Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಸಿವಿನ ಅರಿವು ನೀಡುವ ರಮಝಾನ್ ಉಪವಾಸ

ಹಸಿವಿನ ಅರಿವು ನೀಡುವ ರಮಝಾನ್ ಉಪವಾಸ

ನಾನು ಕಂಡಂತೆ ರಮಝಾನ್

ಪ್ರೊ.ಆರ್. ಎಸ್. ನಾಯಕ, ಭಟ್ಕಳಪ್ರೊ.ಆರ್. ಎಸ್. ನಾಯಕ, ಭಟ್ಕಳ15 Jun 2017 6:49 PM IST
share
ಹಸಿವಿನ ಅರಿವು ನೀಡುವ ರಮಝಾನ್ ಉಪವಾಸ

ಪವಿತ್ರ ಕುರ್ ಆನ್ ಅವತೀರ್ಣಗೊಂಡ ತಿಂಗಳು ರಮಝಾನ್ ಈಗಾಗಲೇ ಆರಂಭವಾಗಿದೆ. ರಮಝಾನ್ ಮುಸ್ಲಿಮರಿಗೆ ಉಪವಾಸದ ತಿಂಗಳಾಗಿದೆ. ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳಿಂದ ದೂರವಿರುವುದಲ್ಲ, ಕೆಡುಕು, ದುರ್ವ್ಯಸನಗಳಿಂದ ದೂರವಿರುವುದಾಗಿದೆ. ಹಿಂದೂಗಳು ವಾರಕ್ಕೊಮ್ಮೆಯೋ, ಎರಡು ಸಲವೋ ಅಥವಾ ಶಿವರಾತ್ರಿ, ಸಂಕಷ್ಠಿ ಮೊದಲಾದ ದಿನಗಳಲ್ಲಿ ಉಪವಾಸ ಆಚರಿಸುವುದಿದೆ.

ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ. ಅದು ಎಷ್ಟರ ಮಟ್ಟಿಗೆ ಧಾರ್ಮಿಕವೋ ಅದಕ್ಕಿಂತ ಹೆಚ್ಚಾಗಿ ಸಾಮಾಜಿಕವೂ ಮಾನವೀಯವೂ ಆದ ಪರಿಕಲ್ಪನೆಯನ್ನು ಹೊಂದಿದೆ. ಪಶು-ಪಕ್ಷಿಗಳಿರಲಿ, ಮನುಷ್ಯನಿರಲಿ ಪ್ರತಿಯೊಂದು ಜೀವಕ್ಕೂ ದುಡಿಮೆ, ಬಿಡುವುಗಳೆರಡೂ ಮುಖ್ಯ. ನಿರಂತರವಾಗಿ ಕಾರ್ಯನಿರ್ವಹಿಸಿ ಕಾದು ಬಿಸಿಯಾಗುವ ಯಂತ್ರಕ್ಕೂ ಕಾಲಕಾಲಕ್ಕೆ ಬಿಡುವು ನೀಡಿ ಬಳಸಿದರೆ ಬಾಳಿಕೆ ಬರುತ್ತದೆ. ಮನುಷ್ಯನ ಒಡಲು ಸಹ ಒಂದು ಯಂತ್ರವೇ. ತಿಂದ ಆಹಾರವನ್ನು ಅರೆದು ಕರಗಿಸುವ ಜಠರವೂ ಅಂತಹ ಒಂದು ಯಂತ್ರ. ಸದಾ ಕಾಲ ತಿನ್ನುತ್ತಲೇ ಇದ್ದರೆ ಅದಕ್ಕೆ ಬಿಡುವು ಸಿಗುವುದಾದರೂ ಹೇಗೆ? ಅದಕ್ಕೆ ಬಿಡುವು ನೀಡಬೇಕೆಂದರೆ ಕೆಲ ಸಮಯವಾದರೂ ಹೊಟ್ಟೆಯನ್ನು ಖಾಲಿ ಬಿಡಬೇಕು. ಪಚನಕ್ರಿಯೆಯ ಅವಯವಗಳಿಗೆ ಬಿಡುವು ಸಿಕ್ಕಿ ಅವು ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಉಪವಾಸದಿಂದ ಇದು ಸಾಧ್ಯವಾಗುತ್ತದೆ.

ಉಪವಾಸದಿಂದಾಗುವ ಇನ್ನೊಂದು ಪ್ರಮುಖವಾದ ಅನುಭವ ನಮ್ಮನ್ನು ಹೆಚ್ಚು ಸಾಮಾಜಿಕರನ್ನಾಗಿಸುವುದು. ಜೊತೆಗೆ ಮಾನವೀಯ ತುಡಿತ-ಮಿಡಿತಗಳಿಗೂ ಉಪವಾಸ ಕಾರಣವಾಗುತ್ತದೆ. ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ಅರ್ಥವಾಗುವುದಿಲ್ಲ. ನೊಂದವರಿಗೆ ಮಾತ್ರವೇ ನೋವಿನ ಅನುಭವವಿರುತ್ತದೆ. ಆ ಅರಿವನ್ನು ರಮಝಾನ್ ಉಪವಾಸ ನೀಡುತ್ತದೆ. ರಮ್ಜಾನ್ ತಿಂಗಳಲ್ಲಿ ನೀಡಲಾಗುವ ದಾನಗಳೂ ಹಸಿವಿನ ಅನುಭವದ ಪ್ರೇರಣೆಯಿಂದಲೇ ಎಂದರೆ ತಪ್ಪಾಗದು. ಉಪವಾಸವು ನೋವಿನ ಸಂಕಟವನ್ನು ಗ್ರಹಿಸುವ ಅನುಭವ ನೀಡುವುದರ ಜೊತೆಗೆ, ಹಸಿದ ಹೊಟ್ಟೆಯನ್ನು ತಣಿಸಬೇಕೆಂಬ ಅರಿವನ್ನೂ ನೀಡುತ್ತದೆ.

share
ಪ್ರೊ.ಆರ್. ಎಸ್. ನಾಯಕ, ಭಟ್ಕಳ
ಪ್ರೊ.ಆರ್. ಎಸ್. ನಾಯಕ, ಭಟ್ಕಳ
Next Story
X