ಪರೇಶ್ ರಾವಲ್ರ ಹೇಳಿಕೆ ಬಿಜೆಪಿಯ ಸರ್ವಾಧಿಕಾರವನ್ನು ತೋರಿಸುತ್ತಿದೆ: ಕಾಂಗ್ರೆಸ್
ಹೊಸದಿಲ್ಲಿ,ಮೇ 23: ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ರನ್ನು ಅಪಹಾಸ್ಯ ಮಾಡಿ ಪರೇಶ್ ರಾವಲ್ರು ಮಾಡಿದ್ದ ಟ್ವೀಟ್ ಬಿಜೆಪಿಯ ಸರ್ವಾಧಿಕಾರ ಮನೋಭಾವವನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಶೋಭಾ ಓಝಾ ಹೇಳಿದ್ದಾರೆ. ಸಿನೆಮಾ ತಾರೆಯರಿಗೆ ರಾಜಕೀಯ ಅರ್ಥವಾಗದ ಸಮಸ್ಯೆ ಇದೆಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದ್ದಾರೆ. ಇಂತಹ ಜನರು ರಾಜಕೀಯ ಮತ್ತು ಜನರ ಕುರಿತು ಏನು ಅರ್ಥ ಮಾಡಿಕೊಂಡಿದ್ದಾರೆ. ಪ್ರತಿಕ್ರಿಯೆ ನೀಡುವಾಗ ಇವರು ಸ್ವಯಂ ನಿಯಂತ್ರಿಸಿಕೊಳ್ಳಬೇಕಾಗಿದೆ ಎಂದು ಶರದ್ ಯಾದವ್ ಹೇಳಿದ್ದಾರೆ.
ಇದೇವೇಳೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪರೇಶ್ ರಾವಲ್ರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ದೇಶದ ಮೇಲೆ ದಯೆ ಇಲ್ಲದ ಮಹಿಳೆಯರಿಗೆ ಜನರು ಕಲ್ಲೆಸೆಯಲು ಬಯಸುವರೆಂದು ಸ್ವಾಮಿ ಹೇಳಿದ್ದಾರೆ.
ಈ ಹಿಂದೆ ಆರುಂಧತಿ ಕಾಶ್ಮೀರದಲ್ಲಿ ಸೈನ್ಯದ ಚಟುವಟಿಕೆಗಳನ್ನು ವಿಮರ್ಶಿಸಿದ್ದಕ್ಕೆ ಪರೇಶ್ ರಾವಲ್ ಆರುಂಧತಿ ವಿರುದ್ಧ ಟ್ವೀಟ್ ಮಾಡಿದ್ದರು.
Next Story