Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸುಳ್ಳು ಸುದ್ದಿ ಓದಿ ಅರುಂಧತಿಯನ್ನು...

ಸುಳ್ಳು ಸುದ್ದಿ ಓದಿ ಅರುಂಧತಿಯನ್ನು ಜೀಪಿಗೆ ಕಟ್ಟಲು ಹೊರಟಿದ್ದ ಪರೇಶ್ ರಾವಲ್

ವಾರ್ತಾಭಾರತಿವಾರ್ತಾಭಾರತಿ24 May 2017 7:05 PM IST
share
ಸುಳ್ಳು ಸುದ್ದಿ ಓದಿ ಅರುಂಧತಿಯನ್ನು ಜೀಪಿಗೆ ಕಟ್ಟಲು ಹೊರಟಿದ್ದ ಪರೇಶ್ ರಾವಲ್

ನವದೆಹಲಿ, ಮೇ 24: ಖ್ಯಾತ ಲೇಖಕಿ ಅರುಂಧತಿ ರಾಯ್ ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆನ್ನಲಾದ ಸಂದರ್ಭ ಅವರು ನೀಡದೇ ಇದ್ದ ಸಂದರ್ಶನವೊಂದರ ಬಗ್ಗೆ ವರದಿಯಾಗಿದ್ದ ಒಂದು ಸುಳ್ಳು ಸುದ್ದಿಯನ್ನು ನಂಬಿ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ‘‘ಕಾಶ್ಮೀರದಲ್ಲಿ ಕಲ್ಲು ತೂರಾಟಗಾರನ ಬದಲು ಅರುಂಧತಿ ರಾಯ್ ಅವರನ್ನು ಜೀಪಿಗೆ ಕಟ್ಟಬೇಕು’’ ಎಂದು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ತಮ್ಮ ಟ್ವೀಟಿನಿಂದಾಗಿ ಪರೇಶ್ ರಾವಲ್ ಸಾಕಷ್ಟು ಮಂದಿಯ ವಿರೋಧ ಕಟ್ಟಿಕೊಳ್ಳಬೇಕಾಗಿಯೂ ಬಂದಿದೆಯಲ್ಲದೆ ಟ್ವಿಟ್ಟರಿಗರಿಂದ ಟೀಕಾಪ್ರಹಾರವನ್ನೇ ಎದುರಿಸುತ್ತಿದ್ದಾರಲ್ಲದೆ ಅವರ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಟ್ವಿಟ್ಟರ್ ಯುದ್ಧವೇ ನಡೆಯುತ್ತಿದೆ.

ಆದರೆ ದಿ ವೈರ್ ನೊಂದಿಗೆ ಮಾತನಾಡಿದ ಅರುಂಧತಿ ರಾಯ್ ಎಲ್ಲವನ್ನೂ ‘ಅಸಂಬದ್ಧ’ವೆಂದು ಬಣ್ಣಿಸಿದ್ದು ತಾನು ಇತ್ತೀಚೆಗೆ ಶ್ರೀನಗರಕ್ಕೆ ಹೋಗಿಯೇ ಇಲ್ಲ ಹಾಗೂ ಕಳೆದ ವರ್ಷ ಔಟ್ ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನು ಹೊರತುಪಡಿಸಿ ಕಾಶ್ಮೀರದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.

ದಿ ನ್ಯಾಷನಲಿಸ್ಟ್ ಇದರ ಫೇಸ್ ಬುಕ್ ಪುಟವೊಂದರಲ್ಲಿ ‘‘70 ಲಕ್ಷ ಸೈನಿಕರಿರುವ ಭಾರತೀಯ ಸೇನೆಗೆ ಕಾಶ್ಮೀರದಲ್ಲಿನ ಆಜಾದಿ ಗ್ಯಾಂಗನ್ನು ಸೋಲಿಸಲು ಆಗುತ್ತಿಲ್ಲ " ಅರುಂಧತಿ ರಾಯ್ ಪಾಕಿಸ್ತಾನಿ ದೈನಿಕವೊಂದಕ್ಕೆ ಹೇಳಿಕೆ ನೀಡಿದ್ದಾರೆ’’ ಎಂದು ಬರೆದಿತ್ತು. ಇದನ್ನು ಪರೇಶ್ ರಾವಲ್ ಟ್ವೀಟ್ ಮಾಡಿದ್ದರು. ಈ ಸುದ್ದಿಯ ಮೂಲ ಬಲಪಂಥೀಯ ನಕಲಿ ಸುದ್ದಿಗಳ ತಾಣವಾಗಿರುವ ಪೋಸ್ಟ್ ಕಾರ್ಡ್.ನ್ಯೂಸ್ ಆಗಿದ್ದು ಅದು ಮೇ 17ರಂದು ಇದೇ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಐಶ್ವರ್ಯಾ ಎಸ್ ಎಂಬ ಹೆಸರಿನೊಂದಿಗೆ ಪ್ರಕಟಿಸಿತ್ತು.

ಪೋಸ್ಟ್ ಕಾರ್ಡ್. ನ್ಯೂಸ್ ಈ ಲೇಖನದ ಆಧಾರಕ್ಕೆ ಯಾವುದೇ ಲಿಂಕ್ ನೀಡದೇ ಹೋದರೂ ಇಂತಹುದೇ ಒಂದು ಲೇಖನ ಅದೇ ದಿನ ಆನಂದ್ ಎಂಬವರ ಹೆಸರಿನಲ್ಲಿ ಇನ್ನೊಂದು ಹಿಂದುತ್ವವಾದಿ ನಕಲಿ ಸುದ್ದಿ ತಾಣ ಸತ್ಯವಿಜಯಿ.ಕಾಂನಲ್ಲಿ ಪ್ರಕಟವಾಗಿತ್ತಲ್ಲದೆ ದಿಇಂಡಿಯನ್‌ವಾಯ್ಸೊ. ಕಾಂ ನಲ್ಲಿ ಅಂಕಿತಾ ಕೆ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು.

ಹೀಗೆ ಹಲವು ಬಲಪಂಥೀಯ ಸುಳ್ಳು ಸುದ್ದಿಗಳ ತಾಣವು ಇಂತಹುದೇ ಸುದ್ದಿ ಪ್ರಕಟಿಸಿದ್ದರೆ ಇಂಟರ್ನೆಟ್‌ಹಿಂದು.ಇನ್ ಸ್ವಲ್ಪ ವಿಭಿನ್ನವಾಗಿ ಬರೆದಿದ್ದು ಟೈಮ್ಸ್ ಆಫ್ ಇಸ್ಲಾಮಾಬಾದ್ ಸುದ್ದಿಯೊಂದರ ಲಿಂಕ್ ನೀಡಿತ್ತು. ಈ ಪಾಕಿಸ್ತಾನದ ಪತ್ರಿಕೆ ಮೇ 16ರಲ್ಲಿ ಮೇಲಿನ ಶೀರ್ಷಿಕೆಯಲ್ಲಿಯೇ ಸುದ್ದಿ ಪ್ರಕಟಿಸಿತ್ತಲ್ಲದೆ ಕೆಳಗೆ ಕೇವಲ ‘ನ್ಯೂಸ್ ಡೆಸ್ಕ್’ ಎಂದು ಬರೆದಿತ್ತು ಹಾಗೂ ಅರುಂಧತಿ ಇತ್ತೀಚೆಗೆ ಶ್ರೀನಗರಕ್ಕೆ ಹೋಗಿದ್ದಾಗ ಹೇಳಿಕೆ ನೀಡಿದ್ದರೆಂದು ಹೇಳಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X