Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ​ರೈಲಿನಲ್ಲಿ ವಾಗ್ವಾದ: ಮುಸ್ಲಿಂ ಯುವಕನ...

​ರೈಲಿನಲ್ಲಿ ವಾಗ್ವಾದ: ಮುಸ್ಲಿಂ ಯುವಕನ ಬರ್ಬರ ಹತ್ಯೆ

ವಾರ್ತಾಭಾರತಿವಾರ್ತಾಭಾರತಿ24 Jun 2017 9:40 AM IST
share
​ರೈಲಿನಲ್ಲಿ ವಾಗ್ವಾದ: ಮುಸ್ಲಿಂ ಯುವಕನ ಬರ್ಬರ ಹತ್ಯೆ

ಹೊಸದಿಲ್ಲಿ, ಜೂ.24: ದಿಲ್ಲಿಯಿಂದ ಮಥುರಾಗೆ ಹೊರಟಿದ್ದ ರೈಲಿನಲ್ಲಿ ಆಸನಕ್ಕಾಗಿ ಆರಂಭವಾದ ಜಗಳ, ಧಾರ್ಮಿಕ ನಿಂದನೆಯತ್ತ ತಿರುಗಿ ಯುವಕನ ಕೊಲೆಯಲ್ಲಿ ಪರ್ಯಾವಸಾನಗೊಂಡ ದುರಂತ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.

ಈದ್‌ ಶಾಪಿಂಗ್ ಮುಗಿಸಿ ತೆರಳುತ್ತಿದ್ದ ಕುಟುಂಬದ ಮೇಲೆ ಗುಂಪೊಂದು ಹಲ್ಲೆ ಮಾಡಿ, 16 ವರ್ಷಗಳ ಯುವಕನನ್ನು ಇರಿದು ಕೊಲೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ದಿಲ್ಲಿಯಿಂದ ಸುಮಾರು 60 ಕಿಲೋ ಮೀಟರ್ ದೂರದ ಓಕ್ಲಾ ಮತ್ತು ಅಸೋಟಿ ರೈಲು ನಿಲ್ದಾಣದ ನಡುವೆ ಈ ಘಟನೆ ಸಂಭವಿಸಿದೆ.

ಹಫೀಝ್ ಜುನೈದ್ (16) ಕೊಲೆಯಲ್ಲಿ ಶಾಮೀಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ದೇಶಾದ್ಯಂತ ಗೋಮಾಂಸ ಹಾಗೂ ಕಸಾಯಿಖಾನೆ ವಿವಾದದಲ್ಲಿ ಹಲವು ಮಂದಿ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ನತದೃಷ್ಟ ಕುಟುಂಬ ಹರ್ಯಾಣದ ಫರೀದಾಬಾದ್ ಜಿಲ್ಲೆ ಖದ್ದೌಲಿ ಎಂಬ ಪುಟ್ಟ ಗ್ರಾಮದವರಾಗಿದ್ದು, ದಾಳಿಕೋರರು ಪದೇಪದೇ ಇವರು ರಾಷ್ಟ್ರದ್ರೋಹಿಗಳು, ಗೋಮಾಂಸ ಭಕ್ಷಕರು; ಮುಲ್ಲಾಗಳು ಎಂದು ಹೀಯಾಳಿಸಿ ಹಲ್ಲೆ ನಡೆಸಿದರು. ಅವರ ತಲೆಮೇಲಿನ ಟೊಪ್ಪಿಯನ್ನು ಕಿತ್ತೆಸೆಯಿರಿ; ಅವರ ಗಡ್ಡ ಎಳೆಯಿರಿ ಎಂದು ಕೂಗುತ್ತಿದ್ದರು ಎಂದು ಗಾಯಾಳುಗಳು ಹೇಳಿದ್ದಾರೆ.

ಜುನೈದ್ ಗುಜರಾತ್‌ನ ಸೂರತ್‌ನಲ್ಲಿ ತನ್ನ ಸಹೋದರ ಹಾಶೀಂ (20) ಜತೆ ಇಸ್ಲಾಮಿಕ್ ಅಧ್ಯಯನ ಮಾಡುತ್ತಿದ್ದ. ಘಟನೆಯಲ್ಲಿ ಮುಹಮ್ಮದ್ ಮೌಸಿನ್ (16) ಹಾಗೂ ಮುಹಮ್ಮದ್ ಮೊಯಿನ್(18) ಕೂಡಾ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ದೂರವಾಣಿ ಮೂಲಕ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಬಲ್ಲಾಬ್‌ಗಢ ಎಂಬಲ್ಲಿ ರೈಲು ಜುನೈದ್ ಅಣ್ಣ ಮುಹಮ್ಮದ್ ಶಾಕೀರ್ ಅವರಿಗೂ ಇರಿತದ ಗಾಯಗಳಾಗಿದ್ದು, ಎಐಐಎಂಎಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓಕ್ಲಾ ರೈಲು ನಿಲ್ದಾಣದಲ್ಲಿ 15-20 ಮಂದಿ ರೈಲು ಹತ್ತಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ನಾಲ್ಕು ಮಂದಿಯನ್ನು ಆಸನ ಬಿಟ್ಟುಕೊಡುವಂತೆ ಸೂಚಿಸಿದರು. ಇದಕ್ಕೆ ಯುವಕರು ಒಪ್ಪದಿದ್ದಾಗ ವಾಗ್ವಾದ ಆರಂಭವಾಯಿತು ಎಂದು ಹೇಳಲಾಗಿದೆ.

ಅತಿಯಾಗಿ ಜನಸಂದಣಿ ಇದ್ದ ರೈಲಿನಲ್ಲಿ ಗುಂಪಿನ ಒಬ್ಬ ವ್ಯಕ್ತಿ ಜುನೈದ್‌ನಲ್ಲಿ ತಳ್ಳಿದ. ಆಗ ನನ್ನ ಸಹೋದರ, ಸರಿಯಾಗಿ ವರ್ತಿಸಿ ಎಂದು ರೇಗಿದ. ಸಿಟ್ಟಿನಿಂದ ಆ ವ್ಯಕ್ತಿ ಜುನೈದ್‌ನ ಟೊಪ್ಪಿಯನ್ನು ನೆಲಕ್ಕೆಸೆದ. ನೀವು ದೇಶದ್ರೋಹಿಗಳು ಎಂದು ಕೂಗುತ್ತಾ ಸೀಟು ಬಿಟ್ಟುಕೊಡಬೇಕು ಎಂದು ಪಟ್ಟುಹಿಡಿದ. ಆಗ ಗುಂಪಿನಲ್ಲಿದ್ದ ಇತರರೂ ಸೇರಿಕೊಂಡು ಹಲ್ಲೆ ನಡೆಸಿದರು. ತುಘಲಕಾಬಾದ್ ನಿಲ್ದಾಣದಲ್ಲಿ ಆ ಬೋಗಿಯಿಂದ ಇಳಿದು ಮತ್ತೊಂದು ಬೋಗಿಗೆ ಹತ್ತಿ ಮತ್ತೊಬ್ಬ ಸಹೋದರನಿಗೆ ಕರೆ ಮಾಡಿದರು ಎಂದು ಶಾಕೀರ್ ಘಟನೆ ವಿವರ ನೀಡಿದ್ದಾರೆ.

''ಬಲ್ಲಬ್‌ಗಢದಲ್ಲಿ ರೈಲಿನಿಂದ ಇಳಿಯಲು ಮುಂದಾದಾಗ ಒಬ್ಬ ವ್ಯಕ್ತಿ ಚಾಕು ಹಿಡಿದು ಬಾಗಿಲಿಗೆ ಅಡ್ಡ ನಿಂತ. ಮೌಸಿನ್ ರೈಲಿನಿಂದ ಹಾರಿದಾಗ ಜುನೈದ್ ಹಾಗೂ ಮೊಯಿನ್ ಒಳಗೆ ಸಿಕ್ಕಿಹಾಕಿಕೊಂಡರು. ನಮ್ಮನ್ನು ರಕ್ಷಿಸಲು ಬಂದ ಶಾಕೀರ್ ಕೂಡಾ ಸಿಕ್ಕಿಹಾಕಿಕೊಂಡರು ಎಂದು ಹಾಶೀಂ ವಿವರಿಸಿದ್ದಾರೆ. ನಾಲ್ಕು ಮಂದಿ ಜುನೈದ್‌ನನ್ನು ಹಿಡಿದುಕೊಂಡು ಹಲವು ಬಾರಿ ಇರಿದರು. ನಾನು ಆತನ ರಕ್ಷಣೆಗೆ ಮುಂದಾದಾಗ ಮೂವರು ನನ್ನನ್ನು ಹಿಡಿದುಕೊಂಡರು. ಪ್ರಯಾಣಿಕರ ಎದುರೇ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೂ ರಕ್ಷಣೆಗೆ ಬರಲಿಲ್ಲ'' ಎಂದು ಅವರು ದೂರಿದ್ದಾರೆ. ಅಸ್ಟೋಗಿ ನಿಲ್ದಾಣದಲ್ಲಿ ಎಲ್ಲರನ್ನೂ ರೈಲಿನಿಂದ ಹೊರಕ್ಕೆ ತಳ್ಳಿದರು ಎನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X