Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ12 Jun 2017 12:12 AM IST
share
ಓ ಮೆಣಸೇ...

ಭಾರತ ಒಂದು ಮಾಲಿನ್ಯ ಕಾರಕ ದೇಶ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ನಿಮ್ಮ ದೇಶದ ಮಾಲಿನ್ಯಗಳೆಲ್ಲ ನಮ್ಮಲ್ಲಿ ತಂದು ಸುರಿದರೆ ಇನ್ನೇನಾಗುತ್ತದೆ?
---------------------
ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ವಾಡಿಕೆ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಆದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ವಾಡಿಕೆಯಲ್ಲಿ ಬರುವುದಿಲ್ಲವೇ?
---------------------
ದೇಶದಲ್ಲಿ ಎಲ್ಲರೂ ವಿದ್ಯಾವಂತರಾದರೆ ಬಡತನ ಕಡಿವೆುಯಾಗಬಹುದು -ಕೆ.ವಸಂತ ಬಂಗೇರ, ಶಾಸಕ

ವಿದ್ಯಾವಂತರು ಫೇಸ್‌ಬುಕ್‌ನಲ್ಲಿ ಗದ್ದೆ ಉತ್ತು ಅಕ್ಕಿ ಬೆಳೀತಾರೆ ಎಂದು ತಿಳಿದುಕೊಂಡಿರಬೇಕು.

---------------------

ದೇವರ ಮೇಲಿನ ನಂಬಿಕೆ ಮೂಢ ನಂಬಿಕೆಯಾಗಬಾರದು -ವಿ.ವಿಶ್ವನಾಥ ಶೆಟ್ಟಿ , ಲೋಕಾಯುಕ್ತ ನ್ಯಾಯಮೂರ್ತಿ

ಮೋದಿಯ ಮೇಲಿನ ನಂಬಿಕೆ ಕೂಡ.

---------------------
ಗೃಹ ಖಾತೆಯನ್ನು ಯಾರಿಗೂ ಕೊಡುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದನ್ನು ನೀವಿಟ್ಟುಕೊಂಡು, ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ನನಗೆ ಕೊಡಿ ಎನ್ನುತ್ತಿದ್ದಾರೆ ಪರಮೇಶ್ವರ್.

---------------------
ಭಯೋತ್ಪಾದನೆಯ ನೋವನ್ನು ಪ್ರಪಂಚ ಅರ್ಥ ಮಾಡಿಕೊಳ್ಳಬೇಕು - ಶೋಭಾ ಕರಂದ್ಲಾಜೆ, ಸಂಸದೆ

ಈಶ್ವರಪ್ಪರ ಭಯೋತ್ಪಾದನೆ ನಿಮಗೆ ಅಷ್ಟೂ ನೋವು ತಂದಿದೆಯೇ?
---------------------
ಸಾಲ ಮನ್ನಾ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವುದು ಸರಿಯಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ರೈತರ ಮೇಲೆ ಗೋಲಿಬಾರ್ ಮಾಡುವುದು ಸರಿ ಅನ್ನುತ್ತೀರಾ?
---------------------
ಗೋರಕ್ಷಣೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ - ಭಯ್ಯಿ ಜೋಶಿ, ಆರೆಸ್ಸೆಸ್ ನಾಯಕ

ಆದರೆ ಅದು ಆರೆಸ್ಸೆಸ್‌ನ ಸಂಚಾಲಕರಿಗೆ ಅರ್ಥವಾಗಬೇಕಲ್ಲ?
---------------------
ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥ್ ರೀತಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಲಿ -ಅನಂತ್ ಕುಮಾರ್, ಕೇಂದ್ರ ಸಚಿವ

ಉತ್ತರ ಪ್ರದೇಶದ ಮೇಲೆ ಕೇಂದ್ರ ಕೃಪೆ ತೋರಿದಂತೆ, ಕರ್ನಾಟಕ ಮೇಲೆ ಕೃಪೆ ತೋರುವುದಕ್ಕೆ ತಾವು ಒತ್ತಡ ಹಾಕಬಾರದೇ?
---------------------
ಕಾಂಗ್ರೆಸ್ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಹೋರಾಡಿದೆ - ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ನೀವೀಗ ದೇಶವನ್ನೇ ಅಮೆರಿಕಕ್ಕೆ ಕೊಟ್ಟು ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲು ಹೊರಟಿದ್ದೀರಾ?
---------------------
ಕಾಂಗ್ರೆಸ್ ಪಕ್ಷದಲ್ಲಿ ಇರುವುದೋ ಬಿಡುವುದೋ ಗೊತ್ತಾಗ್ತಾಯಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ

ನೀವೀಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದೀರೋ ಇಲ್ಲವೋ ಎನ್ನುವ ಬಗ್ಗೆ ಜನರಿಗೂ ಗೊಂದಲವಿದೆ.

---------------------
ಬಿಜೆಪಿ ,ಆರೆಸ್ಸೆಸ್ ವಿರುದ್ಧ ಹೋರಾಡಲು ಭಗವದ್ಗೀತೆ, ಉಪನಿಷತ್ ಅಧ್ಯಯನ ಮಾಡುತ್ತಿದ್ದೇನೆ -ರಾಹುಲ್‌ಗಾಂಧಿ,  ಕಾಂಗ್ರೆಸ್ ಉಪಾಧ್ಯಕ್ಷ

ಮೊದಲು ದೇಶದ ರೈತರ ಕಷ್ಟ ಸುಖ ಅಧ್ಯಯನ ಮಾಡಿ. ಹೋರಾಡುವುದಕ್ಕಿರುವ ಮಾರ್ಗ ಅದೇ.

---------------------
ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಹಳಿಯಲ್ಲಿ ಸಾಗದು - ಸುಶ್ಮಾ ಸ್ವರಾಜ್,   ಕೇಂದ್ರ ಸಚಿವೆ

ಬಿಜೆಪಿ ಮತ್ತು ಆರೆಸ್ಸೆಸ್ ಇದ್ದಂತೆ ಎರಡು ಹಳಿ ಬೇಕು ಅಂತೀರಾ?
---------------------
ಕಲಾವಿದರು, ಕ್ರಿಕೆಟಿಗರೆಲ್ಲ ಬಾಂಬ್ ಹಾಕುವವರಲ್ಲ,ಅವರು ಸಂಬಂಧದ ಸೇತುಗಳು - ಪರೇಶ್‌ರಾವಲ್, ನಟ, ಸಂಸದ

ಅಮಾಯಕರನ್ನು ಮಿಲಿಟರಿ ಜೀಪಿಗೆ ಕಟ್ಟಲು ಹೇಳುವ ಕಲಾವಿದರ ಬಗ್ಗೆ ನಿಮ್ಮ ಅಭಿಪ್ರಾಯ?

---------------------
ನಾನಂತೂ ಪೂರ್ಣ ಪ್ರಮಾಣದ ಮಾಂಸಾಹಾರಿ - ವೆಂಕಯ್ಯ ನಾಯ್ಡು, ಕೆಂದ್ರ ಸಚಿವ

ಹಾಗಾದರೆ ನಿಮ್ಮ ಫ್ರಿಡ್ಜ್ಜ್‌ನ್ನೊಮ್ಮೆ ತಪಾಸಣೆ ಮಾಡಲೇ ಬೇಕು.

---------------------
ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮುಗಿದ ಅಧ್ಯಾಯ - ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

ಅಂದರೆ ರಾಯಣ್ಣನನ್ನು ಬ್ರಿಟಿಷರು ಮಾಡಿದಂತೆ, ಬ್ರಿಗೇಡ್‌ನ್ನು ನೇಣಿಗೇರಿಸಿ ಆಯಿತೇ?
---------------------
ಸದನದಲ್ಲಿ ಎಲ್ಲಿ ನೋಡಿದರೂ ಇಲಿ ,ಹೆಗ್ಗಣಗಳ ಕಾಟ ಇದೆ -ತಾರಾ ಅನುರಾಧಾ, ಬಿಜೆಪಿ ಸದಸ್ಯೆ

ಅದಕ್ಕೆ ಮತದಾರರೇ ಹೊಣೆ.

---------------------
ಶಿವಾಜಿ ಸ್ಥಾಪಿಸಿದ ಹಿಂದೂಸ್ಥಾನದಲ್ಲಿ ನಾನಿದ್ದೇನೆ. ನಾನು ಭಾಗ್ಯವಂತ - ಪಿ.ಪಿ.ಚೌಧರಿ, ಕೇಂದ್ರ ಸಚಿವ

ಶಿವಾಜಿ ಸ್ಥಾಪಿಸಿದ ಸಾಮ್ರಾಜ್ಯವನ್ನು ಪೇಶ್ವೆಗಳು ಕಿತ್ತುಕೊಂಡ ಇತಿಹಾಸ ನಿಮಗೆ ಗೊತ್ತಿಲ್ಲವೇ?
---------------------
ಭಾರತದಲ್ಲಿ ಪರಿವರ್ತನೆಯ ಹೊಸ ಗಾಳಿ ಬೀಸುತ್ತಿದೆ -ನಳಿನ್ ಕುಮಾರ್ ಕಟೀಲು, ಸಂಸದ

 ಹೌದು, ಬಡವರನ್ನು ಇನ್ನಷ್ಟು ಬಡವರನ್ನಾಗಿ ಪರಿವರ್ತಿಸುವ ಗಾಳಿ
    

share
ಪಿ.ಎ.ರೈ
ಪಿ.ಎ.ರೈ
Next Story
X