ಬ್ಯಾಲೆನ್ಸ್
![ಬ್ಯಾಲೆನ್ಸ್ ಬ್ಯಾಲೆನ್ಸ್](https://www.varthabharati.in/sites/default/files/images/articles/2017/06/15/zlkkkhd.jpg)
ಅಲ್ಲಿ ಗಲಭೆ ನಡೆಯುತ್ತಿತ್ತು.
ಕೊಲೆಯೂ ಆಯಿತು.
ಪೊಲೀಸರು ಸಮಾನತೆಯನ್ನು ಪಾಲಿಸಿದರು.
ಎರಡೂ ಸಮುದಾಯದವರನ್ನು ಒಂದೇ ದೃಷ್ಟಿಯಲ್ಲಿಟ್ಟು ಅವರು ಕಾನೂನು ಪಾಲಿಸಬೇಕಾಗಿತ್ತು.
ಬಂಧಿತರಲ್ಲಿ ಒಬ್ಬ ಹೇಳಿದ ‘‘ಸ್ವಾಮಿ, ಕೊಲೆ ನಡೆದ ದಿನ ನಾನು ಊರಲ್ಲೇ ಇರಲಿಲ್ಲ. ನಾನು ಅಮಾಯಕ’’
ಪೊಲೀಸರು ಹೇಳಿದರು ‘‘ನೋಡಿ, ಆ ಸಮುದಾಯದ 10 ಜನರನ್ನು ಬಂಧಿಸಿದ್ದೇವೆ. ಅದಕ್ಕೆ ಬದಲಾಗಿ ನಿಮ್ಮ ಸಮುದಾಯದ ಹತ್ತು ಜನರನ್ನು ನಾವು ಬಂಧಿಸಲೇಬೇಕು. ಬ್ಯಾಲೆನ್ಸ್ ಮಾಡಬೇಕಾಗಿದೆ...ಇಲ್ಲದಿದ್ದರೆ ಪಕ್ಷಪಾತ ಮಾಡಿದ್ದೇವೆ ಎಂಬ ಆರೋಪ ಬರುತ್ತದೆ’’
Next Story