Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸಿಲಿಕಾನ್ ಸಿಟಿ: ನಗರ ಬದುಕಿನ ತಲ್ಲಣ

ಸಿಲಿಕಾನ್ ಸಿಟಿ: ನಗರ ಬದುಕಿನ ತಲ್ಲಣ

ವಾರ್ತಾಭಾರತಿವಾರ್ತಾಭಾರತಿ18 Jun 2017 12:00 AM IST
share
ಸಿಲಿಕಾನ್ ಸಿಟಿ: ನಗರ ಬದುಕಿನ ತಲ್ಲಣ

ಮಧ್ಯಮ ವರ್ಗದ ಕುಟುಂಬ, ಆಧುನಿಕ ಬದುಕಿನ ಲೌಕಿಕ ಸುಖಗಳನ್ನು ಅರಸುತ್ತಾ ಕ್ರೈಂಗೆ ಇಳಿಯುವ ಆ ಕುಟುಂಬದ ಯುವಕ, ಇದರಿಂದ ಒಡೆಯುವ ಮನಸ್ಸು, ಮನೆಯವರಲ್ಲಾಗುವ ತಳಮಳಗಳೇ ‘ಸಿನಿಕಾನ್ ಸಿಟಿ’ ಕಥಾವಸ್ತು. ಮೆಟ್ರೋ ನಗರಗಳಲ್ಲಿನ ಸರಗಳ್ಳತನದ ಹಿನ್ನೆಲೆಯಲ್ಲಿ ಕತೆ ಹೆಣೆದಿದ್ದು, ಬಿಗಿಯಾದ ಚಿತ್ರಕಥೆಯಿಂದಾಗಿ ಸಿನೆಮಾ ಚೆನ್ನಾಗಿ ಮೂಡಿಬಂದಿದೆ. ಕಾಲೇಜು ಯುವಕನೊಬ್ಬ ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನಕ್ಕಿಳಿಯುವ ಕತೆ ತಪ್ಪುಸಂದೇಶಕ್ಕೆ ಆಸ್ಪದವಾಗುತ್ತದೆ ಎನ್ನುವ ಸಂದೇಶವೂ ಕಾಡದಿರದು! ಆದರೆ ಈ ದುಷ್ಟತನ ಅಂತಿಮವಾಗಿ ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ ಎನ್ನುವ ತಾರ್ಕಿಕ ಅಂತ್ಯ ಸಮಾಧಾನ ತರುತ್ತದೆ.

ಕಳೆದ ವರ್ಷ ತೆರೆಕಂಡು ಯಶಸ್ವಿಯಾಗಿದ್ದ ‘ಮೆಟ್ರೋ’ ತಮಿಳು ಸಿನೆಮಾದ ರೀಮೇಕಿದು. ಹೆಚ್ಚು ಕ್ರೈಂ ಸೀನ್‌ಗಳಿವೆ ಎನ್ನುವ ಕಾರಣಕ್ಕೆ ತಮಿಳು ಸಿನೆಮಾ ಬಿಡುಗಡೆಯ ಸಂದರ್ಭದಲ್ಲಿ ಸುದ್ದಿಯಾಗಿತ್ತು. ಕತೆಯನ್ನು ಇಲ್ಲಿಗೆ ಅಳವಡಿಸುವಾಗ ನಿರ್ದೇಶಕ ಮುರಳಿ ಗುರಪ್ಪ ಕ್ರೈಂ ಸೀನ್‌ಗಳನ್ನು ಕಡಿಮೆ ಮಾಡಿದ್ದು, ಕೌಟುಂಬಿಕ ಭಾವನಾತ್ಮಕ ಸನ್ನಿವೇಶಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಉಳಿದಂತೆ ಮೂಲ ತಮಿಳು ಚಿತ್ರದಲ್ಲಿನ ಫ್ಲಾಶ್‌ಬ್ಯಾಕ್ ತಂತ್ರಗಳು ಅದೇ ರೀತಿ ಬಳಕೆಯಾಗಿವೆ. ಶ್ರೀನಿವಾಸ್ ಛಾಯಾಗ್ರಹಣ ಮತ್ತು ಚಿನ್ನ ಅವರ ಹಿನ್ನೆಲೆ ಸಂಗೀತ ಕ್ರೈಂ-ಥ್ರಿಲ್ಲರ್‌ಗೆ ಅಗತ್ಯವಿದ್ದ ಭೂಮಿಕೆ ಒದಗಿಸಿವೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಹಾಡುಗಳು ಕೂಡ ಚಿತ್ರಕ್ಕೆ ಪೂರಕವಾಗಿದ್ದು, ಚಿತ್ರಕಥೆಯ ಓಘಕ್ಕೆ ಯಾವುದೇ ಹಂತದಲ್ಲೂ ತಡೆಯೊಡ್ಡುವುದಿಲ್ಲ.

ನಿರೂಪಣಾ ತಂತ್ರ ವೇಗವಾಗಿರುವುದರಿಂದ ಸಿನೆಮಾ ಎಲ್ಲೂ ನಿಂತ ನೀರಿನಂತೆ ಭಾಸವಾಗುವುದಿಲ್ಲ. ಇಲ್ಲಿ ಪಾತ್ರಗಳು ಮುಖ್ಯವಾಗದೆ ಚಿತ್ರಕಥೆಯೇ ಹೀರೋ ಎನ್ನುವುದು ಹೈಲೈಟ್. ಶ್ರೀನಗರ ಕಿಟ್ಟಿ ಮತ್ತು ಸೂರಜ್ ಗೌಡ ಇಬ್ಬರಿಗೂ ಸಮಾನ ಅವಕಾಶವಿದ್ದು, ಸೂರಜ್ ಗೌಡ ಅವರೇ ಹೆಚ್ಚು ಮಿಂಚುತ್ತಾರೆ. ದುಃಖದ ಸನ್ನಿವೇಶಗಳಲ್ಲಿಯೂ ಕಿಟ್ಟಿ ಅಷ್ಟೇಕೆ ಮೇಕಪ್ ಮಾಡಿಕೊಂಡಿದ್ದಾರೋ? ಇದು ಸನ್ನಿವೇಶಗಳಿಗೆ ಅಸಹಜತೆ ಎನಿಸುತ್ತದೆ. ನಾಯಕಿ ಕಾವ್ಯಾ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಶೋಕ್ ಮತ್ತು ತುಳಸಿ ಶಿವಮಣಿ ಪ್ರೇಕ್ಷಕರಿಗೆ ಆಪ್ತರಾಗುತ್ತಾರೆ. ಏಕತಾನತೆಯ ಸಿನೆಮಾಗಳ ಮಧ್ಯೆ ವಿಶಿಷ್ಟ ಪ್ರಯೋಗವಿದು.

ನಿರ್ದೇಶನ: ಮುರಳಿ ಗುರಪ್ಪ, ನಿರ್ಮಾಣ: ಮಂಜುಳಾ ಸೋಮಶೇಖರ್ ಮತ್ತು ರವಿ ಎಂ., ಸಂಗೀತ: ಅನೂಪ್ ಸಿಳೀನ್, ಹಿನ್ನೆಲೆ ಸಂಗೀತ: ಚಿನ್ನ ಎಸ್., ಛಾಯಾಗ್ರಹಣ: ಶ್ರೀನಿವಾಸ್, ತಾರಾಗಣ : ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯಾ ಶೆಟ್ಟಿ, ಚಿಕ್ಕಣ್ಣ, ಸಾಧು ಕೋಕಿಲ, ಸಿದ್ದು ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X