Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನ ಕಣ್ಣೀರನ್ನೆಲ್ಲ ಕುಡಿದು ಖಾಲಿ...

ನನ್ನ ಕಣ್ಣೀರನ್ನೆಲ್ಲ ಕುಡಿದು ಖಾಲಿ ಮಾಡಿದ್ದೇನೆ, ಹಾಗಾಗಿ ಈಗ ನಗುತ್ತೇನೆ : ಉತ್ತಮ್ ಚಂದ್ರ ದಾಸ್

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್29 May 2017 1:08 PM IST
share
ನನ್ನ ಕಣ್ಣೀರನ್ನೆಲ್ಲ ಕುಡಿದು ಖಾಲಿ ಮಾಡಿದ್ದೇನೆ, ಹಾಗಾಗಿ ಈಗ ನಗುತ್ತೇನೆ : ಉತ್ತಮ್ ಚಂದ್ರ ದಾಸ್

ಮೊದಲ ದಿನ ನಾನಿಲ್ಲಿ ಕೆಲಸಕ್ಕೆ ಬಂದಾಗ ನನ್ನ ತಂದೆ ಹಿಂದೆ ಕೆಲಸ ಮಾಡುತ್ತಿದ್ದ ಸೇತುವೆಯ ಪಕ್ಕ ಕುಳಿತು ಅತ್ತಿದ್ದೆ. ನನ್ನ ತಂದೆ ಶೂ ಪಾಲಿಷ್ ಹೇಗೆ ಮಾಡುತ್ತಿದ್ದರೆಂಬ ನೆನಪುಗಳಿಲ್ಲದೆ ಹೇಗೆ ಕೆಲಸ ಮಾಡುವುದು ಎಂದು ನನಗೆ ತೋಚುತ್ತಿರಲಿಲ್ಲ.

ಮಳೆಗಾಲದ ಸಂದರ್ಭದಲ್ಲಿ ನನ್ನ ತಂದೆ ಅವರ ಹೆಗಲಲ್ಲಿ ನನ್ನನ್ನು ಕೂರಿಸಿ ಶಾಲೆಗೆ ಕರೆದೊಯ್ಯುತ್ತಿದ್ದರು. ನಮ್ಮ ಶಾಲೆಯಲ್ಲಿ ಮಳೆಗಾಲದ ಸಂದರ್ಭ ನಮ್ಮ ಪುಸ್ತಕಗಳನ್ನು ಪ್ಲಾಸ್ಟಿಕ್ ಲಕೋಟೆಯೊಳಗೆ ಇಡಬೇಕಿತ್ತು. ಶಾಲೆಯ ಟಿನ್ ಶೀಟಿನ ಮಾಡಿನ ತೂತುಗಳಿಂದ ಮಳೆ ನೀರು ಒಳಗೆ ಬೀಳುತ್ತಿತ್ತು. ಆದರೆ ನಾವು ಪದ್ಯಗಳನ್ನು ಓದುವುದನ್ನು ನಿಲ್ಲಿಸಿರಲಿಲ್ಲ.

ನಾನು ದೊಡ್ಡ ವ್ಯಕ್ತಿಯಾಗಬೇಕೆಂದು ನನ್ನ ತಂದೆ ಯಾವತ್ತೂ ಹೇಳುತ್ತಿದ್ದರು. ಅವರು ಸತ್ತು ಏಳು ದಿನಗಳ ನಂತರ ನಾನು ತುಂಬಾ ದೊಡ್ಡವನಾದೆ. ನಮಗೆ ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ನನ್ನ ಕಿರಿಯ ಸಹೋದರನಿಗೆ ಜ್ವರವಿತ್ತು ಹಾಗೂ ತಾಯಿಗೆ ಏನು ಮಾಡುವುದೆಂದು ತೋಚುತ್ತಿರಲಿಲ್ಲ. ನನ್ನ ತಂದೆಯ ಪೆಟ್ಟಿಗೆ ನನಗಿಂತ ಭಾರವಿತ್ತು.

ನನ್ನ ಸಹಪಾಠಿಗಳು ಶಾಲೆಗೆ ಹೋಗುವಾಗ ನನ್ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ನಾನು ಶಾಲೆಗೆ ಹೋಗಿ ಪದ್ಯ ಕಲಿಯಬೇಕಿತ್ತು, ದೊಡ್ಡ ವ್ಯಕ್ತಿಯಾಗಬೇಕಿತ್ತು ಆದರೆ ನಾನು ಮಗುವಿನಂತೆ ಅತ್ತು ಬಿಟ್ಟೆ. ಮೊದಲ ಗ್ರಾಹಕ ಆತನ ಶೂ ನನಗೆ ಪಾಲಿಷ್ ಮಾಡಲು ನೀಡಿದಾಗ ನನ್ನ ಕೈಗಳು ನಡುಗುತ್ತಿದ್ದವು ಹಾಗೂ ಆತ ನನ್ನನ್ನು ‘ಬ್ಲಡ್ಡಿ ಕಾಬ್ಲರ್’ ಎಂದು ಗದರಿದಾಗ ನನಗೆ ಕಣ್ಣೀರು ತಡೆಯಲಾಗಲಿಲ್ಲ. ಆತ ತನ್ನ ಶೂಗಳನ್ನು ನನಗೆ ಏನೂ ಹಣ ನೀಡದೆ ತೆಗೆದುಕೊಂಡು ಹೋದ. ಅಲ್ಲಿದ್ದ ಇತರ ಮಾರಾಟಗಾರರು ನನ್ನತ್ತ ಕರುಣೆಯಿಂದ ನೋಡಿದರು.

ನನಗೆ ಶಾಲೆಗೆ ಓಡಿ ಹೋಗಿ, ಮಳೆಯಲ್ಲಿ ನೆನೆದು ಪದ್ಯ ಕಲಿಯಬೇಕೆಂದೆನಿಸಿತು. ಆಗ ಒಬ್ಬ ವ್ಯಕ್ತಿ ಬಂದ. ಆತ ನೋಡಲು ಅಪಾಯಕಾರಿಯಂತೆ ಕಾಣುತ್ತಿದ್ದ, ಆತನ ದನಿಯೂ ಗಡುಸಾಗಿತ್ತು. ತನ್ನ ಶೂ ಅನ್ನು ಕನ್ನಡಿಯಂತೆ ಹೊಳೆಯುವ ಹಾಗೆ ಪಾಲಿಷ್ ಮಾಡಲು ಆತ ಹೇಳಿದ. ನಾನು ತುಟಿ ಕಚ್ಚಿದೆ, ನನ್ನ ಕಣ್ಣೀರು ಅದುಮಿ ಹಿಡಿದೆ ಹಾಗೂ ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ. ಆತ ಪುನಃ ಪಾಲಿಷ್ ಮಾಡಲು ಹೇಳಿದ. ನಾನು ಮಾಡಿದೆ ಹಾಗೂ ಆತ ಮತ್ತೆ ಮಾಡಲು ಹೇಳಿದ. ನಂತರ ಶೂ ನಲ್ಲಿ ಒಂದು ಗೀಟು ತೋರಿಸಿ ಮಗದೊಮ್ಮೆ ಮಾಡಲು ಹೇಳಿದ. ನಾನು ಮಾಡಿದೆ. ಅಳುವುದನ್ನು ನಿಲ್ಲಿಸಿದೆ. ಆತನ ಶೂ ಕನ್ನಡಿಯಂತೆ ಹೊಳೆಯುತ್ತಿತ್ತು.

ಆತ ಒಂದು 100 ಟಕಾ ನೋಟು ನನ್ನ ಕೈಗಿತ್ತು ‘‘ನಿನ್ನ ಸಮಯ ಹಾಗೂ ಶಕ್ತಿಯನ್ನು ಕೆಲಸ ಮಾಡಲು ಉಪಯೋಗಿಸು ಆಳುವುದಕ್ಕಲ್ಲ. ಕಣ್ಣೀರು ಏನನ್ನೂ ತರುವುದಿಲ್ಲ,’’ ಎಂದು ಹೇಳಿ ಅಲ್ಲಿಂದ ಹೊರಟು ಹೋದ. ಆ ದಿನ ನಾನು 300 ಟಕಾ ದುಡಿದೆ. ಇದಾಗಿ ಈಗ ಮೂರು ವರ್ಷಗಳಾಗಿವೆ ಹಾಗೂ ನಾನು ಅಳುತ್ತಾ ಸಮಯ ಹಾಳು ಮಾಡದೆ ಕೆಲಸ ಮಾಡುತ್ತಿದ್ದೇನೆ. ನನ್ನ ಇಬ್ಬರು ಕಿರಿಯ ಸಹೋದರರನ್ನು ಶಾಲೆಗೆ ಕಳುಹಿಸುತ್ತಿದ್ದೇನೆ. ನನ್ನ ಹಿರಿಯ ಸಹೋದರಿಯನ್ನು ಕಳೆದ ವರ್ಷ ಮದುವೆ ಮಾಡಿ ಕೊಟ್ಟಿದ್ದೇನೆ. ಮೂರು ವರ್ಷಗಳಿಂದ ಕಲಿಯಲು ಅಸಾಧ್ಯವಾಗಿದ ಪದ್ಯವನ್ನು ನಾನು ಕಲಿತಿದ್ದೇನೆ. ನನ್ನ ಎಲ್ಲಾ ಕಣ್ಣೀರು ಕುಡಿದು ಕೇವಲ ನನ್ನ ಕನಸಿನೊಂದಿಗೆ ಬದುಕುತ್ತಿದ್ದೇನೆ. ಈಗ ಜನರು ನನ್ನನ್ನು ಮೋಚಿ ಎಂದು ಹೇಳಿದಾಗ ನಾನು ಅಳುವುದಿಲ್ಲ. ಅವರನ್ನು ನೋಡಿ ನಕ್ಕು ಬಿಡುತ್ತೇನೆ.

- ಉತ್ತಮ್ ಚಂದ್ರ ದಾಸ್ (15)

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X