ಟಿಪ್ಪುಸುಲ್ತಾನ್ ಪತ್ರಗಳು: ಕಲ್ಲು ಇಟ್ಟಿಗೆಗಳಿಂದ ಕಟ್ಟಿದ ಪ್ರತೀ ಸ್ಮಾರಕವೂ ಪಿಸುಗುಡುವುದಾದರೂ ಏನನ್ನು?
ಇತಿಹಾಸ-ವರ್ತಮಾನ
![ಟಿಪ್ಪುಸುಲ್ತಾನ್ ಪತ್ರಗಳು: ಕಲ್ಲು ಇಟ್ಟಿಗೆಗಳಿಂದ ಕಟ್ಟಿದ ಪ್ರತೀ ಸ್ಮಾರಕವೂ ಪಿಸುಗುಡುವುದಾದರೂ ಏನನ್ನು? ಟಿಪ್ಪುಸುಲ್ತಾನ್ ಪತ್ರಗಳು: ಕಲ್ಲು ಇಟ್ಟಿಗೆಗಳಿಂದ ಕಟ್ಟಿದ ಪ್ರತೀ ಸ್ಮಾರಕವೂ ಪಿಸುಗುಡುವುದಾದರೂ ಏನನ್ನು?](https://www.varthabharati.in/sites/default/files/images/articles/2017/06/11/tippu.jpg)
ಪತ್ರಮಾಲಿಕೆ-2
ಈಜಿಪ್ಟಿನ ಪೆರ್ರೋಗಳು ಭಾರೀ ಗಾತ್ರದ ಪಿರಮಿಡ್ಡುಗಳನ್ನು ಗುಲಾಮರ ಬೆವರಿನಿಂದ ಕಟ್ಟಿದರು.
ಲಕ್ಷಾಂತರ ಗಂಡಸು ಮತ್ತು ಹೆಂಗಸರನ್ನು ಚಾಟಿಯೇಟಿನಿಂದ ಬಿಗಿದು ಅವರ ರಕ್ತಮಾಂಸ ಮೂಳೆಗಳಿಂದ ಚೀನಾದ ಮಹಾಗೋಡೆಯನ್ನು ಕಟ್ಟಲಾಯಿತು.
ರಕ್ತ ಒಸರುವ ಗಾಯಗಳಿಗೆ ಕಾರಣವಾಗುವ ಕಬ್ಬಿಣದ ಸರಪಳಿಗಳಿಂದ ಬಂಧಿಸಿ ಜನರನ್ನು ಸಾಯುವಂತೆ ಬಡಿದು ರೋಮ್, ಬ್ಯಾಬಿಲೋನಿಯ ಮತ್ತು ಗ್ರೀಸ್ನ ಸಾಮ್ರಾಜ್ಯದ ಮಹೋನ್ನತ ಕಟ್ಟಡಗಳನ್ನು ನಿರ್ಮಿಸಲಾಯಿತು.
ನನಗ ತಿಳಿದಿರುವಂತೆ
ವಾಸ್ತುಶಿಲ್ಪದ ಶ್ರೇಷ್ಠ ಮಾದರಿಯೆಂದು ಕರೆಯಲ್ಪಡುವ ಪ್ರತೀ ಕಲಾಕೃತಿಯು ಅದನ್ನು ಕಟ್ಟಲು ಹೇಳಿದ ಸಾಮ್ರಾಟನದಲ್ಲ.
ಬದಲಾಗಿ ನೆತ್ತರು ಬಸಿದು, ಕೊನೆಯಿರದ ಯಾತನೆಯಿಂದ ನರಳಿ ಸಾವನ್ನಪ್ಪಿದ ದುರದೃಷ್ಟ ಶ್ರಮಿಕರ ಚಿರನೆನಪು.
ಕಲ್ಲು, ಇಟ್ಟಿಗೆಗಳಿಂದ ಕಟ್ಟಿದ ಪ್ರತೀ ಸ್ಮಾರಕವೂ ಪಿಸುಗುಡುವುದಾದರೂ ಏನನ್ನು ?
ಮೂರ್ಖ ಸಾಮ್ರಾಟನ ಹುಂಬ ಭ್ರಮೆಗಳನ್ನು ಸಾಕಾರಗೊಳಿಸಲು ಪ್ರತೀ ಮನೆ ಮನೆಗಳಿಂದ, ಸರಪಳಿಗಳಿಂದ ಬಿಗಿದು ಎಳೆದೊಯ್ದ ಜನರ ನೋವು ಮತ್ತು ನಿಟ್ಟುಸಿರನ್ನು.
ಆದರೆ ನನ್ನ ತಾಯ್ನಡು ಭಾರತದ ಪರಂಪರೆ ತಿಳಿದಿದೆಯೇ?
ತಾಜ್ಮಹಲಿನಿಂದ ಹಿಡಿದು ಎರಡು ಸಾವಿರ ವರುಷಗಳ ಸಾಂಚಿ ಸ್ತೂಪದವರೆಗೆ, ಪ್ರತಿಯೊಂದನ್ನು, ಭಕ್ತಿಭಾವ, ಅರ್ಪಣಾಭಾವದಿಂದ ಕಟ್ಟಲಾಯಿತು.
ಅಷ್ಟೇ ಯಾಕೆ?
ಸಾವಿರಾರು ವರ್ಷಗಳ ನಮ್ಮ ಚರಿತ್ರೆಯಲ್ಲಿ ಯಾವುದಾದರು ಒಂದು, ಒಂದೇ ಒಂದು ಸ್ಮಾರಕವನ್ನು, ಜನರನ್ನು ಹಿಂಸಿಸಿ, ಒತ್ತಾಯ ಪೂರ್ವಕವಾಗಿ ಕಟ್ಟಿದ ಒಂದೇ ಒಂದು ಉದಾಹರಣೆಯನ್ನು ತೋರಿಸಿ.
ನೀವು ತೋರಿಸಲಾರಿರಿ ಸಾಧ್ಯವೇ ಇಲ್ಲ.
ನನಗೆ ಚೆನ್ನಾಗಿ ಗೊತ್ತು !
ಎರಡು ಸಾವಿರ ವರುಷಗಳಿಂದ ಕ್ಷಮಿಸಿ
ಇತಿಹಾಸ ಪೂರ್ವದಿಂದಲೂ, ಎಂದೂ ಈ ನಾಡು ಜನರನ್ನು ಹಿಂಸಿಸಿ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುವ ವಿದೇಶಿಯರ ಕೆಟ್ಟ ಸಂಪ್ರದಾಯವನ್ನು ಅನುಕರಿಸಲಿಲ್ಲ.