Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಟೈಗರ್: ದಾರಿ ತಪ್ಪಿದ ಹುಲಿ

ಟೈಗರ್: ದಾರಿ ತಪ್ಪಿದ ಹುಲಿ

ವಾರ್ತಾಭಾರತಿವಾರ್ತಾಭಾರತಿ17 Jun 2017 11:59 PM IST
share
ಟೈಗರ್: ದಾರಿ ತಪ್ಪಿದ ಹುಲಿ

ರೀಮೇಕ್ ಸಿನೆಮಾಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಕರೆಸಿಕೊಂಡ ನಂದ ಕಿಶೋರ್ ‘ಟೈಗರ್’ ಸ್ವಮೇಕ್ ಸಿನೆಮಾ ನಿರ್ದೇಶಿಸಿದ್ದಾರೆ. ಈ ಹಿಂದೆ ಕಾಮಿಡಿ, ಆ್ಯಕ್ಷನ್ ರೀಮೇಕ್‌ಗಳನ್ನು ನಿರ್ದೇಶಿಸಿದ್ದ ಅವರು ಇಲ್ಲಿ ಈ ಎರಡೂ ಮಾದರಿಯನ್ನು ಮಿಕ್ಸ್ ಮಾಡಿದ್ದಾರೆ. ಆದರೆ ಕತೆಯನ್ನೇ ಸರಿಯಾಗಿ ಮಾಡಿಕೊಂಡಿಲ್ಲ. ಯುವನಟ ಪ್ರದೀಪ್‌ಗೆ ಹೊಂದಿಕೆಯಾಗುವಂತೆ ಫೈಟ್ ಮತ್ತು ಹಾಡಿನೊಂದಿಗೆ ಹೀರೋ ಇಂಟ್ರಡಕ್ಷನ್ ಆಗುತ್ತದೆ. ಈ ಹಂತದಲ್ಲಿ ಚಿಕ್ಕಣ್ಣನ ಹಾಸ್ಯ ಚೆನ್ನಾಗಿ ಕೆಲಸಮಾಡಿದೆ. ಒಂದೊಮ್ಮೆ ಚಿಕ್ಕಣ್ಣನ ಹಾಸ್ಯವೂ ಇರದಿದ್ದರೆ ಪ್ರೇಕ್ಷಕರು ಆರಂಭದಲ್ಲೇ ನಿರಾಶರಾಗಬೇಕಿತ್ತು. ನಾಯಕಿಯನ್ನು ಪರಿಚಯಿಸುವ ಸನ್ನಿವೇಶಗಳಲ್ಲಂತೂ ಯಾವುದೇ ಲಾಜಿಕ್ ಇಲ್ಲ. ಇಲ್ಲೆಲ್ಲಾ ಮತ್ತೆ ಚಿತ್ರವನ್ನು ಕೈಹಿಡಿಯುವುದು ಚಿಕ್ಕಣ್ಣ ಮತ್ತು ರಂಗಾಯಣ ರಘು ಅವರ ಹಾಸ್ಯ. ನಟ ಕೆ.ಶಿವರಾಂ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಇಲ್ಲಿ ಅವರು ಹೀರೋ ತಂದೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ತಂದೆ-ಮಗನ ಸಂಬಂಧದ ಕತೆಗಳು ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆ ಸಾಲಿಗೆ ಇದು ಮತ್ತೊಂದು ಸೇರ್ಪಡೆ. ಆದರೆ ಪಾತ್ರಧಾರಿಗಳ ನಟನೆಯಲ್ಲಿ ಆಪ್ತತೆಯೇ ಇಲ್ಲದಿರುವುದರಿಂದ ತಂದೆ-ಮಗನ ಸಂಬಂಧ ಭಾವುಕ ನೆಲೆಯಲ್ಲಿ ವ್ಯಕ್ತವಾಗುವುದಿಲ್ಲ. ಶಿವರಾಂ ಮೊದಲ ಬಾರಿಗೆ ಮಧ್ಯವಯಸ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಪಾತ್ರವನ್ನು ಒಗ್ಗಿಸಿಕೊಳ್ಳಲು ಪ್ರಯಾಸ ಪಟ್ಟಂತಿದೆ. ಇದು ಸಿನೆಮಾಗೆ ಬಹುದೊಡ್ಡ ಹಿನ್ನಡೆ.

ಈ ಹಿಂದೆ ಕಾಮಿಡಿ-ಆ್ಯಕ್ಷನ್ ಸಿನೆಮಾಗಳಲ್ಲಿ ಯಶಸ್ಸು ಕಂಡಿದ್ದ ನಂದಕಿಶೋರ್ ‘ಟೈಗರ್’ಗೆ ಸರಿಯಾದ ಚಿತ್ರಕಥೆ ಮಾಡಿಕೊಂಡಿಲ್ಲ. ತೆಲುಗು ಆ್ಯಕ್ಷನ್ ಸಿನೆಮಾಗಳಂತೆ ಚಿತ್ರಕಥೆ ಮಾಡಿಕೊಳ್ಳಲು ಅವರು ಯತ್ನಿಸಿದ್ದು, ಅದರಲ್ಲಿ ಅವರು ಯಶಸ್ಸು ಕಂಡಿಲ್ಲ. ಅನಗತ್ಯ ಫ್ಲಾಶ್‌ಬ್ಯಾಕ್‌ಗಳು ನೋಡುಗರಿಗೆ ಕಿರಿಕಿರಿ ಎನಿಸುತ್ತವೆ. ಆ್ಯಕ್ಷನ್ ಸನ್ನಿವೇಶಗಳನ್ನು ಭರ್ಜರಿಯಾಗಿ ಸಂಯೋಜಿಸಿದ್ದರೂ, ದಾರಿ ತಪ್ಪಿದ ಕತೆಯಿಂದಾಗಿ ಅವೆಲ್ಲಾ ಗಮನ ಸೆಳೆಯುವುದೇ ಇಲ್ಲ. ಆ್ಯಕ್ಷನ್ ಮತ್ತು ಹಾಡುಗಳಲ್ಲಿ ಮಿಂಚುವ ಹೀರೋ ಪ್ರದೀಪ್ ಭಾವನಾತ್ಮಕ ಸನ್ನಿವೇಶಗಳಲ್ಲಿನ್ನೂ ಪಳಗಬೇಕು. ನಾಯಕಿ ನೈರಾ ಬ್ಯಾನರ್ಜಿ ಹಾಡುಗಳಲ್ಲಷ್ಟೇ ಮುದ್ದಾಗಿ ಕಾಣುತ್ತಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಎರಡು ಹಾಡುಗಳು ಇಂಪಾಗಿವೆ. ಹೀರೋ-ಖಳರ ಅಬ್ಬರದಲ್ಲಿ ಹಾಸ್ಯನಟರು ಚಿತ್ರವನ್ನು ಕೊಂಚ ಸಹನೀಯವಾಗಿಸುತ್ತಾರೆ.

ನಿರ್ದೇಶನ: ನಂದ ಕಿಶೋರ್, ನಿರ್ಮಾಣ: ಚಿಕ್ಕಬೋರಮ್ಮ, ಸಂಗೀತ: ಅರ್ಜುನ್ ಜನ್ಯ, ಛಾಯಾಗ್ರಹಣ : ಸುಧಾಕರ್ ಎಸ್.ರಾಜ್, ತಾರಾಗಣ : ಪ್ರದೀಪ್, ನೈರಾ ಬ್ಯಾನರ್ಜಿ, ಕೆ.ಶಿವರಾಂ, ಓಂಪುರಿ, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ರಂಗಾಯಣ ರಘು ಮತ್ತಿತರರು.

ರೇಟಿಂಗ್ - **

share
ವಾರ್ತಾಭಾರತಿ
ವಾರ್ತಾಭಾರತಿ
Next Story
X