ಡಿಎಸ್ಪಿ ನಿವಾಸಕ್ಕೆ ಉಮರ್ ಅಬ್ಬುಲ್ಲಾ ಭೇಟಿ

ಶ್ರೀನಗರ, ಜೂ. 27: ಶ್ರೀನಗರದ ಜಾಮಿಯಾ ಮಸೀದಿ ಹೊರಭಾಗದಲ್ಲಿ ಉದ್ರಿಕ್ತ ಗುಂಪಿನಿಂದ ಹತ್ಯೆಯಾದ ಹಿರಿಯ ಪೊಲೀಸ್ ಅಧಿಕಾರಿ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ನ್ಯಾಶನಲ್ ಕಾನ್ಫರೆನ್ಸ್ನ ಕಾರ್ಯಕಾರಿ ಅಧ್ಯಕ್ಷ ಉಮರ್ ಅಬ್ದುಲ್ಲಾ, ಈ ಕ್ರೂರ ಹತ್ಯೆ ಸಂಚಿನ ಹಿಂದಿನ ರೂವಾರಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದಿದ್ದಾರೆ.
ನೌಪುರ-ಕನ್ಯಾರ್ನಲ್ಲಿರುವ ಡಿಎಸ್ಪಿ ಮಹಮ್ಮದ್ ಅಯ್ಯೂಬ್ ಪಂಡಿತ್ ನಿವಾಸಕ್ಕೆ ಅವರು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Next Story





