Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿಯಲ್ಲಿ ತಯಾರಿಸಿದ ವಿವಿಧ ಖಾದ್ಯ...

ಉಡುಪಿಯಲ್ಲಿ ತಯಾರಿಸಿದ ವಿವಿಧ ಖಾದ್ಯ ಸವಿದ ರಾಷ್ಟ್ರಪತಿ

ರಾಜಭವನದ ಮೆನು ಪ್ರಕಾರ ಆಹಾರ ತಯಾರಿ: ರುಚಿ ಬಗ್ಗೆ ಪ್ರಶಂಸೆ

ವಾರ್ತಾಭಾರತಿವಾರ್ತಾಭಾರತಿ18 Jun 2017 9:19 PM IST
share
ಉಡುಪಿಯಲ್ಲಿ ತಯಾರಿಸಿದ ವಿವಿಧ ಖಾದ್ಯ ಸವಿದ ರಾಷ್ಟ್ರಪತಿ

ಉಡುಪಿ, ಜೂ.18: ಉಡುಪಿಗೆ ಇಂದು ಮೊದಲ ಬಾರಿಗೆ ಆಗಮಿಸಿ ಬನ್ನಂಜೆಯ ಪ್ರವಾಸಿ ಮಂದಿರದ ವಿಶೇಷ ಕೊಠಡಿಯಲ್ಲಿ ವಿಶ್ರಾಂತಿ ಪಡೆದಿದ್ದ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಜಭವನದ ಮೆನು ಪ್ರಕಾರ ಉಡುಪಿಯ ಓಶಿಯನ್ ಪರ್ಲ್ ಹೊಟೇಲಿನಲ್ಲಿ ತಯಾರಿಸಲಾದ ಚಹಾ, ತಿಂಡಿ, ಊಟವನ್ನು ನೀಡಲಾಯಿತು.ಎರಡು ದಿನಗಳ ಹಿಂದೆ ರಾಷ್ಟ್ರಪತಿ ಭವನದಿಂದ ಬಂದ ಮೆನು ಪ್ರಕಾರ ಆಹಾರವನ್ನು ತಯಾರಿಸಲಾಗಿದೆ.

ನಿರ್ದೇಶನದ ಪ್ರಕಾರ ಹುಳಿ ಇಲ್ಲದ, ಕಚ್ಚಾ ಆಲಿವ್ ಎಣ್ಣೆ, ಉಗುರು ಬೆಚ್ಚನೆ ನೀರಿನಲ್ಲಿ ಆಹಾರವನ್ನು ತಯಾರಿಸಲಾಗಿದೆ. ಓಶಿಯನ್ ಪರ್ಲ್‌ನ ಮುಖ್ಯ ಬಾಣಸಿಗ ಬಾಮ್ ಬಹದ್ದೂರ್ ಈ ಎಲ್ಲ ಆಹಾರಗಳನ್ನು ತಯಾರಿಸಿದ್ದಾರೆ. ರಾಜಭವನದ ಆಹಾರ ತಜ್ಞರ ತಂಡದ ಡಾ. ವಾಸುದೇವ್ ಮತ್ತು ವೆಂಕಿದೇಶ್ ಆಹಾರವನ್ನು ಪರೀಕ್ಷಿಸಿದರು.

ಬೆಳಗ್ಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಗ್ರೀನ್‌ಮಿಂಟ್ ಚಹಾವನ್ನು ಸವಿದರು. ಮಧ್ಯಾಹ್ನ ಊಟಕ್ಕೆ ವಿರ್ಗಿನ್ ಮೊಜಿಟೋ ಪಾನೀಯ, ವಿಜಿಟೆಬಲ್ ಟಾರ್ಟಿಲ್ಲ ಸೂಪು, ಸಲಾಡ್‌ನಲ್ಲಿ ಪಂಝನೆಲ್ಲಾ ಸಲಾಡ್, ಸಿಟ್ರಸ್ ಗ್ರೀನ್ ವೆಜ್ ಸಲಾಡ್, ಮುಖ್ಯ ಆಹಾರದಲ್ಲಿ ಚಾರ್ ಗ್ರೀಲ್‌ಲ್ಡ್ ವೆಜಿಟೇಬಲ್, ವಿಜಿಟೇರಿಯನ್ ಕಸ್ಸೊಲೆಟ್, ಮ್ಯಾಕ್ರೋನಿ ಅಗಿಲೋ ಒಲಿಯೋ, ಬ್ರೇಝಿಲಿಯನ್ ರೈಸ್, ಲೈವ್ ಪುಲ್ಕ, ಸಿಹಿ ತಿಂಡಿಯಲ್ಲಿ ಕಟ್ ಫ್ರುಟ್ಸ್ ಪ್ಯಾಟ್ಟರ್, ಶುಗರ್ ಫ್ರೀ ಪ್ಲಾನ್ ಯೋಗರ್ಟ್‌ನ್ನು ಸೇವಿಸಿದರು.

‘ರಾಷ್ಟ್ರಪತಿ ದಾಲ್ ಫುಲ್ಕವನ್ನು ಹೊರತು ಪಡಿಸಿ ನಾವು ತಯಾರಿಸಿ ಬಡಿಸಿದ ಎಲ್ಲ ಆಹಾರದ ರುಚಿ ಸವಿದರು. ನಾನು, ನಮ್ಮ ಹೊಟೇಲಿನ ಇಬ್ಬರು ಬಟ್ಲರ್ ಹಾಗೂ ರಾಜಭವನದ ಒಬ್ಬರು ಬಟ್ಲರ್ ಆಹಾರವನ್ನು ಬಡಿಸಿದೆವು. ಅವರಿಗೆ ಉಡುಪಿಯ ಯಾವುದೇ ಸಂಪ್ರದಾಯಿಕ ಆಹಾರವನ್ನು ತಯಾರಿಸಿಲ್ಲ. ರಾಜಭವನದಿಂದ ಬಂದ ಮೆನು ಪ್ರಕಾರವೇ ಆಹಾರ ತಯಾರಿಸಲಾಗಿದೆ. ತಯಾರಿಸಿದ ಆಹಾರವನ್ನು ರಾಜಭವನದ ತಜ್ಞರು ಪರೀಕ್ಷಿಸಿದ ಬಳಿಕವೇ ರಾಷ್ಟ್ರಪತಿಗೆ ನೀಡಲಾಯಿತು. ರಾಷ್ಟ್ರಪತಿ ಆಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ಓಶಿಯನ್ ಪರ್ಲ್‌ನ ಜನರಲ್ ಮೆನೇಜರ್ ಬಿಜು ವರ್ಗಿಸ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X