Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸ್ಕಿಜೋಫ್ರೀನಿಯಾವನ್ನು ಗೆದ್ದವನ ಆತ್ಮಕಥೆ

ಸ್ಕಿಜೋಫ್ರೀನಿಯಾವನ್ನು ಗೆದ್ದವನ ಆತ್ಮಕಥೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ23 Jun 2017 10:44 PM IST
share
ಸ್ಕಿಜೋಫ್ರೀನಿಯಾವನ್ನು ಗೆದ್ದವನ ಆತ್ಮಕಥೆ

ಮಾನಸಿಕ ಖಿನ್ನತೆ ಆಧುನಿಕ ದಿನಗಳ ದೊಡ್ಡ ಸವಾಲಾಗಿ ಬೆಳೆಯುತ್ತಿದೆ. ದೈಹಿಕ ರೋಗಗಳ ಕುರಿತಂತೆ ಇರುವ ವೌಢ್ಯಗಳು ಇಂದು ಸರಿಯುತ್ತಿವೆಯಾದರೂ, ಮಾನಸಿಕ ಕಾಯಿಲೆಯ ಕುರಿತ ವೌಢ್ಯಗಳು ಇನ್ನೂ ದಟ್ಟವಾಗಿ ಉಳಿದುಕೊಂಡಿವೆ. ಇಂದಿಗೂ ಈ ಕಾಯಿಲೆಯ ಬಗ್ಗೆ ತಪ್ಪುಕಲ್ಪನೆಗಳಿವೆ. ಈ ಕಾಯಿಲೆಯನ್ನು ಒಪ್ಪಿಕೊಳ್ಳಲು, ಪ್ರಕಟಪಡಿಸಲು ಹಿಂಜರಿಯುವ ದೊಡ್ಡ ಸಂಖ್ಯೆ ಇರುವುದರಿಂದಲೇ ಈ ಕಾಯಿಲೆ ಕುಟುಂಬವನ್ನೂ, ಸಮಾಜವನ್ನು ತೀವ್ರವಾಗಿ ಕಾಡತೊಡಗಿದೆ. ಜೊತೆಗೆ ಕಾಯಿಲೆ ಪೀಡಿತನನ್ನು ನೋಡುವ ಸಮಾಜದ ದೃಷ್ಟಿಯೂ ಬದಲಾಗಿಲ್ಲ.

ಈ ಸಂದರ್ಭದಲ್ಲಿ ಒಬ್ಬ ‘ಸ್ಕಿಜೋಫ್ರೀನಿಯಾ’ದಂತಹ ಮಾನಸಿಕ ಕಾಯಿಲೆಗೆ ಸಿಕ್ಕಿ, ಅದರೊಳಗೆ ನರಳಿ, ಅದನ್ನು ಎದುರಿಸಿ ಗೆದ್ದವನು ತನ್ನ ಅನುಭವವನ್ನು ತೋಡಿಕೊಂಡರೆ ಹೇಗಿರುತ್ತದೆ? ಸಾಹುಕಾರ ರೈತ ಕುಟುಂಬದಲ್ಲಿ ಜನಿಸಿದ ಮಲ್ಲಾರೆಡ್ಡಿಯವರು ಬಹುಕಾಲ ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ರೋಗಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡವರು. ಕಾನೂನನ್ನು ಅಭ್ಯಸಿಸಿ, ಹಲವು ಪ್ರಾಂತಗಳಲ್ಲಿ ಸಂಚರಿಸುತ್ತಾ ಅಲ್ಜೀರಿಯಾ ದೇಶಕ್ಕೂ ಹೋಗಿ ಇಂಗ್ಲಿಷ್ ಅಧ್ಯಾಪಕರಾಗಿ ಉದ್ಯೋಗ ನಿರ್ವಹಿಸಿದ್ದ ಇವರು ಮಾನಸಿಕ ಕಾಯಿಲೆಯಿಂದ ಹೇಗೆ ಜರ್ಝರಿತರಾಗಿ ವರ್ತಮಾನದಿಂದ ದೂರ ತಳ್ಳಲ್ಪಡುತ್ತಾರೆ ಮತ್ತು ಕೊನೆಗೂ ಅದನ್ನು ಗೆದ್ದು ಹೇಗೆ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಯಿತು ಎನ್ನುವುದನ್ನು ‘ಸೋತು ಗೆದ್ದ ಮನುಷ್ಯ’ ಕೃತಿ ವಿವರಿಸುತ್ತದೆ. ಈ ಕೃತಿ ಮಲ್ಲಾರೆಡ್ಡಿಯವರ ಆತ್ಮಕತೆ. ಕಸ್ತೂರಿ ಎಂದೇ ಪರಿಚಿತರಾಗಿರುವ ಕೆ. ವಿ. ಚಂದ್ರಜ್ಯೋತಿ. ಈ ಕೃತಿ ಯನ್ನು ತೆಲುಗಿನಿಂದ ಕನ್ನಡಕ್ಕಿಳಿಸಿದ್ದಾರೆ.


ಸ್ಕಿಜೋಫ್ರೀನಿಯಾದಂತಹ ರೋಗದ ಸುಳಿಗೆ ಸಿಲುಕಿದರೆ, ಅದು ಅವರನ್ನು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುನ್ನಡೆಸುತ್ತದೆ. ಮಲ್ಲಾರೆಡ್ಡಿ ತನ್ನ ಮಾನಸಿಕ ಕಾಯಿಲೆಯನ್ನು ಆರಂಭದಲ್ಲಿ ಕುಟುಂಬಕ್ಕೆ ಮುಚ್ಚಿಟ್ಟಿರುತ್ತಾರೆ. ಮದುವೆಯ ಮುಂಚೆ ಪತ್ನಿಗೂ ಗೊತ್ತಿರುವುದಿಲ್ಲ. ಮೊದಲ ದಿನ ಪತ್ನಿಯ ಬಳಿ ತನ್ನ ಕಾಯಿಲೆಯನ್ನು ಬಹಿರಂಗಪಡಿಸುತ್ತಾರೆ. ಬಳಿಕ ಪತ್ನಿ ಅವರನ್ನು ಅರ್ಥ ಮಾಡಿಕೊಂಡು, ಸಹನೆ, ತಾಳ್ಮೆಯಿಂದ ಮುನ್ನಡೆಯುತ್ತಾರೆ. ಬರೀ ಔಷಧಿಯಿಂದ ಮಾತ್ರ ಮಾನಸಿಕ ಕಾಯಿಲೆಯನ್ನು ಗೆಲ್ಲಲು ಸಾಧ್ಯವಿಲ್ಲ. ಕುಟುಂಬವೂ ರೋಗಿಗೆ ಒತ್ತಾಸೆಯಾಗಿರಬೇಕು. ತನ್ನ ತಂದೆ ತಾಯಿಯಿಂದ ನಿರ್ಲಕ್ಷಕ್ಕೊಳಗಾದರೂ, ಹೆಂಡತಿ ಮತ್ತು ಮಾವನವರ ಕಾಳಜಿಯಿಂದಾಗಿ ಹಂತ ಹಂತವಾಗಿ ಈ ರೋಗವನ್ನು ಗೆಲ್ಲುವುದಕ್ಕೆ ಮಲ್ಲಾರೆಡ್ಡಿಯವರಿಗೆ ಸಾಧ್ಯವಾಗುತ್ತದೆ.


ಈ ಕಥನದಲ್ಲಿ ವಿವರಗಳನ್ನು ತುಂಬಾ ಮುಗ್ಧವಾಗಿ ಹೇಳಿಕೊಂಡಿದ್ದಲ್ಲದೆ, ಎಲ್ಲಿಯೂ ಯಾರಿಂದಲೂ ಅನುಕಂಪ ಗಿಟ್ಟಿಸುವಂಥ ಹೇಳಿಕೆಗಳಿಲ್ಲ. ಸಹಜವಾಗಿ ನಡೆದ ಘಟನೆಗಳನ್ನಷ್ಟೇ ದಾಖಲಿಸುತ್ತಾ ಹೋಗಿದ್ದಾರೆ. ಸ್ಕಿಜೋಫ್ರೀನಿಯಾ, ಖಿನ್ನತೆಗಳಿಂದ ಮಾನಸಿಕ ಸ್ತಿಮಿತ ಕಳೆದುಕೊಳ್ಳುವ ದುರ್ಬಲ ವ್ಯಕ್ತಿಗಳಿಗೆ ಧೈರ್ಯ-ಸ್ಥೈರ್ಯ ತುಂಬಬಲ್ಲ ಕೃತಿ ಇದು. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 115 ರೂಪಾಯಿ..

share
-ಕಾರುಣ್ಯಾ
-ಕಾರುಣ್ಯಾ
Next Story
X