Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಿಎಸ್‌ಟಿ: ಟಿವಿ, ಎಸಿ ದುಬಾರಿ,...

ಜಿಎಸ್‌ಟಿ: ಟಿವಿ, ಎಸಿ ದುಬಾರಿ, ಸ್ಮಾರ್ಟ್‌ಪೋನ್ ಅಗ್ಗ

ವಾರ್ತಾಭಾರತಿವಾರ್ತಾಭಾರತಿ28 May 2017 7:50 PM IST
share
ಜಿಎಸ್‌ಟಿ: ಟಿವಿ, ಎಸಿ ದುಬಾರಿ, ಸ್ಮಾರ್ಟ್‌ಪೋನ್ ಅಗ್ಗ

ಹೊಸದಿಲ್ಲಿ: ಹೊಸ ಜಿಎಸ್‌ಟಿ ತೆರಿಗೆ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬರುವುದರಿಂದ ತಂಪು ಪಾನೀಯಗಳು ಹಾಗೂ ಗ್ರಾಹಕ ವಸ್ತುಗಳಾದ ಟಿವಿ, ಹವಾನಿಯಂತ್ರಣ ಯಂತ್ರ, ವಾಷಿಂಗ್ ಮಿಷಿನ್ ಹಾಗೂ ಫ್ರಿಡ್ಜ್ ದುಬಾರಿಯಾಗಲಿದೆ. ಆದರೆ ಸ್ಮಾರ್ಟ್‌ಫೋನ್, ಸಣ್ಣ ಕಾರುಗಳು ಹಾಗೂ ದಿನಬಳಕೆ ವಸ್ತುಗಳು ಜುಲೈನಿಂದ ಅಗ್ಗವಾಗಲಿವೆ.

ಪ್ರಸ್ತಾವಿತ ತೆರಿಗೆ ದರಗಳ ಬಗ್ಗೆ ನಡೆಸಿದ ವಿಶ್ಲೇಷಣೆಯಿಂದ ಈ ಅಂಶ ದೃಢಪಟ್ಟಿದೆ. 1200 ಸರಕು ಹಾಗೂ 500 ಸೇವೆಗಳ ತೆರಿಗೆದರವನ್ನು ಜಿಎಸ್‌ಟಿ ಮಂಡಳಿ ಈಗಾಗಲೇ ಅಂತಿಮಪಡಿಸಿದೆ. ದಿನಬಳಕೆ ವಸ್ತುಗಳಾದ ಸೋಪು, ಟೂತ್‌ಪೇಸ್ಟ್ ಅಗ್ಗವಾಗಲಿದ್ದು, ತಾಜಾ ಹಣ್ಣುಗಳು, ತರಕಾರಿ, ಬೇಳೆಕಾಳು, ಬ್ರೆಡ್ ಹಾಗೂ ತಾಜಾ ಹಾಲು ಮುಂತಾದ ವಸ್ತುಗಳನ್ನು ತೆರಿಗೆ ವಿನಾಯ್ತಿ ಪಟ್ಟಿಯಲ್ಲಿ ಮುಂದುವರಿಸಲಾಗಿದೆ.

ಎಕಾನಮಿ ದರ್ಜೆಯ ವಿಮಾನಯಾನ ದರಗಳು ಸ್ವಲ್ಪ ಅಗ್ಗವಾಗಲಿದ್ದು, ಅಂತೆಯೇ ಟ್ಯಾಕ್ಸಿ ಸೇವೆಯ ಮೇಲಿನ ತೆರಿಗೆಯನ್ನೂ ಶೇಕಡ 5ಕ್ಕೆ ಇಳಿಸಲಾಗಿದೆ. ಪ್ರಸಕ್ತ ಶೇಕಡ 6ರಷ್ಟು ಸೇವಾತೆರಿಗೆ ವಿಧಿಸಲಾಗುತ್ತಿದೆ. ಶೂನ್ಯ ತೆರಿಗೆದರದ ಪಟ್ಟಿಯಲ್ಲಿರುವ ಆಹಾರಧಾನ್ಯಗಳು ಅಗ್ಗವಾಗಲಿದ್ದು, ಇದೀಗ ಖರೀದಿದಾರರು ಶೇಕಡ 2-5ರವರೆಗೆ ರಾಜ್ಯ ತೆರಿಗೆ ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದು ರದ್ದಾಗಲಿದೆ. 1200 ಸರಕು ಹಾಗೂ 500 ಸೇವೆಗಳಿಗೆ ಶೇಕಡ 5,12,18 ಮತ್ತು ಶೇಕಡ 28ರ ತೆರಿಗೆಯನ್ನು ಜಿಎಸ್‌ಟಿ ಮಂಡಳಿ ಅಂತಿಮಪಡಿಸಿದೆ.

ಆದರೆ ಸಂಸ್ಕರಿತ ಆಹಾರ, ಸಿಹಿತಿನಸುಗಳು, ಐಸ್‌ಕ್ರೀಂಗಳ ಮೇಲಿನ ತೆರಿಗೆಯನ್ನು ಶೇಕಡ 22ರಿಂದ 18ಕ್ಕೆ ಇಳಿಸಲಾಗಿದೆ. ವೈಯಕ್ತಿಕ ಬಳಕೆಯ ಶಾಂಪೂ, ಸುಗಂಧದ್ರವ್ಯಯ, ಪ್ರಸಾದನ ಸಾಧನಗಳು ದುಬಾರಿಯಾಗಲಿದ್ದು, ಶೇಕಡ 28ರ ತೆರಿಗೆ ವಿಧಿಸಲಾಗುತ್ತಿದೆ. ಇದುವರೆಗೆ ಶೇಕಡ 22ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಆಹಾರಧಾನ್ಯಗಳ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಕೂಡಾ ಅಗ್ಗವಾಗಲಿವೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ನಿರ್ಮಿಸಿದ ಕಟ್ಟಡಗಳ ವಹಿವಾಟಿಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈಗ ಶೇಕಡ 15ರಷ್ಟು ಸೇವಾ ತೆರಿಗೆ ಅನ್ವಯವಾಗುತ್ತಿತ್ತು.

ವಿದ್ಯುತ್‌ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತೆರಿಗೆ ಶೇಕಡ 14ರಿಂದ 12ಕ್ಕೆ ಇಳಿದರೆ, ಸೌರ ಪ್ಯಾನಲ್‌ಗಳ ತೆರಿಗೆ 0-5 ಶೇಕಡದಿಂದ 18 ಶೇಕಡಕ್ಕೆ ಏರಿಕೆ ಕಂಡಿದೆ. ಸೋಪು ಮತ್ತು ಟೂತ್‌ಪೇಸ್ಟ್ ಮೇಲಿನ ತೆರಿಗೆ ಶೇಕಡ 25-26ರಿಂದ ಶೇಕಡ 18ಕ್ಕೆ ಇಳಿಯಲಿದೆ.

ಔಷಧಿಗಳ ತೆರಿಗೆ ಶೇಕಡ 13ರಿಂದ 12ಕ್ಕೆ ಇಳಿದರೆ, ಸ್ಮಾರ್ಟ್‌ಫೋನ್‌ಗಳ ಮೇಲಿನ ತೆರಿಗೆ ಶೇಕಡ 13.5ರಿಂದ 12ಕ್ಕೆ ಕಡಿಮೆಯಾಗಲಿದೆ. ಪೂಜಾಸಾಮಾನುಗಳು, ಹವನ ಸಾಮಗ್ರಿಗಳು, ಬಿಂದಿ, ಕುಂಕುಮಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಮನೋರಂಜನಾ ಕ್ಷೇತ್ರದ ಮೇಲೆ, ಕೇಬಲ್ ಹಾಗೂ ಡಿಟಿಎಚ್ ಮೇಲಿನ ತೆರಿಗೆ ಕೂಡಾ ಶೇಕಡ 18ಕ್ಕೆ ಇಳಿಯಲಿದೆ. ಪ್ರಸಕ್ತ 10-30 ಶೇಕಡ ತೆರಿಗೆ ಹಾಗೂ ಶೇಕಡ 15ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿದೆ,

ಪಂಚತಾರಾ ಹೋಟೆಲ್‌ಗಳ ತೆರಿಗೆ ಪ್ರಮಾಣ ಹೆಚ್ಚಳವಾದರೆ, ನಾನ್ ಎಸಿ ರೆಸ್ಟೋರೆಂಟ್‌ಗಳ ಮೇಲಿನ ತೆರಿಗೆ ಕಡಿಮೆಯಾಗಲಿದೆ. ಈಗ 12.5ರಿಂದ 20 ಶೇಕಡ ಇರುವ ರೆಸ್ಟೋರೆಂಟ್ ಮೇಲಿನ ತೆರಿಗೆ ಶೇಕಡ 6ಕ್ಕೆ ಇಳಿಯಲಿದೆ. ಮದ್ಯಸರಬರಾಜು ಮಾಡುವ ಲೈಸನ್ಸ್ ಹೊಂದಿದ ಎಸಿ ಹೋಟೆಲ್‌ಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಎಲ್ಲ ಪಂಚತಾರಾ ಹೋಟೆಲ್‌ಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X