Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾವನ ರಮಝಾನ್ ತಿಂಗಳ ಉಪವಾಸದ ಗುಟ್ಟು...

ಮಾವನ ರಮಝಾನ್ ತಿಂಗಳ ಉಪವಾಸದ ಗುಟ್ಟು ಪ್ರೌಢತೆಗೆ ಬಂದಾಗ ತಿಳಿಯಿತು

ನಾನು ಕಂಡಂತೆ ರಮಝಾನ್

ಎಚ್.ಕೆ.ನಯನಾಡುಎಚ್.ಕೆ.ನಯನಾಡು4 Jun 2017 5:04 PM IST
share
ಮಾವನ ರಮಝಾನ್ ತಿಂಗಳ ಉಪವಾಸದ ಗುಟ್ಟು ಪ್ರೌಢತೆಗೆ ಬಂದಾಗ ತಿಳಿಯಿತು

"ನಾನಾಗ ಸಣ್ಣವ. ಬುದ್ಧಿ ಅಷ್ಟೊಂದು ಬಲಿತಿರಲಿಲ್ಲ. ಆದರೆ ಮುಸ್ಲಿಮರು ಒಂದು ತಿಂಗಳು ಉಪವಾಸ ಹಿಡಿಯುತ್ತಾರೆ ಎನ್ನುವುದು ತಿಳಿದಿತ್ತು. ಆ ಸಮಯದಲ್ಲಿ ನನ್ನ ಹಿರಿಯ ಮಾವ ರಮಝಾನ್ ತಿಂಗಳಲ್ಲಿ ಮುಸ್ಲಿಮರಂತೆ ಉಪವಾಸ ಹಿಡಿಯುತ್ತಿದ್ದರು. ಈಗಲೂ ಅದನ್ನು ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ಮಾವ ಉಪವಾಸ ಹಿಡಿಯುವುದನ್ನು ಕಂಡು ನಾನು, ನನ್ನಂತಹ ಇತರ ಮಕ್ಕಳು ಸೇರಿ ತಮಾಷೆ ಮಾಡುತ್ತಿದ್ದೆವು. ಆದರೆ ನಾವು ಪ್ರೌಢತೆಗೆ ಬಂದಾಗ ಉಪವಾಸದ ಗುಟ್ಟು ನಮಗೆ ಮನವರಿಕೆಯಾಯಿತು". ಉಪವಾಸ ಎಂಬುದು ಯಾವುದೇ ಒಂದು ಧರ್ಮದ ನಿಯಮವಲ್ಲ. ಇದು ಮಾನಸಿಕ, ಶಾರೀರಿಕವಲ್ಲದೆ ಸಾಮಾಜಿಕ ಆರೋಗ್ಯದ ಗುಟ್ಟು. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಮ್ಮ ಹಿರಿಯರಾಗಲಿ, ವೈದ್ಯರಾಗಲಿ "ಉಪವಾಸ ಹಿಡಿ" ಎಂದು ಹೇಳಿದರೆ ಅದನ್ನು ಕೇಳುವವರು ನಾವಲ್ಲ. ಅದಕ್ಕೊಂದು ಧಾರ್ಮಿಕ ರೂಪಕೊಟ್ಟು ಧರ್ಮದ ಕರ್ಮ ಎನ್ನುವ ಕಟ್ಟಳೆಯನ್ನು ನೀಡಿ ಸುಮ್ಮನಾಗುತ್ತಿದ್ದೆವೋ ಏನೋ?. ಉಪವಾಸ ಎಲ್ಲ ಧರ್ಮಗಳಲ್ಲೂ ಇದೆ. ಕೆಲವು ಧರ್ಮಗಳಲ್ಲಿ ಒಂದು ತಿಂಗಳು ಉಪವಾಸ ಹಿಡಿಯುವುದಾದರೆ, ಇನ್ನು ಕೆಲವು ಧರ್ಮಗಳಲ್ಲಿ ಒಂದು ದಿನ, ಒಂದು ವಾರ ಉಪವಾಸದ ಕ್ರಮಗಳೂ ಇದೆ. ಒಟ್ಟಾರೆ ನಂಬಿಕೆಯ ಆಧಾರದಲ್ಲಿ ಆರೋಗ್ಯದ ಕಾಳಜಿಯೇ ಉಪವಾಸ. ಇಂದು ಸಮಾಜದಲ್ಲಿ ಆರೋಗ್ಯವಂತರಿಗಿಂತ ಅನಾರೋಗ್ಯ ಹೊಂದಿರುವ ಜನರೇ ಹೆಚ್ಚಿರುವುದು ಸತ್ಯ. ಈ ಮಧ್ಯೆ ಹನ್ನೆರಡರಿಂದ ಹದಿನಾಲ್ಕು ಗಂಟೆ ಹೊಟ್ಟೆಗೆ ನೀರು, ಆಹಾರವಿಲ್ಲದೆ ಇರಲು ತುಂಬಾ ಕಷ್ಟವೂ ಹೌದು. ಹೊಟ್ಟೆ ಖಾಲಿಯಾದಾಗ ನಿತ್ರಾಣ, ರಕ್ತದೊತ್ತಡ, ಮಧುಮೇಹದಲ್ಲಿ ಏರುಪೇರು ಸಹಜ. ಆದರೂ ಮುಸ್ಲಿಮರು ದೇಹ ದಂಡಿಸಿ ಉಪವಾಸ ಹಿಡಿದು ದೇವರ ನಂಬಿಕೆಯಲ್ಲಿ ಆರೋಗ್ಯ ಕಾಯುತ್ತಿರುವುದು ಉತ್ತಮ ಕಾರ್ಯ. ವರ್ಷದ ಒಂದು ತಿಂಗಳು ಉಪವಾಸ ಹಿಡಿದು ಉಳಿದ ಹನ್ನೊಂದು ತಿಂಗಳು ಆಹಾರ ಸೇವನೆಯಲ್ಲಿ ಶಿಸ್ತು ಇಲ್ಲದಿದ್ದರೆ ಆರೋಗ್ಯಕ್ಕೆ ಹಿತ ಹೇಗೆ ಸಾಧ್ಯ. ಪ್ರಕೃತಿ ವಿರುದ್ಧವಾದ ಆಹಾರ ಸೇವನೆ, ಸಮಯ ಮೀರಿ ಆಹಾರ ಸೇವನೆ, ಆರೋಗ್ಯಕ್ಕೆ ಒಪ್ಪದ ಪಾನೀಯ, ಪದಾರ್ಥ ತಿನ್ನುವುದರಿಂದ ಉಪವಾಸ ವ್ಯರ್ಥವಾದೀತು. ಪವಿತ್ರ ರಮಝಾನ್ ಮಾಸದ ಈ ಉಪವಾಸ ಕೇವಲ ದೇಹ ದಂಡನೆಯಾಗದೆ ಮನಸ್ಸು, ದೇಹ ಮತ್ತು ನಂಬಿಕೆಯ ಕೊಂಡಿಯಾಗಬೇಕು. ಉಪವಾಸದಿಂದ ದೇಹವನ್ನು ದಂಡಿಸುವುದರೊಂದಿಗೆ ಮನಸ್ಸನ್ನು ಆಸೆ, ದುರಾಸೆ, ಕಾಮ, ಕ್ರೋದ, ಮದ, ಮತ್ಸರಗಳಿಂದ ನಿಯಂತ್ರಿಸಿ, ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯ ಹೆಚ್ಚಿಸಬೇಕು. ಆಗ ಮಾತ್ರ ಉಪವಾಸದ ಪಾವಿತ್ರ್ಯತೆಗೆ ಅರ್ಥ ಬರುತ್ತದೆ. ಅದೇನೆ ಆಗಲಿ ನಮ್ಮ ಹಿರಿಯರು, ಸಂತರು, ಮಹಾ ಪುರುಷರು ಮಾಡಿದ, ಹೇಳಿದ ಕ್ರಮಗಳು ದೇವರ ನಂಬಿಕೆಯೊಂದಿಗೆ, ಭಕ್ತಿಯ ಜಾಗೃತಿಯೊಂದಿಗೆ ಆರೋಗ್ಯದ ಕಾಳಜಿಯ ಮಹತ್ವವನ್ನೂ ಸಾರಿದೆ ಎನ್ನುವುದು ಇಂದಿಗೂ ಪ್ರಸ್ತುತ -ಎಚ್.ಕೆ.ನಯನಾಡು, ರಂಗಕಲಾವಿದರು, ಬಂಟ್ವಾಳ

share
ಎಚ್.ಕೆ.ನಯನಾಡು
ಎಚ್.ಕೆ.ನಯನಾಡು
Next Story
X