ಗುತ್ತಿಗೆ ನೌಕರರ ನೇಮಕ
ಉಡುಪಿ, ಜೂ.3: ಜಿಲ್ಲೆಯ ಕೃಷಿ ಇಲಾಖೆಯ ಆತ್ಮ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬೇಕಾದ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು-5, ತಾಲೂಕು ತಾಂತ್ರಿಕ ವ್ಯವಸ್ಥಾಪಕರು-3, ಉಪ ಯೋಜನಾ ನಿರ್ದೇಶಕರು-1, ಕಂಪ್ಯೂಟರ್ ಪ್ರೋಗ್ರಾಮರ್-1, ಜಿಲ್ಲಾ ಸಲಹೆಗಾರರು-1 ಹಾಗೂ ತಾಂತ್ರಿಕ ಸಹಾಯಕರ-2 ಸೇವೆಯನ್ನು ಪಡೆಯುವ ಬಗ್ಗೆ ಸೇವೆಯನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದು ಕೊಳ್ಳಲು ಇಚ್ಛೆಯುಳ್ಳ ಸಂಸ್ಥೆಗಳಿಂದ ಷರತ್ತುಗಳಿಗೆ ಒಳಪಟ್ಟು ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ.
www.eproc.karnataka.gov.inಆಸಕ್ತ ಸಂಸ್ಥೆಗಳು ಟೆಂಡರ್ ಅರ್ಜಿಯನ್ನು ಇ-ಪೇಮೆಂಟ್ ಮೂಲಕ ಸಲ್ಲಿಸ ಬಹುದು. ಭರ್ತಿ ಮಾಡಿದ ಇ-ಟೆಂಡರ್ಗಳನ್ನು ಜೂ.22ರ ಸಂಜೆ 4:00 ಗಂಟೆಗೆ ಮುಂಚಿತವಾಗಿ - - ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಇ-ಟೆಂಡರ್ನ್ನು ಜೂ.23ರ ಸಂಜೆ 4:00 ಗಂಟೆಗೆ ತೆರೆಯಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





