Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನ ಅಜ್ಜಿಯ "ಉಪ್ಪಿನ ಉಪವಾಸ"ದ ಹಿಂದಿನ...

ನನ್ನ ಅಜ್ಜಿಯ "ಉಪ್ಪಿನ ಉಪವಾಸ"ದ ಹಿಂದಿನ ರಹಸ್ಯ ಏನು?

ನನ್ನ ರಮಝಾನ್ ಅನುಭವ

ಎಂ.ಆರ್.ಮಾನ್ವಿಎಂ.ಆರ್.ಮಾನ್ವಿ14 Jun 2017 6:08 PM IST
share
ನನ್ನ ಅಜ್ಜಿಯ ಉಪ್ಪಿನ ಉಪವಾಸದ ಹಿಂದಿನ ರಹಸ್ಯ ಏನು?

ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಎಲ್ಲರಿಗೂ ಗೊತ್ತು. ಆದರೆ ಈ ಅಜ್ಜಿಯ ಉಪ್ಪಿನ ಉಪವಾಸ ಯಾವುದು ಎಂದು ಹುಬ್ಬೇರಿಸಬಹುದು. ಹೌದು ನನ್ನಜ್ಜಿಯ ಉಪ್ಪಿನ ಉಪವಾಸದ ಕಥೆ ಹೇಳಲೇಬೇಕು. ರಮಝಾನ್ ನಲ್ಲಿ 30 ಉಪವಾಸಗಳಿದ್ದರೂ ನನ್ನಜ್ಜಿಗೆ ಇರುವುದು ವರ್ಷಕ್ಕೆ ಕೇವಲ ಎರಡೇ ಉಪವಾಸಗಳು. ಅವರು ಆಚರಿಸುವ ಉಪವಾಸದ ರೀತಿಯೂ ವಿಶಿಷ್ಟ. ಕೇವಲ ಉಪ್ಪಿನ ಒಂದು ಹರಳನ್ನು ಬಾಯಿಗೆ ಹಾಕಿ ನೀರು ಕುಡಿದು ದಿನಪೂರ್ತಿ ಉಪವಾಸವಿರುವುದು ನನ್ನಜ್ಜಿಯ ಉಪವಾಸದ ರೀತಿ. ಹೀಗೆ ಎರಡು ದಿನಗಳು ಮಾತ್ರ ಆಕೆ ಇದನ್ನು ಪಾಲಿಸುತ್ತಿದ್ದು, ಉಳಿದ 28 ದಿನಗಳ ಕಾಲ ಉಪವಾಸ ಆಚರಿಸುತ್ತಿರಲಿಲ್ಲ. 

ನಾನು ಉಲ್ಲೇಖಿಸುತ್ತಿರುವುದು ಸುಮಾರು 30-35 ವರ್ಷಗಳ ಹಿಂದಿನ ಘಟನೆ. ನನ್ನ ತಂದೆಯ ಅಮ್ಮ ಅಂದರೆ ನನ್ನ ಅಜ್ಜಿ ತುಂಬಾ ಬಡತನದಲ್ಲಿ ಬದುಕಿದವರು. ನಾನಾಗ ಕೇವಲ 10-12 ವರ್ಷದ ಬಾಲಕ. ನನಗೂ ರಮಝಾನ್ ತಿಂಗಳು ಬಂತೆಂದರೆ ಎಲ್ಲಿಲ್ಲದ ಖುಷಿ. ಮನೆಯಲ್ಲಿ ಅಮ್ಮನ ಜೋಳದ ರೊಟ್ಟಿಯ ಹೊರತಾಗಿ ಸಂಜೆ ವೇಳೆ ಮಸೀದಿಯಲ್ಲಿ ಬೇರೆ ಬೇರೆ ಮನೆಗಳಿಂದ ತರತರಹದ ಅಡುಗೆ ರುಚಿ ನೋಡುವ ಒಂದು ಸುವರ್ಣಾವಕಾಶವನ್ನು ರಮಝಾನ್ ನನಗೆ ಒದಗಿಸುತ್ತಿತ್ತು. ಉಪವಾಸವಿಲ್ಲದಿದ್ದರೂ ಉಪವಾಸಿಗನಂತೆ ನಟಿಸಿ ಮಸೀದಿಯಲ್ಲಿ ದೊರೆಯುವ ಇಫ್ತಾರ್ ಭೋಜನಕ್ಕೆ ಹಾಜರಾಗುವುದು ನನ್ನ ಹಾಗೂ ನನ್ನ ಸ್ನೇಹಿತರ ನಿತ್ಯಕರ್ಮವಾಗಿದ್ದವು. ಮನೆಯಲ್ಲಿ ಬಡತನದ ಬೇಗೆಯಿಂದ ಬಳಲುತ್ತಿದ್ದ ಆ ಕಾಲದಲ್ಲಿ ರುಚಿಶುಚಿಯಾದ ಊಟ ಸಿಗುವುದೆಂದರೆ ಕೇವಲ ಎರಡು ಹಬ್ಬಗಳ ಸಂದರ್ಭದಲ್ಲಿ ಮಾತ್ರ. ಅದು ಬಿಟ್ಟರೆ ಈ ರಮಝಾನ್ ಉಪವಾಸ ತೊರೆಯುವ ಇಫ್ತಾರ್ ಸಮಯದಲ್ಲಿ. 

ಈಗ ಅಜ್ಜಿಯ ಉಪ್ಪಿನ ಉಪವಾಸಕ್ಕೆ ಬಂದರೆ ಈಗಲೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕೆಲ ಹಿರಿ ತಲೆಮಾರಿನವರು ಕೇವಲ ಒಂದು ಹರಳು ಉಪ್ಪು ಸೇವಿಸಿ ಉಪವಾಸ ಆಚರಿಸುವ ಪದ್ಧತಿಯುಂಟು. ಇದು ಧಾರ್ಮಿಕವೂ-ಅಧಾರ್ಮಿಕವೋ ಗೊತ್ತಿಲ್ಲ. ಆದರೆ 45 ಡಿಗ್ರಿ ಸೆಲಿಸಿಯಸ್ ಉರಿಬಿಸಿಲಿನಲ್ಲೂ ಕೇವಲ ಒಂದು ಲೋಟ ನೀರು ಮತ್ತು ಉಪ್ಪನ್ನು ಸೇವಿಸಿ ಇಡೀ ದಿನ ಉಪವಾಸ ಆಚರಿಸಲು ಅವರಿಗೆ ಯಾವ ಶಕ್ತಿ ಪ್ರೇರಣೆ ನೀಡುತ್ತದೋ ಆ ದೇವನೇ ಬಲ್ಲ. ಅಂತೂ ಉಪವಾಸಕ್ಕೆ ಅಂತಹ ದೈವಿಕ ಶಕ್ತಿಯಿದೆ ಎನ್ನುವುದು ಮಾತ್ರ ಸತ್ಯ. ಅಂದ ಹಾಗೆ ನನ್ನ ಅಜ್ಜಿಯ ಆ ಉಪ್ಪಿನ ಉಪವಾಸದ ರಹಸ್ಯ ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. 

share
ಎಂ.ಆರ್.ಮಾನ್ವಿ
ಎಂ.ಆರ್.ಮಾನ್ವಿ
Next Story
X