Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಮಝಾನ್‌ನಲ್ಲಿ ನನ್ನ ಉತ್ಸಾಹ ಇಮ್ಮಡಿ:...

ರಮಝಾನ್‌ನಲ್ಲಿ ನನ್ನ ಉತ್ಸಾಹ ಇಮ್ಮಡಿ: ರಿಕ್ಷಾ ಹಸನಾಕ

ನನ್ನ ರಮಝಾನ್ ಅನುಭವ

ವಾರ್ತಾಭಾರತಿವಾರ್ತಾಭಾರತಿ3 Jun 2017 5:17 PM IST
share
ರಮಝಾನ್‌ನಲ್ಲಿ ನನ್ನ ಉತ್ಸಾಹ ಇಮ್ಮಡಿ: ರಿಕ್ಷಾ ಹಸನಾಕ

"ನನಗೀಗ 67 ವರ್ಷ. 30 ವರ್ಷಗಳಿಂದ ರಿಕ್ಷಾದ ಮಾಲಕ-ಚಾಲಕನಾಗಿ ಮಂಗಳೂರಿನಲ್ಲೇ ದುಡಿಯುತ್ತಿದ್ದೇನೆ. ವರ್ಷದ 11 ತಿಂಗಳ ಪೈಕಿ ನನಗೆ ರಮಝಾನ್ ಅಂದರೆ ಹೆಚ್ಚು ಇಷ್ಟ. ಯಾಕೆಂದರೆ ನಾನು ಚಹಾ ಮತ್ತು ಪಾನ್ ಬೀಡಾ, ತಾಂಬೂಲ (ವೀಳ್ಯದ ಎಲೆ) ಪ್ರಿಯ. ರಿಕ್ಷಾ ಚಲಾಯಿಸುವಾಗಲೆಲ್ಲಾ ನನಗೆ ಪಾನ್ ಜಗಿಯುತ್ತಿರಬೇಕು. ಆಗಾಗ ಚಹಾ ಕುಡಿಯುತ್ತಿರಬೇಕು. ಆದರೆ ರಮಝಾನ್‌ನಲ್ಲಿ ನನಗೆ ಇದರ ರಗಳೆಯೇ ಇಲ್ಲ. ಇದರಿಂದ ನನ್ನ ಹಣ ಮತ್ತು ಸಮಯ ಉಳಿತಾಯವಾಗುತ್ತದೆ".

ಇದು ಮಲಾರ್ ಅರಸ್ತಾನದ ಕೆಳಗಿನ ಮಾರ್ಗ ನಿವಾಸಿ ಕೆ.ಎಂ. ಹಸನಬ್ಬ (ರಿಕ್ಷಾ ಹಸನಾಕ)ರ ಮಾತು. ಮೂಲತ: ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನ ಮಲೈಬೊಟ್ಟು ನಿವಾಸಿಯಾಗಿರುವ ಹಸನಬ್ಬ ಸುಮಾರು 45 ವರ್ಷದ ಹಿಂದೆ ಮದುವೆಯಾದ ಒಂದೆರಡು ವರ್ಷದ ಬಳಿಕ ಪತ್ನಿಯ ತವರೂರಲ್ಲಿ ನೆಲೆಸತೊಡಗಿದರು. 1974ರ ನೆರೆಗೆ ಮಲೈಬೊಟ್ಟುವಿನಲ್ಲಿದ್ದ ಇವರ ಹೊಟೇಲ್-ಅಂಗಡಿ ಆಹುತಿಯಾಯಿತು. ಆ ಬಳಿಕ ಪಾವೂರು ಗ್ರಾಮದ ಗಾಡಿಗದ್ದೆ ಎಂಬಲ್ಲಿ ಹೊಟೇಲ್ ತೆರೆದರೂ ಕೂಡ ಅದು ಕೈ ಹತ್ತಲಿಲ್ಲ. ಹಾಗಾಗಿ 1980ರಲ್ಲಿ ರಿಕ್ಷಾ ಖರೀದಿಸಿ ಮಂಗಳೂರಿನಲ್ಲಿ ಬಾಡಿಗೆಗೆ ಓಡಿಸತೊಡಗಿದರು

ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಕಾಲಿಡುವ ಇವರು ಸಂಜೆ 5 ಗಂಟೆಗೆ ಮನೆಗೆ ಮರಳುತ್ತಾರೆ. ಪತ್ನಿ ಮತ್ತು 7 ಹೆಣ್ಣು ಮಕ್ಕಳ ತುಂಬು ಕುಟುಂಬ ಇವರದ್ದು. ರಿಕ್ಷಾದಲ್ಲಿ ದುಡಿದ ಹಣದಿಂದಲೇ 5 ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿದ್ದಾರೆ. ಗಂಡು ಮಕ್ಕಳಿಲ್ಲದ ಕಾರಣ ಈ ಇಳಿವಯಸ್ಸಿನಲ್ಲೂ ದಿನಂಪ್ರತಿ ಬಸ್ಸಿನಲ್ಲಿ 25 ಕಿ.ಮೀ. ಕ್ರಮಿಸಿ ಮಂಗಳೂರಿನಲ್ಲಿ ದುಡಿಯುತ್ತಾರೆ. ರಿಕ್ಷಾವನ್ನೇ ತನ್ನ ದುಡಿಮೆಗೆ ಬಳಸುತ್ತಿದ್ದ ಕಾರಣ ಊರಲ್ಲಿ "ರಿಕ್ಷಾ ಹಸನಾಕ" ಎಂದೇ ಗುರುತಿಸಲ್ಪಟ್ಟಿದ್ದಾರೆ. ಚಳಿ, ಮಳೆ, ಗಾಳಿ, ಬೇಸಿಗೆ ಏನೇ ಇದ್ದರೂ ಹಸನಾಕರಿಗೆ ಸಮಸ್ಯೆ ಇಲ್ಲ. ತನ್ನ ದಿನದ ಪಾಲಿನ ಹಣ ಗಳಿಸಿಯೇ ಊರಿಗೆ ಹೋಗುತ್ತಾರೆ.

"ನನಗೆ ರಮಝಾನ್‌ನಲ್ಲಿ ಹೆಚ್ಚು ಲವಲವಿಕೆಯಿಂದ ದುಡಿಯಲು ಇಷ್ಟ. ವಯೋಸಹಜವಾಗಿ ಆರಂಭದ ಒಂದೆರಡು ದಿನ ನನಗೆ ಉಪವಾಸ ಸ್ವಲ್ಪ ಕಷ್ಟವಾದರೂ ಕೂಡ ಬಳಿಕ ಸಲೀಸಾಗಿರುತ್ತದೆ. ಇತರ ದಿನಗಳಲ್ಲಿ ಚಹಾ, ಊಟ, ತಿಂಡಿ, ಪಾನ್ ಬೀಡಾ, ತಾಂಬೂಲ ತಿನ್ನಲು ಸಮಯ ವ್ಯಯವಾಗುತ್ತದೆ. ಆದರೆ ರಮಝಾನ್‌ನಲ್ಲಿ ಅದ್ಯಾವ ಸಮಸ್ಯೆಯೂ ಇಲ್ಲ. ಬಾಂಗ್ (ಅಝಾನ್) ಆದ ತಕ್ಷಣ ಹತ್ತಿರದ ಮಸೀದಿಗೆ ಹೋಗಿ ನಮಾಝ್ ಮಾಡಿ ಒಂದೈದು ನಿಮಿಷ ದಣಿವಾರಿಸಿ ಮತ್ತೆ ಎಂದಿನಂತೆ ರಿಕ್ಷಾ ಓಡಿಸುತ್ತೇನೆ".

"ನನ್ನಂತಹ ಬಡಪಾಯಿಗೆ ರಮಝಾನ್ ಅಗತ್ಯ. ಇದರಿಂದ ನನ್ನ ದೇಹ, ಮನಸ್ಸು ಕೂಡ ಶುದ್ಧವಾಗುತ್ತದೆ. ರಮಝಾನ್‌ನಲ್ಲಿ ದಿನದ 12 ಗಂಟೆ ದುಡಿದರೂ ನನಗೆ ದಣಿವು ಎಂಬುದು ಇಲ್ಲ. ನಾನು ಆಯಾಸ ಎಂದು ಮನೆಯಲ್ಲಿ ಕೂತರೆ ಪತ್ನಿ-ಮಕ್ಕಳು ಹಸಿವಿನಿಂದ ಕೂರಬೇಕಾದೀತು. ಹಾಗಾಗಿ ದಿನದ ಹೆಚ್ಚು ಹೊತ್ತು ದುಡಿಯಲು ಇಷ್ಟ ಪಡುತ್ತೇನೆ. ರಮಝಾನ್‌ನಲ್ಲಿ ಅದಕ್ಕೆ ಸಾಕಷ್ಟು ಸಮಯಾವಕಾಶ ಇರುತ್ತದೆ."

-ಹಸನಾಕ, ರಿಕ್ಷಾ ಚಾಲಕ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X