚಿತ್ರವಾದರೂ ಸತ್ಯ ಘಟನೆಯಾದ ಈ ಪ್ರಕರಣದ ಹಿಂದೆ ಚಾಣಾಕ್ಷ ಯುವಕನೊಬ್ಬನಿದ್ದಾನೆ. ಹ್ಯಾಕಿಂಗ್ ಜಗತ್ತಿನಲ್ಲಿ ಬೇರೆಯವರ ಕಂಪ್ಯೂಟರ್ ನೊಳಕ್ಕೆ ನುಗ್ಗಿ ಡಾಟಾಗಳನ್ನು ಕಳವು ಮಾಡಿ ಲಕ್ಷಾಂತರ ರೂ.ಗಳನ್ನು ಗಳಿಸುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯ ದುರ್ಬಲ ಟಿಕೆಟ್ ವ್ಯವಸ್ಥೆಯ ಬಗ್ಗೆ ಎಚ್ಚರಿಸಿರುವ ಯುವಕ, ಈ ಬಗ್ಗೆ ಸ್ವತಃ ತಾನೇ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾನೆ.

ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಗೆ ಇ-ಮೇಲ್  ಸಂದೇಶ ಕಳುಹಿಸಿದ್ದ ಕೌಶಿಕ್ ಸಜ್ನಾನಿ, ಸಂಸ್ಥೆಯ ಅಪ್ಲಿಕೇಶನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಪ್ರಮುಖ ಸಮಸ್ಯೆಯ ಬಗ್ಗೆ ತಿಳಿಸಿದ್ದ. ಅಲ್ಲದೆ ಹ್ಯಾಕಿಂಗನ್ನು ದುರುಪಯೋಗಪಡಿಸುವ ಯಾವ ಉದ್ದೇಶವೂ ತನಗಿಲ್ಲ. ಈ ಬಗ್ಗೆ ವಿವರವಾಗಿ ಮುಂದೆ ತಿಳಿಸುತ್ತೇನೆ. ಬೇರೆ ಹ್ಯಾಕರ್ ಗಳು ಇದನ್ನು ದುರುಪಯೋಗಪಡಿಸಿದ್ದಲ್ಲಿ ಸಂಸ್ಥೆಗೆ ಭಾರೀ ನಷ್ಟವಾಗಲಿದೆ ಎಂದಿದ್ದ.

ಇ-ಮೇಲ್ ಕಳುಹಿಸಿ ಹಲವು ದಿನಗಳ ನಂತರ ಏರ್ ಇಂಡಿಯಾದ ಫೈನಾನ್ಸ್ ಮ್ಯಾನೇಜರ್ ಕೌಶಿಕ್ ಗೆ ಕರೆ ಮಾಡಿ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಸಾಬೀತುಪಡಿಸುವಂತೆ ಹೇಳಿದ್ದರು. ತಕ್ಷಣವೇ ಹ್ಯಾಕಿಂಗ್ ಮೂಲಕ ಕೌಶಿಕ್ ದಿಲ್ಲಿಯಿಂದ ಅಮೆರಿಕಕ್ಕೆ 1 ರೂ. ನಲ್ಲಿ ಟಿಕೆಟ್ ಖರೀದಿಸಿ, ಅದನ್ನು ಸಂಸ್ಥೆಗೆ ಮೇಲ್ ಮಾಡಿದ್ದ. ಮೇಲ್ ನೊಂದಿಗೆ ವಿಡಿಯೋ ಒಂದನ್ನು ಕಳುಹಿಸಿದ್ದ ಕೌಶಿಕ್ ತಾನು ಹೇಗೆ ಟಿಕೆಟಿಂಗ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದೇನೆ ಎನ್ನುವುದನ್ನು ವಿವರಿಸಿದ್ದ. ಇದರಿಂದ ಎಚ್ಚೆತ್ತ ಏರ್ ಇಂಡಿಯಾ, ಕೌಶಿಕ್ ಜಾಣ್ಮೆಗೆ ತಲೆದೂಗಿ ಇಂಟರ್ನ್ ಶಿಪ್ ಆಫರ್ ನೀಡಿದ್ದು, ಆದರೆ ಕೌಶಿಕ್ ನಿರಾಕರಿಸಿದ್ದ.

4 ರೂ.ಗೆ ಗೋವಾ ಪ್ರಯಾಣ

ಈ ಘಟನೆ ನಡೆಯುವ ಕೆಲ ದಿನಗಳಿಗೆ ಮುಂಚಿತವಾಗಿ ಕೌಶಿಕ್ 4,028 ರ ಗೋವಾ ಟಿಕೆಟನ್ನು ಕೇವಲ 4 ರೂ.ಗೆ ಖರೀದಿಸಿದ್ದ. ಈ  ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆಗೆ ಮೇಲ್ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೇಲ್ ಗಮನಿಸಿದ್ದ ಸಂಸ್ಥೆಯ ಜನರಲ್ ಮ್ಯಾನೇಜರ್ ಗೆ ಕೌಶಿಕ್ ಹೇಳಲು ಬಂದ ವಿಚಾರ ಅರ್ಥವಾಗಿಲ್ಲವೋ ಅಥವಾ ಅರ್ಥವಾಗಿದ್ದರೂ ಸಂಸ್ಥೆಯ ಪ್ರಮಾದವನ್ನು ಒಪ್ಪಲು ತಯಾರಿರಲಿಲ್ಲವೋ ಕೌಶಿಕ್ ಮೇಲ್ ನಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ಇಷ್ಟೇ ಅಲ್ಲದೆ ಕೌಶಿಕ್ ಹಲವು ಬಾರಿ 1  ರೂ.ಗೆ ಬಿರಿಯಾನಿಯನ್ನೂ ಆರ್ಡರ್ ಮಾಡಿದ್ದ. “ಏರ್ ಇಂಡಿಯಾ, ಸ್ಪೈಸ್ ಜೆಟ್, ಕ್ಲಿಯರ್ ಟ್ರಿಪ್, ಮೊಬಿಕ್ವಿಕ್ ಹಾಗೂ ಫಾಸೋಸ್ ನಾನು ಮಾತುಕತೆ ನಡೆಸಿರುವ ಕಂಪೆನಿಗಳಾಗಿವೆ. ಉಳಿದವರಿಗೆ ಯಾವುದೇ ದೋಷಗಳ ಬಗ್ಗೆ ಮಾಹಿತಿ ನೀಡಿಲ್ಲ. ಅದೇ ಕಾರಣಕ್ಕಾಗಿ ತಾಂತ್ರಿಕ ವಿವರಗಳನ್ನು ನಾನೆಲ್ಲೂ ಹಂಚಿಕೊಂಡಿಲ್ಲ” ಎಂದು ಕೌಶಿಕ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X