Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಮಝಾನ್ ನಲ್ಲಿ ಉಪವಾಸವಿದ್ದು,...

ರಮಝಾನ್ ನಲ್ಲಿ ಉಪವಾಸವಿದ್ದು, ಮುಸ್ಲಿಮರಿಗೆ ಸಾಥ್ ನೀಡುವ ಹಳೆದಿಲ್ಲಿಯ ಹಿಂದೂಗಳು

ವಾರ್ತಾಭಾರತಿವಾರ್ತಾಭಾರತಿ10 Jun 2017 7:50 PM IST
share
ರಮಝಾನ್ ನಲ್ಲಿ ಉಪವಾಸವಿದ್ದು, ಮುಸ್ಲಿಮರಿಗೆ ಸಾಥ್ ನೀಡುವ ಹಳೆದಿಲ್ಲಿಯ ಹಿಂದೂಗಳು

ದಿಲ್ಲಿ, ಜೂ.10: ರಮಝಾನ್ ಮುಸ್ಲಿಮರ ಪಾಲಿನ ಪವಿತ್ರ ತಿಂಗಳಾಗಿದ್ದು, ಎಲ್ಲಾ ಮುಸ್ಲಿಮರು ವ್ರತಾಚರಣೆ, ಪ್ರಾರ್ಥನೆಯಲ್ಲಿ ಸದಾ ನಿರತರಾಗಿರುತ್ತಾರೆ. ಈ ನಡುವೆ ಹೊಟ್ಟೆಹೊರೆಯಬೇಕಾದ ಅನಿವಾರ್ಯತೆಯಿಂದ ವ್ರತಾಚರಣೆಯ ನಡುವೆಯೂ ಕೆಲಸಕ್ಕೆ ಹೋಗಬೇಕಾಗುತ್ತದೆ. ದೇಶದ ಇತರ ಭಾಗಗಳಿಗೆ ಹೋಲಿಸಿದೆ ಹಳೆದಿಲ್ಲಿಯ ಹಿಂದೂ ಮುಸ್ಲಿಮರ ನಡುವಿನ ಕೋಮು ಸಾಮರಸ್ಯ ವಿಶಿಷ್ಟವಾದದು. ಇಲ್ಲಿನ ಬಹುತೇಕ ಹಿಂದೂಗಳು ತಮ್ಮ ಜೊತೆಗೆ ಕೆಲಸ ಮಾಡುವವರು ಅಥವಾ ಮಾಲಕರು ವ್ರತಾಚರಣೆಯಲ್ಲಿದ್ದರೆ ಅವರೂ ಇಡೀ ದಿನ ಏನೂ ತಿನ್ನದೆ ಮುಸ್ಲಿಮರಿಗೆ ಸಾಥ್ ನೀಡುತ್ತಾರೆ.

“16 ವರ್ಷಗಳಿಂದ ನಮ್ಮ ಜೊತೆ ಕೆಲಸ ಮಾಡುತ್ತಿರುವ ಕೌಶಲ್ ಸಿಂಗ್ ರಮಝಾನ್ ನ ಹಗಲು ಹೊತ್ತಿನಲ್ಲಿ ಏನನ್ನೂ ತಿನ್ನುವುದಿಲ್ಲ. ಕೌಶಲ್ ನಂತೆಯೇ ನಮ್ಮ ಜೊತೆಗಿರುವ ಹಲವು ಹಿಂದೂ ಕೆಲಸಗಾರರು ಇಡೀ ದಿನ ನಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಮಧ್ಯಾಹ್ನದ ಊಟ ಮಾಡದ ಅವರು ನೀರು ಸಹ ಕುಡಿಯುವುದಿಲ್ಲ.  ಒಂದು ವೇಳೆ ಅವರಿಗೂ ತೀವ್ರ ಹಸಿವಾದಲ್ಲಿ ಹಿಂಬದಿಗೆ ಹೋಗಿ ನಮಗೆ ಕಾಣದಂತೆ ಆಹಾರ ಸೇವಿಸುತ್ತಾರೆ” ಎನ್ನುತ್ತಾರೆ ಕಲ್ಲಾನ್ ಸಿಹಿತಿಂಡಿಯ ಮಾಲಕ ಮುಹಮ್ಮದ್ ಶಾನ್.

ಈ ಬಗ್ಗೆ ಪ್ರತಿಕ್ರಿಯಿಸುವ ಕೌಶಲ್ , ಇದು ಧರ್ಮಗಳ ವಿಚಾರವಲ್ಲ. ಬದಲಾಗಿ, ಮಾನವೀಯತೆಯ ವಿಚಾರವಾಗಿದೆ. ನನ್ನ ಜೊತೆಗಾರರು ಆಹಾರಗಳನ್ನು ತ್ಯಜಿಸಿ ಉಪವಾಸದಲ್ಲಿರುವಾಗ ನಾನು ಹೇಗೆ ತಿನ್ನಲು, ಕುಡಿಯಲು ಸಾಧ್ಯ. ನಾನು ಎಲ್ಲಾ ಧರ್ಮಗಳನ್ನು ಹಾಗೂ ಅವುಗಳ ಮೌಲ್ಯಗಳನ್ನು ಗೌರವಿಸುತ್ತೇನೆ” ಎನ್ನುತ್ತಾರೆ,

ಹಳೆ ದಿಲ್ಲಿ ವ್ಯಾಪ್ತಿಯ ಅನೇಕ ಅಂಗಡಿಗಳಲ್ಲಿ ಇಂತಹ ಕಥೆಗಳು ಸಿಗುತ್ತವೆ. ಇಲ್ಲಿ ಬಹುತೇಕ ಹಿಂದೂ ಕಾರ್ಮಿಕರಿದ್ದು, ಮುಸ್ಲಿಮರ ಆಚರಣೆಯನ್ನು ಗೌರವಿಸುತ್ತಾರೆ. ಈ ಬಗ್ಗೆ ವಿವರಿಸುವ ಮುಹಮ್ಮದ್ ಅರ್ಷದ್, ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಮೇವಾ ರಾಮ್ ನನ್ನ ಮುಂದೆ ಆಹಾರದ ಹೆಸರು ಕೂಡ ಹೇಳುವುದಿಲ್ಲ. ನನ್ನ ಕುಟುಂಬಸ್ಥರ ಜೊತೆ ಇಫ್ತಾರ್ ನಲ್ಲಿ ಭಾಗವಹಿಸುವ ಸಲುವಾಗಿ ಆತ ಮಧ್ಯಾಹ್ನದ ಊಟ ಕೂಡ ಮಾಡುವುದಿಲ್ಲ” ಎನ್ನುತ್ತಾರೆ,

ವ್ರತಾಚರಣೆಯ ಸಂದರ್ಭ ಮುಸ್ಲಿಮರು ಕಡಿಮೆ ಕೆಲಸ ಮಾಡುವಂತೆಯೂ ತಮ್ಮ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಇಲ್ಲಿನ ಹಿಂದೂಗಳು ಹೇಳುತ್ತಾರೆ. “ರಮಝಾನ್ ನಲ್ಲಿ ಮುಸ್ಲಿಮರು ವಿಶ್ರಾಂತಿ ತೆಗೆದುಕೊಳ್ಳುವಂತೆಯೂ ನನ್ನ ಸಹೋದ್ಯೋಗಿಗಳಾದ ಹಿಂದೂಗಳು ಕೆಲಸ ಕಾರ್ಯಗಳನ್ನು ಅವರು ನೋಡಿಕೊಳ್ಳುವುದಾಗಿಯೂ ಹೇಳುತ್ತಾರೆ” ಎಂದು ಹೇಳುತ್ತಾರೆ ಅರ್ಷದ್.

ಮೇವಾ ರಾಮ್ ಹೇಳುವಂತೆ ಹಳೆಯ ದಿಲ್ಲಿ ಭಾರತದ ಅತ್ಯಂತ ಜಾತ್ಯಾತೀತ ಪ್ರದೇಶವಾಗಿದೆ. “ಜಾಮಿಯಾ ಮಸೀದಿ ಮುಂಭಾಗದಲ್ಲಿರುವ ಚೌಕ ಜಾತ್ಯಾತೀತ ಚೌಕವೆಂದೇ ಹೆಸರುವಾಸಿಯಾಗಿದೆ. ಈದ್, ದೀಪಾವಳಿ, ಹೋಲಿ ಸೇರಿದಂತೆ ಎಲ್ಲಾ ಹಬ್ಬಗಳನ್ನು ನಾವಿಲ್ಲಿ ಆಚರಿಸುತ್ತೇವೆ. ಈದ್ ಹಾಗೂ ದೀಪಾವಳಿ ನಮ್ಮನ್ನು ಒಗ್ಗೂಡಿಸುತ್ತದೆ. ಒಗ್ಗಟ್ಟಾಗಿ ಕೆಲಸ ಮಾಡುವ ನಾವು ಯಾಕೆ ಹಬ್ಬ ಆಚರಿಸಬಾರದು” ಎಂದು ಪ್ರಶ್ನಿಸುತ್ತಾರೆ ಮೇವಾ ರಾಮ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X