ಕುಕ್ಕಾಜೆ: ರಮಝಾನ್ ಅಧ್ಯಯನ ಶಿಬಿರ
ಬಂಟ್ವಾಳ, ಜೂ. 10: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕುಕ್ಕಾಜೆ ಯುನಿಟ್ ವತಿಯಿಂದ ಜೂ. 11ರಂದು ಮಧ್ಯಾಹ್ನ 1:30ಕ್ಕೆ ಶಂಸುಲ್ ಉಲಮಾ ಕ್ರಿಯಾ ಸಮಿತಿ ಕುಕ್ಕಾಜೆ ಕಚೇರಿಯಲ್ಲಿ ರಮಝಾನ್ ಅಧ್ಯಯನ ಶಿಬಿರ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸೆಯ್ಯದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಶರೀಫ್ ಸಾಹಿಬ್ ಪೊನ್ನಾನಿ, ಅಬ್ದುಲ್ಲಾ ರಹ್ಮಾನಿ ಕಾಸರಗೋಡು, ಹಸನ್ ಅರ್ಶದಿ ಕರಾಯ, ಇಸ್ಮಾಯಿಲ್ ಯಮಾನಿ ತಿಂಗಳಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





