Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ವ್ಯಾಕರಣ ದೋಷ ‘ಲೈಫ್ 360’

ವ್ಯಾಕರಣ ದೋಷ ‘ಲೈಫ್ 360’

ವಾರ್ತಾಭಾರತಿವಾರ್ತಾಭಾರತಿ3 Jun 2017 11:02 PM IST
share
ವ್ಯಾಕರಣ ದೋಷ ‘ಲೈಫ್ 360’

ನಟ ತನ್ನ ಪಾತ್ರದಲ್ಲಷ್ಟೇ ನಟಿಸುತ್ತಾನೆ, ಆದರೆ ನಿರ್ದೇಶಕ ಸಿನೆಮಾದ ಎಲ್ಲರ ಪಾತ್ರಗಳನ್ನೂ ಮಾಡಬೇಕಾಗುತ್ತದೆ! - ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ಮಾತಿದು. ಸಿನೆಮಾದ ಪ್ರತಿಯೊಂದು ವಿಭಾಗಗಳ ಬಗ್ಗೆಯೂ ನಿರ್ದೇಶಕನಿಗೆ ತಿಳುವಳಿಕೆ ಇರಬೇಕಾಗುತ್ತದೆ. ಮಾತ್ರವಲ್ಲ ಕಲಾವಿದರು ಮತ್ತು ತಂತ್ರಜ್ಞರಿಂದ ಕೆಲಸ ತೆಗೆಯುವ ಛಾತಿಯೂ ಬೇಕು. ‘ಲೈಫ್ 360’ ಸಿನೆಮಾದ ನಿರ್ದೇಶಕ ಅರ್ಜುನ್ ಕಿಶೋರ್ ಚಂದ್ರ ಅವರಿಗೆ ಇಂತಹ ಯಾವುದೇ ಗುಣ-ವಿಶೇಷಗಳಿದ್ದಂತಿಲ್ಲ. ಚಿತ್ರದ ನಾಯಕ ನಟನಾಗಿಯೂ ಅವರದ್ದು ನೀರಸ ಆಟ. ತಲೆಯಲ್ಲಿದ್ದ ಕತೆಯನ್ನು ತೆರೆ ಮೇಲೆ ಮೂಡಿಸುವ ಪ್ರಯತ್ನದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ.

ಬದುಕಿನ ಬಗ್ಗೆ ನಿರ್ದಿಷ್ಟ ಗುರಿಯಿಲ್ಲದ ಶಿಶಿರ್‌ಗೆ ಆಕಾಂಕ್ಷಳ ಮೇಲೆ ಲವ್ವಾಗುತ್ತದೆ. ಪ್ರೀತಿಯನ್ನು ಒಪ್ಪಿಕೊಂಡ ಆಕಾಂಕ್ಷಳ ಮನಸ್ಸು ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜೀವನದ ಭದ್ರತೆಯ ಕಾರಣಗಳೊಂದಿಗೆ ಆಕೆ ಪ್ರೀತಿಯನ್ನು ಕಡಿದುಕೊಳ್ಳುವುದರೊಂದಿಗೆ ಶಿಶಿರ್ ಒಂಟಿ ಪಯಣ ಶುರುವಾಗುತ್ತದೆ. ಆನಂತರ ಶಿಶಿರ್ ಬದುಕಿಗೆ ಕ್ಯಾಥರಿನ್ ಎನ್ನುವ ಮತ್ತೊಬ್ಬ ಹುಡುಗಿ ಎಂಟ್ರಿ ಕೊಡುತ್ತಾಳೆ. ಆಕೆಯ ಬಗೆಗೂ ಅವನಿಗೆ ಭ್ರಮನಿರಸನವಾಗುತ್ತದೆ. ಸೈಕಲ್ ಮೇಲೆ ಊರು ಸುತ್ತತೊಡಗುವ ಶಿಶಿರ್‌ಗೆ ನಾಲ್ಕು ವ್ಯಕ್ತಿಗಳು ಬದುಕಿನ ವಾಸ್ತವವನ್ನು ಪರಿಚಯಿಸುತ್ತಾರೆ. ತಪ್ಪುಗಳನ್ನು ಸರಿಪಡಿಸಿಕೊಂಡು ಊರಿಗೆ ಮರಳಿ ಬದುಕು ಕಟ್ಟಿಕೊಳ್ಳುವುದರೊಂದಿಗೆ ಸಿನೆಮಾ ಮುಕ್ತಾಯವಾಗುತ್ತದೆ.

ಚಿತ್ರಕಥೆಯ ಹೆಣಿಗೆ ಮತ್ತು ನಿರ್ದೇಶನದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ. ನಿರೂಪಣೆಯಲ್ಲಿಯೇ ಎಡವಟ್ಟಾಗಿರುವುದರಿಂದ ಕ್ಯಾಮರಾ, ಸಂಗೀತದಲ್ಲಿ ಹೊಂದಾಣಿಕೆಯನ್ನು ನಿರೀಕ್ಷಿಸುವಂತಿಲ್ಲ. ನಾಯಕನಟನಾಗಿಯೂ ಅರ್ಜುನ್ ಭರವಸೆ ಮೂಡಿಸುವುದಿಲ್ಲ. ನಟಿಯರಾದ ಅನೂಷ ಮತ್ತು ಪಾಯಲ್ ಓಕೆ. ಉಳಿದಂತೆ ಪೋಷಕ ಪಾತ್ರಗಳಲ್ಲಿ ಶ್ರೀಧರ್, ಸತ್ಯ ಮತ್ತು ಬಿರಾದಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿನೆಮಾ ವ್ಯಾಕರಣ ಕಲಿಯದೆ ಫೀಲ್ಡ್‌ಗೆ ಇಳಿದರೆ ಏನಾಗುತ್ತದೆ ಎನ್ನುವುದಕ್ಕೆ ‘ಲೈಫ್ 360’ ಒಂದೊಳ್ಳೆ ಉದಾಹರಣೆ!

ನಿರ್ದೇಶನ: ಅರ್ಜುನ್ ಕಿಶೋರ್ ಚಂದ್ರ, ನಿರ್ಮಾಣ: ಎಸ್.ರಾಜಶೇಖರ್, ಸಂಗೀತ : ಮಹಾಂತ್ ನೀಲ್, ಆಕಾಶ್ ಶಿವಕುಮಾರ್ ಮತ್ತು ಪ್ರಜ್ವಲ್ ಪೈ, ಛಾಯಾಗ್ರಹಣ: ಅನಿಲ್ ಕುಮಾರ್ ಕೆ., ತಾರಾಗಣ : ಅರ್ಜುನ್ ಕಿಶೋರ್ ಚಂದ್ರ, ಅನೂಷ ರಂಗನಾಥ್, ಪಾಯಲ್ ರಾಧಾಕೃಷ್ಣ, ಹೇಮಂತ್ ಸುಶೀಲ್, ಶ್ರೀಧರ್, ಬಿರಾದಾರ್, ಸರ್ದಾರ್ ಸತ್ಯ ಮತ್ತಿತರರು.

ರೇಟಿಂಗ್ - *1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X