Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇವರು ಹೇಳಿದ್ದು ‘ಬಾಂಬೆ ’...ಅವರಿಗೆ...

ಇವರು ಹೇಳಿದ್ದು ‘ಬಾಂಬೆ ’...ಅವರಿಗೆ ಕೇಳಿದ್ದು ‘ಬಾಂಬ್ ’

ಮುಂಬೈನಲ್ಲಿ ಪೊಲೀಸರ ಅತಿಥಿಗಳಾದ ಕೇರಳ ಯುವಕರು

ವಾರ್ತಾಭಾರತಿವಾರ್ತಾಭಾರತಿ23 May 2017 2:26 PM IST
share
ಇವರು ಹೇಳಿದ್ದು ‘ಬಾಂಬೆ ’...ಅವರಿಗೆ ಕೇಳಿದ್ದು ‘ಬಾಂಬ್ ’

ಮುಂಬೈ,ಮೇ 23: ಕೇರಳದಿಂದ ಅದೇ ತಾನೇ ರೈಲಿನಲ್ಲಿ ಬಂದಿಳಿದಿದ್ದ ಕೇರಳದ ಆರು ಯುವಕರ ಗುಂಪು ಸಿಎಸ್‌ಟಿ ರೈಲುನಿಲ್ದಾಣದಲ್ಲಿ ನಿಂತು ಮಾತನಾಡುತ್ತಿದ್ದಾಗ ‘ಬಾಂಬೆ ’ಎಂದು ಹೇಳಿದ ತಪ್ಪಿಗಾಗಿ ರೈಲ್ವೆ ಪೊಲೀಸರ ಅತಿಥಿಗಳಾದ ಘಟನೆ ನಿನ್ನೆ ನಡೆದಿದೆ.

 ನಿನ್ನೆ ಮಧ್ಯಾಹ್ನ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಪನ್ವೇಲ್ ನಿಲ್ದಾಣದಲ್ಲಿ ಇಳಿದಿದ್ದ ಕೇರಳದ ಯುವಕರ ಗುಂಪು ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ತೆರಳಲು ಬೇರೊಂದು ರೈಲನ್ನು ಹತ್ತಿತ್ತು. ರೈಲು ಮುಂದಕ್ಕೆ ಚಲಿಸಿದಾಗ ಸಹಜವಾಗಿಯೇ ಅವರೆಲ್ಲ ಮಾತಿನಲ್ಲಿ ತೊಡಗಿದ್ದರು. ಅವರ ಮಾತಿನಲ್ಲಿ ‘ಬಾಂಬೆ ’ಶಬ್ದ ಪ್ರಸ್ತಾಪವಾಗಿದ್ದು, ಸಹ ಪ್ರಯಾಣಿಕರು ಅದನ್ನು ‘ಬಾಂಬ್’ಎಂದು ಗ್ರಹಿಸಿದ್ದರು. ಈ ಸಹಪ್ರಯಾಣಿಕರ ಪೈಕಿ ಓರ್ವ ಕುರ್ಲಾದಲ್ಲಿ ಇಳಿದು ಯುವಕರ ಗುಂಪು‘ಬಾಂಬ್’ ಬಗ್ಗೆ ಮಾತನಾಡುತ್ತಿತ್ತು ಎಂದು ಅಲ್ಲಿಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಧಿಕಾರಿ ಯುವಕರಿದ್ದ ಬೋಗಿಯ ಬಳಿಗೆ ಧಾವಿಸುವಷ್ಟರಲ್ಲಿ ಅದು ಮುಂದಕ್ಕೆ ಚಲಿಸಿತ್ತು. ಹೀಗಾಗಿ ಆತ ಸಿಎಸ್‌ಟಿಯಲ್ಲಿನ ರೈಲ್ವೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ.

 ರೈಲು ಸಿಎಸ್‌ಟಿ ತಲುಪಿದಾಗ ಬೋಗಿಯ ಬಳಿ ಧಾವಿಸಿದ್ದ ಅಲ್ಲಿಯ ರೈಲ್ವೆ ಪೊಲೀಸರು ಎಲ್ಲ ಆರೂ ಯುವಕರನ್ನು ವಶಕ್ಕೆ ತೆಗೆದುಕೊಂಡು ವಾಶಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿ ಸಿದ್ದರು. ಯುವಕರು ರೈಲು ಹತ್ತಿದ್ದ ಪನ್ವೇಲ್ ನಿಲ್ದಾಣ ವಾಶಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.

ಕೇರಳದಿಂದ ಸ್ನೇಹಿತನೋರ್ವ ದೂರವಾಣಿ ಕರೆ ಮಾಡಿ ಎಲ್ಲಿದ್ದೀರಿ ಎಂದು ವಿಚಾರಿಸಿದ್ದ, ಬಾಂಬೆ ಎಂದು ಉತ್ತರಿಸಿದ್ದೆ ಎಂದು ಯುವಕನೋರ್ವ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದ.

ಈ ಹುಡುಗ ಬಾಂಬೆ ಎಂದು ಹೇಳಿದ್ದ. ಅವರು(ಸಹಪ್ರಯಾಣಿಕರು) ಅದನ್ನು ಬಾಂಬ್ ಎಂದು ತಪ್ಪಾಗಿ ಗ್ರಹಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು ಎಂದು ಸೀನಿಯರ್ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ಯುವಕರ ಗುಂಪು 23 ದಿನಗಳ ಉರ್ದು ತರಬೇತಿಗಾಗಿ ರತ್ನಾಗಿರಿಯ ರಾಜಾಪುರಕ್ಕೆ ತೆರಳಲಿತ್ತು. ಅದಕ್ಕೂ ಮುನ್ನ ಮುಂಬೈಗೆ ಭೇಟಿ ನೀಡಿ ಜೆಜೆ ಆಸ್ಪತ್ರೆ ಸಮೀಪದ ಮದ್ರಸದಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಮಂಗಳವಾರ ಅವರು ನಗರದಿಂದ ನಿರ್ಗಮಿಸಲಿದ್ದರು ಎಂದರು.

 ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಕೂಡ ಈ ಯುವಕರನ್ನು ವಿಚಾರಣೆಗೊಳ ಪಡಿಸಿತ್ತು. ಔಪಚಾರಿಕತೆಗಳನ್ನು ಪೂರೈಸಿದ ಬಳಿಕ ಇಂದು ಈ ಯುವಕರನ್ನು ಬಿಡುಗಡೆಗೊಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X