ಮಂಗಳೂರು ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ಇಫ್ತಾರ್ ಕೂಟ
ಬೆಂಗಳೂರು, ಜೂ.9: ಮಂಗಳೂರು ಮುಸ್ಲಿಂ ಯೂತ್ ಫೆಡರೇಶನ್ (ಎಂ.ಎಂ.ವೈ.ಸಿ.) ಬೆಂಗಳೂರು ಸಮಿತಿ ವತಿಯಿಂದ ಬೆಂಗಳೂರಿನ ಕಾರ್ಪೊರೇಶನ್ ಸರ್ಕಲ್ ಸಮೀಪದ ಹಮೀದ್ ಷಾ ಕಾಂಪ್ಲೆಕ್ಸ್ ನ ಎಂ.ಎಂ.ವೈ.ಸಿ. ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಇಫ್ತಾರ್ ಕೂಟ ನಡೆಯಿತು.
ಈ ಸಂದರ್ಭ ಮಂಗಳೂರು ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸನ್ಮಾನಿಸಿದರು.
ನಿವೃತ್ತ ಡಿ.ಸಿ.ಪಿ. ಜಿ.ಎ.ಬಾವ, ಅಲ್ ಫಲಾಹ್ ಗ್ರೂಪ್ ಚೆಯರ್ಮೇನ್ ಯೂಸುಫ್ ಅಲ್ ಫಲಾಹ್, ಹಾಶಿಮ್ ಬಾಅಲವಿ ತಂಙಳ್, ಅಬೂಬಕರ್ ಸಿದ್ದೀಕ್ ಹುದವಿ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಉಮರ್ ಹಾಜಿ, ಎಂ.ಎಂ.ವೈ.ಸಿ. ಅಧ್ಯಕ್ಷ ಅಬೂಬಕರ್ ಎಚ್, ಜುನೈದ್ ಪಿ.ಕೆ., ಜಮಾಲ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ವುಮೆನ್ಸ್ ಕಾಲೇಜಿನ ಬ್ರೋಷರ್ ನ್ನು ಇದೇ ಸಂದರ್ಭ ಸಚಿವರು ಬಿಡುಗಡೆಗೊಳಿಸಿದರು.
Next Story