Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಿಲಪದವು ಕೊರಗರ ಕಾಲನಿಯಲ್ಲಿ...

ಮಂಗಿಲಪದವು ಕೊರಗರ ಕಾಲನಿಯಲ್ಲಿ "ಎಂ.ಫ್ರೆಂಡ್ಸ್ ಈದ್"

ರಶೀದ್ ವಿಟ್ಲರಶೀದ್ ವಿಟ್ಲ27 Jun 2017 5:21 PM IST
share
ಮಂಗಿಲಪದವು ಕೊರಗರ ಕಾಲನಿಯಲ್ಲಿ ಎಂ.ಫ್ರೆಂಡ್ಸ್ ಈದ್

ವಿಟ್ಲ, ಜೂ.27: ಇಲ್ಲಿನ ಮಂಗಿಲಪದವು ಕೊರಗರ ಕಾಲನಿಯಲ್ಲಿ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಈದುಲ್ ಫಿತ್ರನ್ನು ಮಾಂಕು ಕೊರಗರ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಯಿತು.

ಕೊರಗ ಮಹಿಳೆಯರ ಪಾಡ್ದನದೊಂದಿಗೆ ಕಾಲನಿ ಸುತ್ತಿದ ಸಚಿವರಿಗೆ ಮುಟ್ಟಾಳೆಯ ಸ್ವಾಗತ ಕೋರಲಾಯಿತು. ಪತ್ರಕರ್ತ ಶಂಸುದ್ದೀನ್ ಸಂಪ್ಯ ಕೊರಗ ಜನಾಂಗದ ಅಳಿವು-ಉಳಿವಿನ ಬಗ್ಗೆ ವಿವರಿಸಿ ಈದ್ ಸಂದೇಶ ನೀಡಿದರು.

ಬಳಿಕ ಮಾತನಾಡಿದ ಆಹಾರ ಸಚಿವ, ಎಂ.ಫ್ರೆಂಡ್ಸ್ ಗೌರವಾಧ್ಯಕ್ಷ ಯು.ಟಿ.ಖಾದರ್, ಕೊರಗರೊಂದಿಗೆ ಸೇರಿ ಈದ್ ಆಚರಿಸುವುದು ನನ್ನ ಪಾಲಿಗೆ ದೊರೆತ ಸುಯೋಗ ಎಂದರು. ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾಲನಿಯ ಮೂಲಭೂತ ರಹಿತ ಕೊರಗರಿಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಅಬೂಬಕರ್ ಸಿದ್ದೀಕ್ ಮಸ್ಕತ್, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮುಸ್ತಫಾ ಇರುವೈಲು, ತಾಪಂ ಮಾಜಿ ಸದಸ್ಯೆ ಜೂಲಿಯಾನಾ ಮೇರಿ ಲೋಬೊ, ವೀರಕಂಭ ಗ್ರಾಪಂ ಸದಸ್ಯರಾದ ಅಬ್ಬಾಸ್ ಕೆಲಿಂಜ, ಉಬೈದ್, ಶೀಲಾ ವೇಗಸ್, ಕೊರಗರ ಕಾಲನಿಯ ಮಾಂಕು, ಸಲೀಂ, ರಫೀಕ್ ಅಂಬ್ಲಮೊಗರು, ಲಿಬ್ ಝತ್, ವಿ.ಎಚ್.ಅಶ್ರಫ್, ಕೆ.ಪಿ.ಸಾದಿಕ್ ಹಾಜಿ ಕುಂಬ್ರ, ಶಾಕಿರ್ ಹಾಜಿ ಪುತ್ತೂರು, ಡಿ.ಎಂ.ರಶೀದ್ ಉಕ್ಕುಡ, ಹನೀಫ್ ಅಲ್ ಫಲಾಹ್, ಅಬ್ಬಾಸ್ ಟಿ.ಎಚ್.ಎಂ.ಎ, ಇರ್ಶಾದ್ ವೇಣೂರು, ಕಲಂದರ್ ಪರ್ತಿಪ್ಪಾಡಿ, ಅನ್ಸಾರ್ ಬೆಳ್ಳಾರೆ, ಇರ್ಶಾದ್ ಮಂಗಳೂರು, ಆರಿಫ್ ಬೆಳ್ಳಾರೆ, ಇಸ್ಮಾಯಿಲ್ ಕೋಲ್ಪೆ, ಅಬೂಬಕರ್ ನೋಟರಿ, ಆಶಿಕ್ ಕುಕ್ಕಾಜೆ, ಅಬೂಬಕರ್ ಅನಿಲಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯುತ್ ಸಂಪರ್ಕವಿಲ್ಲದ ಮನೆ: ಕೊರಗರ ಸಮಸ್ಯೆಗೆ ತಕ್ಷಣ ಪರಿಹಾರ ಸೂಚಿಸಿದ ಸಚಿವ ಖಾದರ್
ಕೊರಗರ ಕಾಲನಿಯ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಬಗ್ಗೆ ಕೊರಗರು ಮತ್ತು ಆದಿ ದ್ರಾವಿಡ ಸಮುದಾಯದವರು ಆಹಾರ ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಸಚಿವರು ಕೂಡಲೇ ಮೆಸ್ಕಾಂ ಅಧಿಕಾರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದರು. ಕೊರಗರಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಲು ಆದೇಶಿಸಿದರಲ್ಲದೆ ತಪ್ಪಿದರೆ, ಕಾರಣ ನೀಡಿ ಪತ್ರ ನೀಡಬೇಕೆಂದು ಹೇಳಿದರು.

ಜಾನಪದ ಹಾಡು ಹಾಡಿದ ಅಂಧ ಕೊರಗನಿಗೆ ಸಚಿವರಿಂದ ಪ್ರೋತ್ಸಾಹಧನ: ಸೌಹಾರ್ದತೆಯ ಕುರಿತು ಅರ್ಥಪೂರ್ಣ ಜಾನಪದ ಹಾಡು ಹಾಡಿದ ಕುರುಡ ವಿಕಲಾಂಗ ಸೀತಾರಾಮ ಕೊರಗ ಅವರಿಗೆ ಸಚಿವ ಯು.ಟಿ.ಖಾದರ್ ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು. ಇದೇ ಸಂದರ್ಭ ಸಚಿವರು ಮತ್ತು ಎಂ.ಫ್ರೆಂಡ್ಸ್ ಸದಸ್ಯರು ಕೊರಗರು ಮತ್ತು ಆದಿ ದ್ರಾವಿಡ ಸಮುದಾಯದ ಜೊತೆ ಈದ್ ಭೋಜನ ನಡೆಸಿದರು.

share
ರಶೀದ್ ವಿಟ್ಲ
ರಶೀದ್ ವಿಟ್ಲ
Next Story
X