Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದೇಶದ ವಿವಿಧ ರಾಜ್ಯಗಳ ಸಾಕ್ಷ್ಯಚಿತ್ರಕ್ಕೆ...

ದೇಶದ ವಿವಿಧ ರಾಜ್ಯಗಳ ಸಾಕ್ಷ್ಯಚಿತ್ರಕ್ಕೆ ಬೈಕ್‌ನಲ್ಲಿ ಹೊರಟ ಯುವಕ

ವಾರ್ತಾಭಾರತಿವಾರ್ತಾಭಾರತಿ29 May 2017 11:22 PM IST
share
ದೇಶದ ವಿವಿಧ ರಾಜ್ಯಗಳ ಸಾಕ್ಷ್ಯಚಿತ್ರಕ್ಕೆ ಬೈಕ್‌ನಲ್ಲಿ ಹೊರಟ ಯುವಕ

ಕಾಪು, ಮೇ 29: ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಜೀವನ, ಆಹಾರ ಪದ್ಧತಿ, ಐತಿಹಾಸಿಕ ಪ್ರದೇಶಗಳ ಕುರಿತಾಗಿ ಸಾಕ್ಷ್ಯಚಿತ್ರ ನಿರ್ಮಾಣ ಗುರಿಯೊಂದಿಗೆ ರಾಷ್ಟ್ರದ 13 ರಾಜ್ಯಗಳು, 11,000 ಕಿಮೀ, ಲೈಟ್ಸ್ ಕ್ಯಾಮರಾ, ರೋಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಪುವಿನ ಸಚಿನ್ ಶೆಟ್ಟಿ 40 ದಿನಗಳ ಯಾತ್ರೆ ಕೈಗೊಂಡಿದ್ದಾರೆ.

ಹವ್ಯಾಸಿ  ಬೈಕ್ ರೈಡರ್ ಕಾಪುವಿನ ಕೊಂಬಗುಡ್ಡೆ ನಿವಾಸಿ ಸಚಿನ್ ಶೆಟ್ಟಿ ಅವರು ಲೈಟ್ಸ್ ಕ್ಯಾಮರಾ ಲಡಾಕ್ - ಬೈಕ್ ಯಾತ್ರೆ ಕೈಗೊಂಡಿದ್ದಾರೆ.

ರವಿವಾರ ಬೆಳಗ್ಗೆ ಕಾಪು ಪೇಟೆಯಿಂದ ಹೊರಟ ಇವರ ಯಾತ್ರೆಯು ಸೋಮವಾರ ಮಧ್ಯಾಹ್ನ 1,000 ಕಿಮೀ ದೂರದ ಮುಂಬೈಯ ನವಿಮುಂಬೈ ತಲುಪಿದ್ದಾರೆ. ಮಂಗಳವಾರ ನವಿಮುಂಬೈಯಲ್ಲಿ ಸಚಿನ್ ಅವರ ಸ್ನೇಹಿತರ ಮನೆಯಲ್ಲಿ ತಂಗಲಿದ್ದಾರೆ. ಇದೇ ವೇಳೆ ಅವರು ಬೈಕ್‌ನ್ನು ಶೋರೂಂನಲ್ಲಿ ಸರ್ವೀಸ್‌ಗೆ ನೀಡಲಿದ್ದಾರೆ. ಬುಧವಾರ ರಾಜಸ್ಥಾನಕ್ಕೆ ತೆರಳಲಿದ್ದಾರೆ.

ರೋಯಲ್ ಎನ್‌ಫೀಲ್ಡ್ - ಹಿಮಾಲಯನ್ ಬೈಕ್ ಮೂಲಕ ದೇಶ ಸಂಚರಿಸಲಿರುವ ಇವರು ತನ್ನೊಂದಿಗೆ ಕೊಂಡೊಯ್ಯುವ ಹೆಲ್ಮೆಟ್ ಕ್ಯಾಮೆರಾ, ಡಿಜಿ ಕ್ಯಾಮರಾ, ಗೋಪ್ರೊ ಕ್ಯಾಮರಾಗಳ ಮೂಲಕವಾಗಿ ಯಾತ್ರೆಯ ಸಂಪೂರ್ಣ ಚಿತ್ರೀಕರಣ ನಡೆಸಲಿದ್ದಾರೆ. ತಮ್ಮ ಸಂಚಾರಕ್ಕಾಗಿ 2 ಲಕ್ಷ ರೂ. ವೆಚ್ಚದ ಬೈಕ್‌ನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡಿರುವ ಸಚಿನ್ ಶೆಟ್ಟಿ ಬೈಕ್‌ನಲ್ಲೇ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪೆಟ್ರೋಲ್ ಕ್ಯಾನ್, ಜಿ.ಪಿ.ಎಸ್. ನೇವಿಗೇಟರ್, ಮೊಬೈಲ್ ಮತ್ತು ಕ್ಯಾಮರಾ ಚಾರ್ಜಿಂಗ್ ವ್ಯವಸ್ಥೆ, ಟೂಲ್‌ಕಿಟ್, ಪಂಪ್, ವಾಟರ್ ಕಿಟ್‌ನ್ನು ಅಳವಡಿಸಿಕೊಂಡಿದ್ದಾರೆ. ತನ್ನೊಂದಿಗೆ ಗೋಪ್ರೊ ಕ್ಯಾಮರಾ, ಡಿಜಿ ಆಸ್ಮೋ, 5 ಡಿ, ಸೋನಿ ಎ-7 ಕ್ಯಾಮರಾಗಳನ್ನು ಕೊಂಡೊಯ್ಯುತ್ತಿದ್ದು, ಹೆಲ್ಮೆಟ್ ಕ್ಯಾಮರಾ, ಮೊಬೈಲ್ ಸ್ಪೀಕರ್, ಹೆಡ್‌ಫೋನ್, ಟಾರ್ಚ್‌ಲೈಟ್‌ನ್ನೂ ಅಳವಡಿಸಿಕೊಂಡಿದ್ದಾರೆ.

ಸಚಿನ್ ಶೆಟ್ಟಿ  ಜಾವಾ ಎಜ್ಡಿ ಟೀಮ್ ಜೊತೆಗೆ ಬೆಂಗಳೂರು, ಮಡಿಕೇರಿ, ಊಟಿ, ಹೈದರಾಬಾದ್, ಕನ್ಯಾಕುಮಾರಿ ಇತರ ಪ್ರದೇಶಗಳಲ್ಲಿ ಬೈಕ್ ಯಾತ್ರೆ ನಡೆಸಿದ್ದು, 2015ರಲ್ಲಿ ಬೆಂಗಳೂರಿನ ಜಾವಾ ಎಜ್ಡಿ ಮೋಟಾರ್ ಸೈಕಲ್ ಅಸೋಸಿಯೇಷನ್ ಸಂಯೋಜಿಸಿದ್ದ ಜ್ವಾಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಲಿಮ್ಕಾ ಬುಕ್ ಆಫ್ ರೆರ್ಕಾಂಡಿಗ್‌ನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ.

ಬೈಕ್ ರೈಡ್ ಎಂದರೆ ತುಂಬಾ ಇಷ್ಟ. ಈ ಮೊದಲು ನಾನು ವಿವಿಧ ಕಡೆಗಳಿಗೆ ಯಾತ್ರೆ ಹೊರಟಿದ್ದೆ. ಇದೀಗ 11,000 ಕಿಮೀ ಯಾತ್ರೆಗೆ ಹೊರಟಿದ್ದೇನೆ. ಇದಕ್ಕೆ 1.30 ಲಕ್ಷ ರೂ ಖರ್ಚಾಗಲಿದ್ದು, ಇದಕ್ಕೆ ಪೋಷಕರ ಹಾಗೂ ಸ್ನೇಹಿತರ ಬೆಂಬಲವೇ ಕಾರಣ ಎನ್ನುತ್ತಾರೆ ಸಚಿನ್ ಶೆಟ್ಟಿ.

ಬೈಕ್‌ನಲ್ಲಿ ಸಂಚಾರ ಆರಂಭಿಸುವ ಬಗ್ಗೆ ಈ ಮುಂಚೆಯೇ ಹೇಳಿದ್ದ. ಆದರೆ ನಾನೇ ಆತನನ್ನು ಈಗ ಬೇಡ ಎನ್ನುತಿದ್ದೆ.  ಭಯ ಆಗುತ್ತಿತ್ತು. ಆದರೆ ಈಗ ಧೈರ್ಯದಿಂದ ಈ ಯಾತ್ರೆಗೆ ಹೋಗಿ ಬರಲು ಹೇಳಿದ್ದೇನೆ. ತಂದೆ ಈತನನ್ನು ಚಿಕ್ಕಂದಿನಿಂದಲೇ ಬೈಕ್ ರೈಡ್‌ಗೆ ಪ್ರೋತ್ಸಾಹ ನೀಡಿದ್ದರು. ಅವರ ಒಂದು ತರಬೇತಿಯಿಂದ ಇಷ್ಟು ದೊಡ್ಡ ಯಾತ್ರೆ ಮಾಡಲು ಪ್ರೇರಣೆ ಆಗಿದೆ ಎನ್ನುತ್ತಾರೆ ಸಚಿನ್ ತಾಯಿ ಜಯಶ್ರೀ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X