ಪ್ರತ್ಯೇಕ ಪ್ರಕರಣ: ಮೂವರು ಯುವತಿಯರ ನಾಪತ್ತೆ
ಉಡುಪಿ, ಮೇ 26: ಉಡುಪಿ ಮಿಷನ್ ಕಂಪೌಂಡ್ ಒಂದನೆ ಕ್ರಾಸ್ ಬಳಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಕಾಡಬೆಟ್ಟು ಬಾಡಿಗೆ ಮನೆ ನಿವಾಸಿ ಹನುಮಂತ ಎಂಬವರ ಪತ್ನಿ ಮಂಜುಳ (20) ಎಂಬವರು ಮೇ 17ರಂದು ಊಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಶೇಡಿಮನೆ ಗ್ರಾಮದ ಗೌರಿ ಕ್ಯಾಶ್ಯೂ ಕಾರ್ಖಾನೆ ಉದ್ಯೋಗಿ ದೀಪಿಕಾ ಎಂಬಾಕೆ ಮೇ 25ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಕಾರ್ಖಾನೆಯಿಂದ ಬ್ಯಾಂಕ್ಗೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮುಡಾರು ಗ್ರಾಮ ಬಜಗೊಳಿಯ ರೇಷ್ಮಾ (26) ಎಂಬವರು ಮೇ 11ರಂದು ಮಧ್ಯಾಹ್ನ ಮೈಸೂರಿನಲ್ಲಿ ಕರ್ನಾಟಕ ಬ್ಯಾಂಕ್ ಪರೀಕ್ಷೆ ಬರೆಯುವ ಬಗ್ಗೆ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮೈಸೂರಿಗೂ ಹೋಗದೆ ವಾಪಾಸ್ ಮನೆಗೂ ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.