Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನ ಅತ್ಯಂತ ಆಪ್ತರು ಕೊಟ್ಟಷ್ಟು...

ನನ್ನ ಅತ್ಯಂತ ಆಪ್ತರು ಕೊಟ್ಟಷ್ಟು ನೋವನ್ನು ಈ ಕಾಯಿಲೆ ನನಗೆ ಕೊಡಲಿಲ್ಲ : ಮುಸಮ್ಮದ್ ಬೇಗಂ

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್24 May 2017 2:44 PM IST
share
ನನ್ನ ಅತ್ಯಂತ ಆಪ್ತರು ಕೊಟ್ಟಷ್ಟು ನೋವನ್ನು ಈ ಕಾಯಿಲೆ ನನಗೆ ಕೊಡಲಿಲ್ಲ : ಮುಸಮ್ಮದ್ ಬೇಗಂ

ನನ್ನ ಕೈಗಳಿಗೆ ಮೆಹಂದಿ ಹಚ್ಚಲು ಬಹಳಷ್ಟು ಸಮಯ ತೆಗೆದುಕೊಂಡಿತು. ಆದರೆ ನನ್ನ ಪತಿಗೆ ಅದು ಇಷ್ಟವಾಗುವುದೇ ಇಲ್ಲ. ‘‘ಅದನ್ನು ಅಡಗಿಸು ! ಅದು ಕಾಣುತ್ತಿದೆ’’ ಎಂದು ಯಾವತ್ತೂ ಹೇಳುತ್ತಿರುತ್ತಾರೆ. ನನಗೆ ನನ್ನ ರೋಗ, ನನ್ನ ಕೈ ಕಾಲುಗಳಲ್ಲಿರುವ ಬಿಳಿ ಕಲೆಗಳನ್ನು ಮುಚ್ಚಬೇಕಿತ್ತು.

ಜನರ ದ್ವೇಷದ ಭಾವನೆಯಿಂದ ನನ್ನನ್ನು ತಪ್ಪಿಸಿಕೊಳ್ಳುವುದರಲ್ಲಿಯೇ ನಾನು ನನ್ನ ಜೀವನ ಕಳೆದು ಬಿಟ್ಟೆ. ನನ್ನ ಪ್ರೀತಿಪಾತ್ರರ ನಿರ್ಲಕ್ಷ್ಯದಿಂದ ನನ್ನ ಹೃದಯವನ್ನು ಕಾಪಾಡಲು ನಾನು ಯತ್ನಿಸುತ್ತೇನೆ. ಪ್ರತಿ ಬಾರಿ ನಾನು ಗ್ರಾಮದಲ್ಲಿರುವ ಯಾವುದಾದರೂ ಸಮಾರಂಭದಲ್ಲಿ ಭಾಗಿಯಾಗದಾಗಲೂ ಜನರು ನನ್ನತ್ತ ಬೊಟ್ಟು ಮಾಡಿ ‘‘ಗುಣವಾಗದ ಕಾಯಿಲೆ’’ ಎಂದು ಹೀಗಳೆಯುತ್ತಿದ್ದರು.

ನಾನೆಷ್ಟು ನೊಂದಿದ್ದೇನೆ ಎಂದು ತಿಳಿಯುವ ಮನಸ್ಸು ಯಾರಿಗೂ ಇರಲಿಲ್ಲ. ಎಲ್ಲರೂ ಅವರಿಗೆ ತಿಳಿಯದೇ ಇದ್ದ ನನ್ನ ಕಷ್ಟದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿಯೇ ವ್ಯಸ್ತರಾಗುತ್ತಿದ್ದರು. ಸುಮಾರು 35 ವರ್ಷಗಳ ಹಿಂದೆ ನಾನು ನನ್ನ ಚರ್ಮದಲ್ಲಿ ಮೊದಲ ಬಾರಿ ಬಿಳಿ ಕಲೆಗಳನ್ನು ನೋಡಿದೆ. ನನ್ನ ಪತಿ ನೆಲದಲ್ಲಿ ಪ್ರತ್ಯೇಕವಾಗಿ ಮಲಗಲಾರಂಭಿಸಿದಾಗಲೇ ನಾನು ನನ್ನ ಬಗ್ಗೆ ಗಮನ ಹರಿಸಲು ಆರಂಭಿಸಿದೆ.

ನಾವು ಪ್ರತ್ಯೇಕವಾಗಿ ಮಲಗಿ 30 ವರ್ಷಗಳಾಗಿವೆ. ಯಾವಾಗಲೂ ನನ್ನ ಕೈಗೆ ಮೆಹಂದಿ ಬಳಿಯಲು ನನಗೆ ಹೇಗೆ ಕಷ್ಟವಾಗುತ್ತಿತ್ತೋ ಹಾಗೆಯೇ ಸಣ್ಣ ಹಾಸಿಗೆಯಲ್ಲಿ ಮಲಗಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದರು.

ನನ್ನ ಏಕೈಕ ಪುತ್ರಿಯ ವಿವಾಹದಲ್ಲೂ ಭಾಗವಹಿಸಲು ನನಗೆ ಅನುಮತಿಯಿರಲಿಲ್ಲ. ಆಕೆಯ ಮದುವೆಯ ದಿನ ಆಕೆಯೊಡನೆ ಮಾತನಾಡಲು ನಾನು ಕಾದಿದ್ದೆ. ಆಕೆಯ ಜೀವನದ ಅತ್ಯಂತ ಮಹತ್ವದ ದಿನದಂದು ಆಕೆ ನನ್ನನ್ನು ನಿರಾಸೆಗೊಳಿಸಲಾರಳು ಎಂದು ನನಗೆ ತಿಳಿದಿತ್ತು. ನಾನು ಕನ್ನಡಿಯನ್ನು ನೋಡುತ್ತಲೇ ಇರುತ್ತಿದ್ದೆ ಹಾಗೂ ನನ್ನ ಕಣ್ಣುಗಳ ಕೆಳಗೆ ಮೂಡಿದ್ದ ಹೊಸ ಬಿಳಿ ಕಲೆಗಳನ್ನು ಗಮನಿಸಿದ್ದೆ.

ನಾನು ಯಾವ ಸೀರೆ ಉಡಬೇಕೆಂದು ಆಕೆಯಲ್ಲಿ ಕೇಳಿದಾಗ ಆಕೆ ನನಗೆ ಎಲ್ಲವೂ ಚಂದ ಕಾಣುವುದೆಂದು ಹೇಳಿ ನಾನು ಮನೆಯಲ್ಲಿರಬೇಕು ಎಂಬುದನ್ನೂ ಸೇರಿಸಿದಳು. ನನ್ನಿಂದ ಆಕೆಯ ಮದುವೆ ಮುರಿದು ಬಿದ್ದರೆ ಆಕೆಗಿಂತ ನಾನು ಹೆಚ್ಚು ನೊಂದುಕೊಳ್ಳುತ್ತೇನೆಂದು ಹೇಳಿದಳು. ನನ್ನ ಮಗಳಿಗೆ ಆಗ 18 ವರ್ಷ ವಯಸ್ಸು.

ಆಕೆಯ ಎದುರು ಕೈಯ್ಯಲ್ಲಿ ಸೀರೆ ಹಿಡಿದುಕೊಂಡು ಕನ್ನಡಿಯೆದುರು ನಿಂತ ಮಗುವಿನಂತೆ ನನಗನಿಸಿತ್ತು. ಅದರ ನಂತರ ನಾನು ಕನ್ನಡಿ ನೋಡಲೇ ಇಲ್ಲ. ನನ್ನ ಮುಖ ಅಥವಾ ದೇಹದಲ್ಲಿ ಅದೆಷ್ಟು ಬಿಳಿ ಕಲೆಗಳಾಗಿವೆ ಎಂಬ ಬಗ್ಗೆ ಚಿಂತೆ ಮಾಡುವುದನ್ನೇ ಬಿಟ್ಟು ಬಿಟ್ಟೆ. ಈ ಕಾಯಿಲೆ ನನ್ನ ಮನಸ್ಸಿನಾಳಕ್ಕೆ ಹೋಗಿ ನನ್ನ ಆತ್ಮವನ್ನೇ ಘಾಸಿಗೊಳಿಸಿದ್ದರಿಂದ ನಾನು ನೋವನ್ನನುಭವಿಸುತ್ತಿದ್ದೆ.

ಜನರು, ಮುಖ್ಯವಾಗಿ ನನ್ನ ಆಪ್ತರು ನೀಡಿದಷ್ಟು ನೋವು ಈ ಕಾಯಿಲೆ ನನಗೆ ನೀಡಲಿಲ್ಲ. ಒಂದು ದಿನ ನನ್ನೊಡನೆ ಮಾತನಾಡುತ್ತಿದ್ದ ಮಹಿಳೆಯೊಬ್ಬಳು ಸಂಭಾಷಣೆಯನ್ನು ಅರ್ಧದಲ್ಲಿಯೇ ತುಂಡರಿಸಿ ಇಂತಹ ಒಂದು ಕಾಯಿಲೆಯಿಂದ ನರಳಲು ನಾನು ಶಾಪ ಪಡೆದಿದ್ದಿರಬೇಕೆಂದು ಹೇಳಿದಳು. ನನ್ನಂಥವಳೊಬ್ಬಳಿಗೆ ಇಂತಹ ಕಾಯಿಲೆ ಬಂದಿದ್ದನ್ನು ಆಕೆಗೆ ಒಪ್ಪಿಕೊಳ್ಳಲು ಕಷ್ಟವಾಗಿತ್ತು.

ಆಕೆಯನ್ನು ತಿದ್ದಿ ನಾನು ಈ ರೀತಿ ಹೇಳಿದೆ -‘‘ಸಾಯುವ ಮುನ್ನ ಜನರ ನಿಜವಾದ ಮುಖಗಳನ್ನು ನೋಡಲು ಸಾಧ್ಯವಾಗಿರುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ. ಈ ಜಗತ್ತಿನಲ್ಲಿ ಜನರು ಕೇವಲ ಚರ್ಮಕ್ಕಲ್ಲದೆ ಹೃದಯಕ್ಕೆ ಬೆಲೆ ನೀಡುವುದಿಲ್ಲವೆಂದು ನಾನು ಕಲಿತೆ.’’

- ಮುಸಮ್ಮದ್ ಬೇಗಂ  (65)

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X