Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉಚಿತ ಎಟಿಎಂ ವಿದ್‌ಡ್ರಾಗೆ ಎಸ್‌ಬಿಐ...

ಉಚಿತ ಎಟಿಎಂ ವಿದ್‌ಡ್ರಾಗೆ ಎಸ್‌ಬಿಐ ಅಂಕುಶ; ಡೆಬಿಟ್ ಕಾರ್ಡ್ ಹಾಗೂ ಚೆಕ್‌ಗೆ ಶುಲ್ಕ ಜಾರಿ

ವಾರ್ತಾಭಾರತಿವಾರ್ತಾಭಾರತಿ9 Jun 2017 9:58 PM IST
share
ಉಚಿತ ಎಟಿಎಂ ವಿದ್‌ಡ್ರಾಗೆ ಎಸ್‌ಬಿಐ ಅಂಕುಶ; ಡೆಬಿಟ್ ಕಾರ್ಡ್ ಹಾಗೂ ಚೆಕ್‌ಗೆ ಶುಲ್ಕ ಜಾರಿ

    ಹೊಸದಿಲ್ಲಿ, ಜೂ.9: ಎಟಿಎಂನಿಂದ ಹಣ ಹಿಂತೆಗೆತ, ನಗದು ವಹಿವಾಟು, ಚೆಕ್ ಪುಸ್ತಕಗಳ ನೀಡಿಕೆ, ಹಾಳಾದ ನೋಟುಗಳ ವಿನಿಮಯ ಹಾಗೂ ಐಎಂಪಿಎಸ್ ಸೇವೆಯ ಮೂಲಕ ನಿಧಿಗಳ ಆನ್‌ಲೈನ್ ವರ್ಗಾವಣೆಯ ಶುಲ್ಕಗಳನ್ನು ಭಾರತೀಯ ಸ್ಟೇಟ್‌ಬ್ಯಾಂಕ್ (ಎಸ್‌ಬಿಐ) ಜೂನ್ 1ರಿಂದ ಪರಿಷ್ಕರಿಸಿದೆ. ತನ್ನ ಮೊಬೈಲ್ ವಾಲೆಟ್ ಸೇವೆ /ಯಾದ ‘ಸ್ಟೇಟ್‌ಬ್ಯಾಂಕ್ ಬಡಿ’ ಯ ಗ್ರಾಹಕರಿಗೆ ಅವರ ಪ್ರತಿ ಎಟಿಎಂ ಹಣ ಹಿಂತೆಗೆತಕ್ಕೆ 25 ರೂ. ಶುಲ್ಕ ವಿಧಿಸಲಿದೆ.. ಆದಾಗ್ಯೂ ಉಳಿತಾಯ ಬ್ಯಾಂಕ್ ಖಾತೆಗಳ ಗ್ರಾಹಕರು ಮೆಟ್ರೋ ನಗರಗಳಲ್ಲಿ ಎಂಟು ಬಾರಿ (ಎಸ್‌ಬಿಐ ಎಟಿಎಂಗಳಲ್ಲಿ 5 ಬಾರಿ ಹಾಗೂ ಇತರ ಬ್ಯಾಂಕ್‌ಗಳಲ್ಲಿ ಮೂರು ಬಾರಿ) ಹಾಗೂ ಇತರ ನಗರಗಳಲ್ಲಿ 10 ಎಟಿಎಂನಿಂದ ಹಣವನ್ನು ಉಚಿತವಾಗಿ ವಿದ್‌ಡ್ರಾ ಮಾಡಬಹುದಾಗಿದೆಯೆಂದು ಸ್ಟೇಟ್‌ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

   ಬೇಸಿಕ್ ಉಳಿತಾಯ ಠೇವಣಿ ಖಾತೆಯ ಗ್ರಾಹಕರಿಗೆ ಮಾತ್ರವೇ ತಿಂಗಳಿಗೆ ನಾಲ್ಕು ಬಾರಿ ಎಟಿಎಂ ವಿತ್‌ಡ್ರಾ ಮಿತಿಯನ್ನು ನಿಗದಿಪಡಿಸಲಾಗಿದೆಯೆಂದು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ. ಸಮಾಜದ ಬಡವರ್ಗಗಳ ಜನತೆಯಲ್ಲಿ ಉಳಿತಾಯ ಮನೋಭಾವನೆಯನ್ನು ಉತ್ತೇಜಿಸುವ ಉದ್ದೇಶದಿಂದ ಬೇಸಿಕ್ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯನ್ನು ಆರಂಭಿಸಲಾಗಿತ್ತು. ಈ ವಿಧದ ಬ್ಯಾಂಕ್ ಖಾತೆಯಲ್ಲಿ ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಉಚಿತವಾಗಿ ಲಭ್ಯವಾಗಲಿದ್ದು, ಇದಕ್ಕೆ ಯಾವುದೇ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಈ ಖಾತೆಯನ್ನು ಹೊಂದಿರುವವರು ಇತರ ಯಾವುದೇ ಉಳಿತಾಯ ಖಾತೆಯನ್ನು ಹೊಂದಲು ಅರ್ಹರಾಗಿರುವುದಿಲ್ಲ.

 ಬೇಸಿಕ್ ಉಳಿತಾಯ ಖಾತೆಯ ಠೇವಣಿದಾರರು ತಿಂಗಳಿಗೆ ಎಟಿಎಂನಿಂದ ಸೇರಿದಂತೆ ಒಟ್ಟು ನಾಲ್ಕು ಸಲ ಹಣವನ್ನು ಹಿಂಪಡೆಯಬಹುದಾಗಿದೆ. ತದನಂತರ ಪ್ರತಿ ವಿದ್‌ಡ್ರಾಗೂ ಎಸ್‌ಬಿಐ ಶಾಖೆಯಿಂದ 50 ರೂ. ಹಾಗೂ ಸೇವಾ ತೆರಿಗೆಯನ್ನು ವಿಧಿಸಲಾಗುವುದು. ಇತರ ಎಟಿಎಂಗಳಿಂದ 20 ರೂ. ಹಾಗೂ ಸೇವಾ ತೆರಿಗೆಯನ್ನು ವಿಧಿಸಲಾಗುವುದು.

ಎಸ್‌ಬಿಐನ ಪರಿಷ್ಕೃತ ಶುಲ್ಕಗಳ ವಿವರ

   ಎಟಿಎಂ ಕಾರ್ಡ್‌ಗಳು: ಜೂನ್ 1ರಿಂದ ಹೊಸ ಡೆಬಿಟ್ ಕಾರ್ಡ್ ನೀಡಲು ಶುಲ್ಕವನ್ನು ವಿಧಿಸಲಾಗುವುದು. ಆದರೆ ರೂಪೇ ಕ್ಲಾಸಿಕ್ ಕಾರ್ಡ್‌ನ್ನು ಮಾತ್ರ ಉಚಿತವಾಗಿ ನೀಡಲಾಗುವುದು.

ಆನ್‌ಲೈನ್ ವರ್ಗಾವಣೆ: ಐಎಂಪಿಎಸ್ ಮೂಲಕ ಆನ್‌ಲೈನ್ ನಿಧಿ ವರ್ಗಾವಣೆಗೆ ಸೇವಾತೆರಿಗೆ ಹಾಗೂ 5 ರೂ. ವಿಧಿಸಲಾಗುವುದು. 1 ಲಕ್ಷ ರೂ.ಗಿಂತ ಅಧಿಕ ಹಾಗೂ 2 ಲಕ್ಷ ರೂ.ವರೆಗೆ 15 ರೂ. ಹಾಗೂ ಸೇವಾ ತೆರಿಗೆ ವಿಧಿಸಲಾಗುವುದು. 2 ಲಕ್ಷಕ್ಕಿಂತ ಹೆಚ್ಚು ಹಾಗೂ 5 ಲಕ್ಷ ರೂ.ವರೆಗೆ 25 ರೂ. ಹಾಗೂ ಸೇವಾ ತೆರಿಗೆ ವಿಧಿಸಲಾಗುವುದು.

 ಚೆಕ್ ಪುಸ್ತಕ: ಜೂನ್ 1ರಿಂದ ಬೇಸಿಕ್ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯ ಗ್ರಾಹಕನು 10 ಹಾಳೆಗಳ ಚೆಕ್‌ಪುಸ್ತಕ ಪಡೆಯಲು 30 ರೂ. ಹಾಗೂ ಸೇವಾ ಶುಲ್ಕವನ್ನು ತೆರಬೇಕಾಗುತ್ತದೆ. 25 ಹಾಳೆಗಳ ಚೆಕ್ ಪುಸ್ತಕ್ಕೆ 75 ರೂ. ಮತ್ತು ಸೇವಾ ತೆರಿಗೆ ಹಾಗೂ 50 ಹಾಳೆಗಳ ಚೆಕ್ ಪುಸ್ತಕಕ್ಕೆ 150 ರೂ. ಹಾಗೂ ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

  ಶಿಥಿಲಗೊಂಡ ನೋಟುಗಳ ವಿನಿಮಯ: ಶಿಥಿಲಗೊಂಡ 20 ನೋಟುಗಳಿಗೆ ಅಥವಾ 5 ಸಾವಿರ ರೂ.ವೌಲ್ಯದವರೆಗಿನ ನೋಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆದಾಗ್ಯೂ 20ಕ್ಕೂ ಅಧಿಕ ಸಂಖ್ಯೆಯ ಶಿಥಿಲ ನೋಟುಗಳಿಗೆ, ಪ್ರತಿ ನೋಟಿಗೆ 2 ರೂ. ಅಥವಾ 1 ಸಾವಿರ ರೂ.ವೌಲ್ಯದ ನೋಟುಗಳಿಗೆ ತಲಾ 5 ರೂ. ಹಾಗೂ ಸೇವಾ ತೆರಿಗೆ ವಿಧಿಸಲಾಗುವುದು. ಉದಾಹರಣೆಗೆ 500 ರೂ.ಗಳ 25 ನೋಟುಗಳಿಗೆ (ಒಟ್ಟು ವೌಲ್ಯ 12,500) , ಪ್ರತಿ ನೋಟಿಗೆ 3 ರೂ. ಹಾಗೂ 1 ಸಾವಿರ ರೂ. ವೌಲ್ಯದ ನೋಟುಗಳಿಗೆ 62.50 ರೂ. ಹಾಗೂ ಸೇವಾ ತೆರಿಗೆ ವಿಧಿಸಲಾಗುವುದು.

    ಬ್ಯಾಂಕಿಂಗ್ ಪ್ರತಿನಿಧಿಗಳ ಮೂಲಕ ನಗದು ವ್ಯವಹಾರ: ಬ್ಯಾಂಕಿಂಗ್ ಪ್ರತಿನಿಧಿಗಳ ಮೂಲಕ 10 ಸಾವಿರ ರೂ.ವರೆಗಿನ ನಗದು ಠೇವಣಿಗಳಿಗೆ ಅದರ ಒಟ್ಟು ವೌಲ್ಯದ 0.25 ಶೇಕಡ ಅಥವಾ ಕನಿಷ್ಠ 2 ರೂ. ಹಾಗೂ ಗರಿಷ್ಠ 8 ರೂ. ಮತ್ತು ಸೇವಾ ತೆರಿಗೆ ವಿಧಿಸಲಾಗುವುದು. ಬ್ಯಾಂಕ್ ಪ್ರತಿನಿಧಿಗಳ ಮೂಲಕ ನಡೆಸಲಾಗುವ 2 ಸಾವಿರ ರೂ.ವರೆಗೆ ಹಣ ಹಿಂತೆಗೆತಕ್ಕೆ ವಹಿವಾಟು ನಡೆಸಲಾದ ವೌಲ್ಯದ ಶೇ.2.50ರಷ್ಟು ಅಥವಾ ಕನಿಷ್ಟ ಆರು ರೂ. ಮತ್ತು ಸೇವಾ ತೆರಿಗೆ ವಿಧಿಸಲಾಗುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X