Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇತ್ತೀಚಿನ 3 ಸುಳ್ಳು ಸುದ್ದಿಗಳ ಹಿಂದಿನ...

ಇತ್ತೀಚಿನ 3 ಸುಳ್ಳು ಸುದ್ದಿಗಳ ಹಿಂದಿನ ಯೋಜಿತ ಕಾರ್ಯತಂತ್ರ

ದಿನೇಶ್ ಅಮೀನ್ ಮಟ್ಟುದಿನೇಶ್ ಅಮೀನ್ ಮಟ್ಟು11 Jun 2017 10:17 PM IST
share
ಇತ್ತೀಚಿನ 3 ಸುಳ್ಳು ಸುದ್ದಿಗಳ ಹಿಂದಿನ ಯೋಜಿತ ಕಾರ್ಯತಂತ್ರ

ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಸುದ್ದಿ ಯಂತ್ರಗಳು ರಾತ್ರಿ-ಹಗಲು ಸಕ್ರಿಯವಾಗುತ್ತಿರುವುದಕ್ಕೆ ಇತ್ತೀಚಿನ ಮೂರು ಸುಳ್ಳು ಸುದ್ದಿಗಳೇ ಪುರಾವೆ.

1.ಪ್ಲಾಸ್ಸಿಕ್ ಅಕ್ಕಿ-ಮೊಟ್ಟೆ ಇತ್ಯಾದಿ. 2. ಅಂಗನವಾಡಿಯಲ್ಲಿ ಪರಿಶಿಷ್ಟಜಾತಿ-ಪಂಗಡದ ಮಕ್ಕಳಿಗೆ ಐದು ಮೊಟ್ಟೆ ಮತ್ತು ಇತರರಿಗೆ ಮೂರು ಮೊಟ್ಟೆ 3. ರೈತನ ಖಾತೆಗೆ ಒಂದು ರೂಪಾಯಿ ಜಮೆ.

ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಹಣ್ಣು ತರಕಾರಿ ಇತ್ಯಾದಿ ಸುದ್ದಿಗಳ ಹಿಂದಿನ ಹಕೀಕತ್ತು ಬಗ್ಗೆ ಮೊದಲು "ಪ್ರಜಾವಾಣಿ"ಯ ತನ್ನ ಅಂಕಣದಲ್ಲಿ ಇಸ್ಮಾಯಿಲ್ ಬರೆದರು. ಅದರ ನಂತರ "ಬೆಂಗಳೂರು ಮಿರರ್" ಪತ್ರಿಕೆ ಪ್ಲಾಸ್ಟಿಕ್ ಅಕ್ಕಿಯನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ತಜ್ಞರಿಂದ ಪರೀಕ್ಷೆಗೊಳಪಡಿಸಿ ಅದು ಸುಳ್ಳೆಂದು ವರದಿ ಮಾಡಿತು. ಕೊನೆಗೆ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಅವರು ರಾಜ್ಯದ ಐದು ಪ್ರಯೋಗಾಲಯಗಳಿಗೆ ಪ್ಲಾಸ್ಟಿಕ್ ಅಕ್ಕಿ ಕಳುಹಿಸಿ ಪರೀಕ್ಷೆ ಮಾಡಿಸಿ ಅದು ನಿಜ ಅಲ್ಲ ಎಂದು ಹೇಳಿದ್ದಾರೆ.

ಎರಡನೆಯದಾಗಿ, ಎಸ್ ಸಿ ಮತ್ತು ಎಸ್ ಟಿ ಮಕ್ಕಳಿಗೆ ಐದು ಮೊಟ್ಟೆ ಮತ್ತು ಇತರರಿಗೆ ಮೂರು ಮೊಟ್ಟೆ ಎನ್ನುವ ಸುದ್ದಿ ಇದ್ದಕ್ಕಿದ್ದ ಹಾಗೆ ಹರಡತೊಡಗಿತು. ಯಾವುದೇ ತಾರತಮ್ಯ ಇಲ್ಲ ಎಂದು ರಾಜ್ಯ ಸರಕಾರ ಅಧಿಕೃತವಾಗಿ ಹೇಳಿಕೆ ನೀಡಿದರೂ ವಿವಾದ ನಿಂತಿಲ್ಲ. ಅದು ಮೊಟ್ಟೆಯಿಂದ ಹೊರಟು ಸಾಮಾಜಿಕ ನ್ಯಾಯದ ಗೇಲಿ, ಮೀಸಲಾತಿಯ ವಿರುದ್ದದ ಕೂಗಾಗಿ ಬೆಳೆಯುತ್ತಿದೆ.

ಮೂರನೆಯದಾಗಿ ರೈತನ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಜಮೆಯ ಸುದ್ದಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿಯೇ ಮೊದಲು ಕಾಣಿಸಿಕೊಂಡು ನಂತರ ಟಿವಿ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಚರ್ಚೆಗೀಡಾಯಿತು. ರೈತರ ಖಾತೆಗಳ ದೃಢೀಕರಣಕ್ಕಾಗಿ ಒಂದು ರೂಪಾಯಿ ಜಮೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದ ನಂತರವೂ ವಿವಾದವನ್ನು ಜೀವಂತವಾಗಿಡಲಾಗಿದೆ.

ಅಕ್ಕಿ,ಮೊಟ್ಟೆ ಮತ್ತು ರೈತನನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಸೃಷ್ಟಿಯಾಗಿರುವ ಈ ಸುದ್ದಿಗಳು ಕೇವಲ ವಿಕೃತ ಖುಷಿ ಇಲ್ಲವೇ ತಮಾಷೆಯ ಉದ್ದೇಶದ್ದಲ್ಲ. ಇದರ ಹಿಂದೆ ಯೋಜಿತ ಕಾರ್ಯತಂತ್ರ ಇದೆ. ಮುಂದಿನ ದಿನಗಳಲ್ಲಿ ಇಂತಹ ಫೇಕು ಸುದ್ದಿಗಳ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಇದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಗುಂಪುಗಳು ಹುಟ್ಟಿಕೊಂಡಿವೆ. ಸರ್ಕಾರ, ಪೊಲೀಸರು ಇದರ ಬಗ್ಗೆ ಏನು ಮಾಡಬಹುದೋ ಅದನ್ನು ಅವರು ಮಾಡುತ್ತಾರೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳನ್ನು ಮುಕ್ತ ಚರ್ಚೆ-ಸಂವಾದಗಳ ಅಂಗಳವಾಗಿ ಉಳಿಸಬೇಕೆನ್ನುವವರು ಏನು ಮಾಡಬೇಕೆಂಬುದನ್ನು ಚಿಂತನೆ ಮಾಡಬೇಕಾಗಿದೆ.

ಇಂತಹ ಫೇಕು ಸುದ್ದಿಗಳ ಪ್ರಸಾರ-ಪ್ರಕಟಣೆ ದೊಡ್ಡ ಸಮಸ್ಯೆ ಅಲ್ಲ, ಆದರೆ ಇಂತಹ ಫೇಕುಗಳನ್ನು  ಸೈದ್ಧಾಂತಿಕವಾಗಿ ವಿರೋಧಿಸುವವರು ಕೂಡಾ ತಮಗೆ ಅರಿವಿಲ್ಲದಂತೆ ಇಂತಹ ಸುದ್ದಿಗಳನ್ನು ಷೇರ್ ಮಾಡಿ ಅದಕ್ಕೆ ಪ್ರತಿಕ್ರಿಯಿಸಿದವರ ಜತೆ ಚರ್ಚೆ ಮಾಡುತ್ತಾ ಯಾರೋ ತೋಡಿರುವ ಗುಂಡಿಗೆ ಬೀಳುತ್ತಿರುವುದು ಅಪಾಯಕಾರಿ ಬೆಳವಣಿಗೆ.

ಮುಜಾಫರ್ ನಗರದ ಗಲಭೆಯೂ ಸೇರಿದಂತೆ ದೇಶದಾದ್ಯಂತ ಇತ್ತೀಚೆಗೆ ನಡೆದ ಕೋಮುಗಲಭೆಗಳು ವಾಟ್ಸಪ್ ಸಂದೇಶಗಳ ಮೂಲಕ ಹುಟ್ಟಿಕೊಂಡದ್ದನ್ನು ಮರೆಯುವಂತಿಲ್ಲ. ಅಂತಹದ್ದೊಂದು ಅಪಾಯದ ಸೂಚನೆಯನ್ನು ಗ್ರಹಿಸದೆ ಗಾಸಿಪ್ ಗಾಳಿಯಲ್ಲಿ ನಾವೂ ತೇಲಿಹೋದರೆ ಇತಿಹಾಸ ನಮ್ಮನ್ನು ಕ್ಷಮಿಸಲಾರದು.

(ದಿನೇಶ್ ಅಮೀನ್ ಮಟ್ಟು ಅವರ ರವಿವಾರದ ಫೇಸ್ ಬುಕ್ ಪೋಸ್ಟ್)

share
ದಿನೇಶ್ ಅಮೀನ್ ಮಟ್ಟು
ದಿನೇಶ್ ಅಮೀನ್ ಮಟ್ಟು
Next Story
X