Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಇಂಡಿಯನ್ ಸೋಶಿಯಲ್ ಫೋರಮ್ ಸತತ ಪ್ರಯತ್ನ:...

ಇಂಡಿಯನ್ ಸೋಶಿಯಲ್ ಫೋರಮ್ ಸತತ ಪ್ರಯತ್ನ: ಕೃಷ್ಣ ಕುಮಾರ್ ಮೃತದೇಹ ಹುಟ್ಟೂರಿಗೆ

ವಾರ್ತಾಭಾರತಿವಾರ್ತಾಭಾರತಿ24 May 2017 10:27 PM IST
share
ಇಂಡಿಯನ್ ಸೋಶಿಯಲ್ ಫೋರಮ್ ಸತತ ಪ್ರಯತ್ನ: ಕೃಷ್ಣ ಕುಮಾರ್ ಮೃತದೇಹ ಹುಟ್ಟೂರಿಗೆ

ಸೌದಿ ಅರೇಬಿಯಾ, ಮೇ 24: ಕರ್ನಾಟಕ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರ ನೆರವಿನಿಂದ ಕಳೆದ ಹನ್ನೊಂದು ತಿಂಗಳುಗಳ ಕಾಲ ಕಡತ ವಿಲೇವಾರಿಯಾಗದೆ ಆಸ್ಪತ್ರೆಯ ಶವಾಗಾರದಲ್ಲಿದ್ದ ಕೃಷ್ಣ ಕುಮಾರ್ ಅವರ ಮೃತದೇಹವು ಭಾರತ ತಲುಪಿ ಕುಟುಂಬಸ್ಥರ ಸಮಾಧಾನಕ್ಕೆ ಕಾರಣವಾಗಿದೆ.

ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ಮೃತದೇಹ ರವಾನೆಗೆ ಬೇಕಾಗಿದ್ದ ಎಲ್ಲಾ ಕಡತಗಳು ಮತ್ತು ಮೃತ ದೇಹ ರವಾನೆಗೆ ತೊಡಕಾಗಿದ್ದ ವೀಸಾ ಮಾಲಕ  ಕೇಂದ್ರ ವಿದೇಶಾಂಗ ಇಲಾಖೆಯ ಮನವಿಗೂ ಸ್ಪಂದಿಸದಿದ್ದಾಗ ಕೊನೆಗೆ ಇಂಡಿಯನ್ ಸೋಶಿಯಲ್ ಪೋರಂ ಕರ್ನಾಟಕ  ಘಟಕವು ಕಡತಗಳನ್ನು ಸರಿಪಡಿಸಿ ಮೃತದೇಹವನ್ನು ಭಾರತ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಹಮ್ಮದ್ ಬಾವ ಕೆಸಿ ರೋಡ್ ನೇತೃತ್ವದಲ್ಲಿ ಕಲಂದರ್ ನೌಶಾದ್ ಕರ್ನಿರೆ, ಶಾಹುಲ್ ಹಮೀದ್ ಕಾಶಿಪಟ್ನ ಕಳೆದ ನಾಲ್ಕು ತಿಂಗಳುಗಳಿಂದ ಸೌದಿ ಅರೇಬಿಯಾದ ಜೇಸಾನ್ ನ ಸರಕಾಇ  ಕಚೇರಿ, ನ್ಯಾಯಾಲಯ, ಪೊಲೀಸ್ ಇಲಾಖೆ, ಸೌದಿ ಅಮೀರ್ ರ ಕಚೇರಿಗೆ ಅಲೆದಾಡಿ ಕೊನೆಗೂ ಯಶಸ್ವಿಯಾದರು. ಇವರಿಗೆ ಜಿದ್ದ ಭಾರತ ರಾಯಭಾರಿ ಕಚೇರಿಯ ಕಾನ್ಸುಲೇಟ್ ಸದಸ್ಯರು ಆಗಿರುವ ಹನೀಫ್ ಮಂಜೇಶ್ವರ ಇವರು ಸೂಕ್ತ ಮಾರ್ಗದರ್ಶನ ನೀಡಿದ್ದರು. 

ಘಟನೆಯ ಹಿನ್ನಲೆ:

ಸೌದಿ ಅರೇಬಿಯಾದ ಅಶೀರ್ ಪ್ರಾಂತ್ಯದ ಜೀಸಾನ್ ನ ಸಬಿಯ ಎಂಬಲ್ಲಿ  ಟೈಲರ್  ವೃತ್ತಿ ನಡೆಸುತ್ತಿದ್ದ ಕೃಷ್ಣ ಕುಮಾರ್ ಎಂಬವರು ತನ್ನ ವೀಸಾ ಮಾಲಕನ ( ಕಫೀಲ್ ) ನ ಪೆಟ್ರೋಲ್ ಬಂಕ್ ಹಾಗೂ ಸೂಪರ್ ಮಾರ್ಕೆಟ್ ಒಂದನ್ನು ನೋಡಿಕೊಳ್ಳುವ ಮೇಲುಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು. ಆಷ್ಟೇ ಅಲ್ಲದೆ ಇತರ ಉದ್ಯಮ ನಡೆಸುವುದ್ದಕ್ಕಾಗಿ ಕಫೀಲ್ ಬಳಿಯಿಂದ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು (60,000 ಸೌದಿ ರಿಯಾಲ್) ಸಾಲವಾಗಿ ಸೌದಿ ನಿಯಮಾವಳಿಗಳ ಪ್ರಕಾರ ಅಂದರೆ ಸಾಕ್ಷಿಗಳ ಸಮ್ಮುಖದಲ್ಲಿ ಪಡೆದಿದ್ದರು. ತನ್ನ ಉದ್ಯಮದಲ್ಲಿ ಸೋತು ನೆಲಕಚ್ಚಿದ ಕುಮಾರ್ ರಿಗೆ ಕೊಟ್ಟ ಸಾಲವನ್ನು ತೀರಿಸುವಂತೆ ಕಫೀಲ್ ಒತ್ತಡ ಹೇರುತ್ತಿದ್ದ ಕೊನೆಗೆ ಸಾಲವೂ ತೀರಿಸಲಾಗದೆ ಒತ್ತಡ ಸಹಿಸಲಾಗದೆ ತನ್ನ ಕೊಠಡಿಯಲ್ಲಿ  2016ನೆ ಜೂನ್ ತಿಂಗಳಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದರು. 

ಮೃತದೇಹ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಗೆ ಕೇರಳ ಮೂಲದ ಎಲ್ಲ ಸಂಘಟನೆಗಳು ಮೊದಲಾಗಿ ಪ್ರಯತ್ನ ಪಟ್ಟರೂ 60,000 ರಿಯಾಲ್ ನೀಡದೆ ಕಳುಹಿಸುವುದಿಲ್ಲ ಎಂಬುವುದು  ಕಫೀಲ್ ನ ಉತ್ತರವಾಗಿತ್ತು  ಮತ್ತು ಆತ ಯಾರ ಮನವಿಗೂ ಕಿವಿಗೊಡುತ್ತಿರಲಿಲ್ಲ.

ಭಾರತದಿಂದ ಇಷ್ಟೊಂದು ದೊಡ್ಡ ಮೊತ್ತವನ್ನು ಬಡವರಾಗಿರುವ ಕೃಷ್ಣ ಕುಮಾರ್ ಕುಟುಂಬಕ್ಕೆ ಹೊಂದಿಸಲು ಸಾಧ್ಯವಾಗದೆ ಇದ್ದುದರಿಂದ  ಕೇರಳ ಮೂಲದ ಕೆಲವು ಸಂಘಟನೆಗಳು ಸೌದಿ ಕಾನೂನಿನ ಪ್ರಕಾರ ಮುಂದುವರೆದರೂ ವೀಸಾ ಮಾಲಕನ ಮಾತಿನ ಮುಂದೆ ಅವರ ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಕೊನೆಗೆ ಭಾರತದ ರಾಯಭಾರ ಕಚೇರಿ, ಭಾರತದ ವಿದೇಶಾಂಗ ಇಲಾಖೆ ಮೂಲಕ ಒತ್ತಡ ಹೇರಿದರೂ ಕಫೀಲ್ ಒಪ್ಪಲಿಲ್ಲ. ಕೇರಳದ ಸಂಘಟನೆಯೊಂದರ ಪದಾಧಿಕಾರಿಗಳು ಸೌದಿ ಅರೇಬಿಯಾದ ಖಮೀಸ್ ಮುಶಾಯ್ತ್, ಅಭಾ ಪ್ರಾಂತ್ಯದಲ್ಲಿ ಕಳೆದ 30 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಇಂಡಿಯನ್ ಸೋಶಿಯಲ್ ಫೋರಮ್ ನ  ಮುಹಮ್ಮದ್ ಬಾವ ಕೆಸಿ ರೋಡ್ ರನ್ನು ಸಂಪರ್ಕಿಸುತ್ತಾರೆ. 

ಕುಮಾರ್ ಅವರ ಪತ್ನಿ ಹಾಗೂ ಪುತ್ರನ ಒಪ್ಪಿಗೆಯಂತೆ ವಾಕಾಲ ಪಡೆದ ಮಹಮ್ಮದ್ ಬಾವ ಕೆಸಿ ರೋಡ್,  ಖಲಂದರ್ ನೌಶಾದ್ ಕರ್ನಿರೆ ಹಾಗೂ ಶಾಹುಲ್ ಹಮೀದ್ ಕಾಶಿಪಟ್ನ, ಇವರ ತಂಡವನ್ನು ರಚಿಸಿ ಕೃಷ್ಣ ಕುಮಾರ್ ಕುಟುಂಬದೊಂದಿಗೆ ನಿರಂತರ ಸಂಪರ್ಕದೊಂದಿಗೆ ಸೌದಿ ಅರೇಬಿಯಾದ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಮೃತದೇಹ ಸಂರಕ್ಷಿಸಿದ ಆಸ್ಪತ್ರೆಯ ಬಿಲ್ ಹಾಗೂ ಭಾರತಕ್ಕೆ ತಲುಪಿಸುವ ಕಾರ್ಗೋ ವೆಚ್ಚವನ್ನು ತಾನೇ ನೀಡುವುದಾಗಿ ಒಪ್ಪಿಕೊಂಡು ಸೌದಿ ಪೊಲೀಸ್ ಇಲಾಖೆಯ ಮುಂದಿನ ತನಿಖೆಗೆ ಸಹಕಾರಿಯಾಗುವಂತೆ ಮಾಡಲಾಯಿತು. 

ಮೃತದೇಹ ಶೇಖರಣೆಗೆ ತಗುಲಿದ ಆಸ್ಪತ್ರೆಯ ವೆಚ್ಚವನ್ನು ಮತ್ತು ಹುಟ್ಟೂರಿಗೆ ರವಾನಿಸಲಾಗುವ ಕಾರ್ಗೋ ವೆಚ್ಚವನ್ನು ವೀಸಾ ಮಾಲಕನ ಮೂಲಕ ಪಡೆದು ಕಳೆದ 10-11 ತಿಂಗಳುಗಳಿಂದ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಕೇರಳದ ಮವ್ವಾನಾಡಿನ ಹುಟ್ಟೂರು ತಲುಪಿಸುವಲ್ಲಿ ಯಶಸ್ವಿಯಾದರು.

ಇಂಡಿಯನ್ ಸೋಶಿಯಲ್ ಫೋರಮ್ ನ ತಂಡದ ಈ ಕಾರ್ಯವನ್ನು ಕೃಷ್ಣ ಕುಮಾರ್ ಅಕಾಲಿಕ ನಿಧನದಿಂದ ಹಾಗೂ ಮೃತದೇಹ ಪಡೆಯಲು ಇದ್ದ ತೊಡಕುಗಳಿಂದ ಕಂಗಾಲಾಗಿದ್ದ  ಅವರ ಪತ್ನಿ ಹಾಗೂ ಪುತ್ರ ಸಚಿನ್ ರವರು ಇಂಡಿಯನ್ ಸೋಶಿಯಲ್ ಫೋರಮ್ ನ ಸಹಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಹಾಗೂ ಮೃತದೇಹ ಭಾರತ ತಲುಪಲಿದ್ದು, ಮವ್ವನಾಡಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X