Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಾಗರಗಳ ರಕ್ಷಣೆಗೆ ತುರ್ತು ಕ್ರಮ:...

ಸಾಗರಗಳ ರಕ್ಷಣೆಗೆ ತುರ್ತು ಕ್ರಮ: ವಿಶ್ವಸಮುದಾಯದ ಒಕ್ಕೊರಲ ಕರೆ

ಪ್ರಪ್ರಥಮ ಜಾಗತಿಕ ಸಾಗರ ಸಮಾವೇಶ ಸಮಾರೋಪ

ವಾರ್ತಾಭಾರತಿವಾರ್ತಾಭಾರತಿ10 Jun 2017 8:26 PM IST
share
ಸಾಗರಗಳ ರಕ್ಷಣೆಗೆ ತುರ್ತು ಕ್ರಮ: ವಿಶ್ವಸಮುದಾಯದ ಒಕ್ಕೊರಲ ಕರೆ

ವಿಶ್ವಸಂಸ್ಥೆ,ಜೂ.10: ಜಗತ್ತಿನ ಸಾಗರಗಳ ಆರೋಗ್ಯ ಹಾಗೂ ಉತ್ಪಾದನಾಶೀಲತೆಯಲ್ಲಿ ಉಂಟಾಗಿರುವ ಕುಸಿತವನ್ನು ತಡೆಗಟ್ಟಲು ತುರ್ತಾಗಿ ಕಾರ್ಯಪ್ರವೃತ್ತವಾಗುವಂತೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಶುಕ್ರವಾರ ತುರ್ತು ಕರೆಯನ್ನು ನೀಡಿವೆ. ಸಾಗರಗಳ ರಕ್ಷಣೆ ಕುರಿತ ಕ್ರಿಯಾ ಯೋಜನೆಯನ್ನು ಅಮೆರಿಕ ಬೆಂಬಲಿಸಿದೆಯಾದರೂ,ಹವಾಮಾನ ಬದಲಾವಣೆ ನಿಯಂತ್ರಣ ಕುರಿತ ಪ್ಯಾರಿಸ್ ಒಡಂಬಡಿಕೆಯನ್ನು ಬೆಂಬಲಿಸಲು ಅದು ನಿರಾಕರಿಸಿದೆ. ಸಾಗರಗಳ ಕುರಿತು ವಿಶ್ವಸಂಸ್ಥೆ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಈ ಸಮಾವೇಶದ ಕೊನೆಗೆ ಅಂಗೀಕರಿಸಲಾದ ಅಂತಿಮ ಒಡಂಬಡಿಕೆಗೆ ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅನುಮೋದಿಸಿದಾಗ ಉಪಸ್ಥಿತರಿದ್ದ ರಾಜತಾಂತ್ರಿಕರು ಹಾಗೂ ಸಚಿರುಗ ಹರ್ಷೋದ್ಘಾರದೊಂದಿಗೆ ಕರತಾಡನಗೈದರು.

  ಪ್ಲಾಸ್ಟಿಕ್ ತ್ಯಾಜ್ಯ, ಅಕ್ರಮ ಹಾಗೂ ಮಿತಿ ಮೀರಿದ ಮೀನುಗಾರಿಕೆ, ಚಿಕ್ಕಪುಟ್ಟ ದ್ವೀಪಗಳ ಮುಳುಗಡೆಗೆ ಕಾರಣವಾಗುವ ಸಮುದ್ರಮಟ್ಟದಲ್ಲಿನ ಏರಿಕೆ ಹಾಗೂ ಸಮುದ್ರ ನೀರಿನಲ್ಲಿ ಆಮ್ಲೀಯತೆಯ ಮಿಶ್ರಣದಿಂದಾಗಿ ಸಮುದ್ರಜೀವಿಗಳ ನಾಶ ಇತ್ಯಾದಿ ಬೆದರಿಕೆಗಳನ್ನು ಎದುರಿಸಲು ಜಗತ್ತಿನಾದ್ಯಂತದ ಜನತೆ ಹಾಗೂ ಸಂಘಟನೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕೆಂದು ಸಮಾವೇಶ ಕರೆ ನೀಡಿದೆ.

    ಸಾಗರಗಳ ರಕ್ಷಣೆಗೆ ಕಾರ್ಯಪ್ರವೃತ್ತವಾಗಬೇಕೆಂಬ ಕರೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅನುಮೋದನೆ ನೀಡಿದರೂ, ಕಾರ್ಯಯೋಜನೆಯಲ್ಲಿನ ಕೆಲವು ನಿರ್ದಿಷ್ಟ ನಿಯಮಾವಳಿಗಳಿಂದ ದೂರವುಳಿಯಲು ಈಜಿಪ್ಟ್ ಹಾಗೂ ರಶ್ಯ ಸರಕಾರಗಳು ನಿರ್ಧರಿಸಿದವು.ಸಮಾವೇಶದಲ್ಲಿ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಬ್ಲೇಟನ್ ಮಾತನಾಡಿ ಪ್ರಸಕ್ತ ಹಾಗೂ ಮುಂದಿನ ತಲೆಮಾರಿಗಾಗಿ ಸಾಗರಗಳ ರಕ್ಷಣೆ ಹಾಗೂ ಅವುಗಳ ಸುಸ್ಥಿರ ನಿರ್ವಹಣೆಯನ್ನು ಉತ್ತೇಜಿಸಲು ಹಾಗೂ ಸಮುದ್ರಗಳಿಗೆ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಅಮೆರಿಕವು ವಿಶ್ವಸಂಸ್ಥೆಯ ಜೊತೆಗೂಡಿ ಶ್ರಮಿಸಲಿದೆ ಎಂದರು.

ಸಮಾವೇಶವು ಯಶಸ್ವಿಯಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ವಿಶ್ವಸಂಸ್ತೆಯ ಮಹಾಧಿವೇಶನದ ಅಧ್ಯಕ್ಷ ಪೀಟರ್ ಥಾಮ್ಸನ್ ಅವರು, ಸಾಗರಗಳ ದುಸ್ಥಿತಿಯೆಡೆಗೆ ಸಾಗುತ್ತಿರುವುದು ತಮಗೆ ಅರಿವಿಲ್ಲವೆಂದು, ಈಗ ಯಾರೂ ಹೇಳಲಾರರು ಎಂದು ಅಭಿಪ್ರಾಯಿಸಿದರು.
   ಸಾಗರಗಳು ಸಮಗ್ರ ಮಾನವ ಕುಲದ ಪರಂಪರೆಯಾಗಿದ್ದು, ಅವುಗಳ ಆರೋಗ್ಯವನ್ನು ಮರುಸ್ಥಾಪಿಸುವ ಬಗ್ಗೆ ಈವರೆಗೆ ಯಾವುದೇ ಗಂಭೀರವಾದ ಪ್ರಯತ್ನಗಳು ನಡೆಯದಿರುವುದರ ಬಗ್ಗೆ ಯೂ ಥಾಮ್ಸನ್ ಅಚ್ಚರಿ ವ್ಯಕ್ತಪಡಿಸಿದರು.

ಸಾಗರಗಳು ಸಾವನ್ನಪ್ಪಿದಲ್ಲಿ ನಾವು ಸತ್ತಂತೆಯೇ ಸರಿ.ಸಮುದ್ರದ ವಿಷಯಕ್ಕೆ ಬರುವಾಗ ನಾವು ಅಥವಾ ಅವರು ಎಂಬ ಭೇದವಿರದು. ಅದು ನಮ್ಮೆಲ್ಲರಿಗೂ ಸೇರಿದ್ದಾಗಿದೆ.
-ಪೀಟರ್ ಥಾಮ್ಸನ್, ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧ್ಯಕ್ಷ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X