ಸೇವಾ ಕೇಂದ್ರ ಉದ್ಘಾಟನೆ
ಉಡುಪಿ, ಜೂ.1: ಜಿಲ್ಲೆಯ ಕೃಷಿ ಇಲಾಖೆ, ಆತ್ಮ ಅನುಷ್ಟಾನ ಸಮಿತಿ ಉಡುಪಿ ಇವರ ಜಂಟಿ ಸಹಭಾಗಿತ್ವದಲ್ಲಿ ಕಾಪು ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ರೈತ ಸಂಪರ್ಕ ಕಾರ್ಯಕ್ರಮವು ಜೂ. 3ರಂದು ಬೆಳಗ್ಗೆ 10:30ಕ್ಕೆ ಕಾಪು ವೀರದ್ರ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿ ಸುವರು. ಅಧ್ಯಕ್ಷತೆಯನ್ನು ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Next Story





