Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕಾಲಲ್ಲೇ ವಾಹನ ಚಲಾಯಿಸುವ ವಿಕ್ರಂ...

ಕಾಲಲ್ಲೇ ವಾಹನ ಚಲಾಯಿಸುವ ವಿಕ್ರಂ ಅಗ್ನಿಹೋತ್ರಿ

ಕೈಗಳಿಲ್ಲದಿದ್ದರೂ ಎದೆಗುಂದದ ಸಾಧಕ

ವಾರ್ತಾಭಾರತಿವಾರ್ತಾಭಾರತಿ15 Jun 2017 10:48 PM IST
share
ಕಾಲಲ್ಲೇ ವಾಹನ ಚಲಾಯಿಸುವ ವಿಕ್ರಂ ಅಗ್ನಿಹೋತ್ರಿ

ಇಂದೋರ್, ಜೂ.15: ತನ್ನ ಎರಡೂ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವ ಛಲಬಿಡದೆ, ಸವಾಲನ್ನು ಸ್ವೀಕರಿಸಿ ಈಗ ಕಾಲಲ್ಲೇ ವಾಹನ ಚಲಾಯಿಸುತ್ತಾ ಎಲ್ಲರ ಗಮನ ಸೆಳೆದಿರುವ ಘಟನೆಯಿದು.

ಇದೀಗ 45ರ ಹರೆಯದಲ್ಲಿರುವ ಇಂದೋರ್ ನಿವಾಸಿ ವಿಕ್ರಂ ಅಗ್ನಿಹೋತ್ರಿ 7 ವರ್ಷದ ಬಾಲಕನಿದ್ದಾಗ ತನ್ನ ತಾಯಿಯ ಜೊತೆ ಔತಣಕೂಟವೊಂದಕ್ಕೆ ತೆರಳಿದ್ದರು. ತಾಯಿಯ ಸ್ನೇಹಿತೆಯ ಮನೆಯಲ್ಲಿ ಔತಣ ಕೂಟ ಆಯೋಜಿಸಲಾಗಿತ್ತು. ಟೆರೇಸ್‌ನಲ್ಲಿ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದ ವಿಕ್ರಂ ಅಕಸ್ಮಾತ್ತಾಗಿ ಕಟ್ಟಡದ ಬದಿಯಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದ. ವಿದ್ಯುತ್ ಆಘಾತದಿಂದ ಆತ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ದ.

ಆದರೆ ಪೋಷಕರ ಬೆಂಬಲದಿಂದ ತನ್ನ ಅಂಗವೈಕಲ್ಯವನ್ನು ಮೀರಿ ನಿಲ್ಲುವ ಹುಮ್ಮಸ್ಸು ಬೆಳೆಸಿಕೊಂಡ ವಿಕ್ರಂ ಯಾರ ನೆರವೂ ಇಲ್ಲದೆ ಬ್ರಶ್‌ನಿಂದ ಹಲ್ಲುಜ್ಜುವ, ಮುಖ ತೊಳೆಯುವ, ಬಟ್ಟೆ ಬದಲಾಯಿಸುವ.. ಜೊತೆಗೆ ಬರೆಯುವುದನ್ನೂ ಕಲಿತುಕೊಂಡ. ಇವೆಲ್ಲವನ್ನೂ ತನ್ನ ಪಾದದ ಮೂಲಕ ನಡೆಸುತ್ತಿದ್ದ ವಿಕ್ರಂ..!

 ಇಷ್ಟಕ್ಕೇ ವಿಕ್ರಂ ಸಾಧನೆಯ ವಿವರ ನಿಲ್ಲುವುದಿಲ್ಲ. ಓರ್ವ ಉತ್ತಮ ಕ್ರೀಡಾಪಟುವಾಗಿ, ಫುಟ್‌ಬಾಲ್ ಆಟಗಾರನಾಗಿ, ಉತ್ತಮ ಈಜುಪಟುವಾಗಿ ಸಾಧಿಸಿ ತೋರಿಸಿದ ವಿಕ್ರಂ. ಆದರೆ ಇವರು ಸಾಧಿಸಬೇಕಾದ ಒಂದು ಕ್ಷೇತ್ರವಿತ್ತು.

ಎಲ್ಲವನ್ನೂ ಸ್ವಯಂ ಮಾಡುವ ನಾನು ವಾಹನ ಚಲಾಯಿಸಬಾರದೇಕೆ ಎಂಬ ಪ್ರಶ್ನೆಯನ್ನು ತಮ್ಮಲ್ಲೇ ಹಾಕಿಕೊಂಡರು ವಿಕ್ರಂ. ತನ್ನನ್ನು ಹೊರಗೆ ಕರೆದೊಯ್ಯುವ ಕಾರಿನ ಡ್ರೈವರ್ ಯಾವಾಗಲೂ ತಡವಾಗಿ ಆಗಮಿಸುತ್ತಿದ್ದ ಕಾರಣ ಸ್ನೇಹಿತರಲ್ಲಿ ‘ಲಿಫ್ಟ್’ ಕೇಳುವ ಅನಿವಾರ್ಯತೆ ಉಂಟಾಗುತ್ತಿತ್ತು. ಇದಕ್ಕೆ ವಾಹನ ಚಾಲನೆ ಕಲಿಯುವುದೇ ಸೂಕ್ತ ಪರಿಹಾರ ಎಂದು ನಿರ್ಧರಿಸಿದೆ ಎನ್ನುತ್ತಾರೆ ವಿಕ್ರಂ.

  ಆರಂಭದಲ್ಲಿ ಸ್ನೇಹಿತರ ಕಾರಿನಲ್ಲಿ ಡ್ರೈವಿಂಗ್ ಕಲಿಕೆ ಆರಂಭ. ಬಳಿಕ ತನಗೆಂದೇ ಕಾರೊಂದನ್ನು ಖರೀದಿಸಿದರು. ಈ ಕಾರಿಗೆ ಆ್ಯಕ್ಸಿಲೇಟರ್ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿತ್ತು. ಇದೀಗ ವಿಕ್ರಂ ತಮ್ಮ ಕಾಲುಗಳಿಂದಲೇ ವಾಹನ ಚಲಾಯಿಸಬಲ್ಲ ಓರ್ವ ನಿಷ್ಣಾತ ಡ್ರೈವರ್ ಆಗಿದ್ದಾರೆ.
ಕಾರು ಚಾಲನೆ ಮಾಡುವುದು ನನಗೆ ಅತ್ಯಾನಂದ ನೀಡುವ ಕಾರ್ಯವಾಗಿದೆ. ನನಗೆ ಕೈಗಳಿಲ್ಲ ಎಂದು ಯಾವತ್ತೂ ಕೊರಗದೆ ಆತ್ಮವಿಶ್ವಾಸದಿಂದ ಮುಂದಡಿ ಇಟ್ಟಿರುವುದು ಇಷ್ಟೆಲ್ಲಾ ಸಾಧಿಸಲು ಕಾರಣವಾಗಿದೆ ಎಂಬುದು ವಿಕ್ರಂ ಅವರ ಮನದಾಳದ ಮಾತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X