Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕುಕ್ಕರ ಹಳ್ಳಿ ಕಥಾ ಲೋಕಕ್ಕೆ ತೆರೆದ...

ಕುಕ್ಕರ ಹಳ್ಳಿ ಕಥಾ ಲೋಕಕ್ಕೆ ತೆರೆದ ದಾರಿ...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ29 Jun 2017 11:53 PM IST
share
ಕುಕ್ಕರ ಹಳ್ಳಿ ಕಥಾ ಲೋಕಕ್ಕೆ ತೆರೆದ ದಾರಿ...

 ಗಂಭೀರ ವಿಮರ್ಶೆಗಳೇ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ಸಣ್ಣ ಪರಿಚಯವನ್ನೇ ಪುಸ್ತಕ ವಿಮರ್ಶೆ ಎಂದು ಓದಿ ತೃಪ್ತಿ ಪಟ್ಟುಕೊಳ್ಳಬೇಕಾದ ದಿನಗಳಲ್ಲಿ ಕನ್ನಡ ಸಾಹಿತ್ಯ ಬಂದು ನಿಂತಿದೆ. ಸುದೀರ್ಘವಾಗಿ ಓದಿ, ಅಧ್ಯಯನ ಮಾಡಿ ಅದರ ಕುರಿತಂತೆ ಬರೆಯುವ ತಾಳ್ಮೆ ಇಂದಿನ ಬರಹಗಾರರಲ್ಲಿ ಇಲ್ಲ. ಜೊತೆಗೆ ಅದಕ್ಕೆ ಪೂರಕವಾದ ಓದುಗರೂ ಇಂದು ಇಲ್ಲ. ಇಂತಹ ಹೊತ್ತಿನಲ್ಲಿ ಒಬ್ಬ ಕತೆಗಾರನ ಒಟ್ಟು ಕತೆಗಳನ್ನು ಓದಿ, ಅಧ್ಯಯನ ಮಾಡಿ ಅವುಗಳ ಕುರಿತಂತೆ ವಿಮರ್ಶಾ ಲೇಖನಗಳನ್ನು ಪ್ರಕಟಿಸುವುದು ಸಣ್ಣ ವಿಷಯವಲ್ಲ. ‘ಬಸವರಾಜು ಕುಕ್ಕರ ಹಳ್ಳಿ ಕಥಾಲೋಕ-ವಿಮರ್ಶಾ ಲೇಖನಗಳ ಸಂಕಲನ’ ಈ ಕಾರಣಕ್ಕಾಗಿ ಇಂದು ಮುಖ್ಯವಾಗುತ್ತದೆ. ಬಸವರಾಜು ಕುಕ್ಕರಹಳ್ಳಿ ಅವರ ಕಥಾಲೋಕದ ಕುರಿತಂತೆ ಈ ಕೃತಿಯಲ್ಲಿ ಒಟ್ಟು 29 ಬರಹಗಳಿವೆ. ಡಾ. ನೀಲಗಿರಿ ತಳವಾರ ಮತ್ತು ಡಾ. ಯೋಗೇಶ ಎನ್. ಇವರು ಜಂಟಿಯಾಗಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೇಶವ ಮಳಗಿ, ಆರ್. ವಿಜಯರಾಘವನ್, ಡಾ. ಕವಿತಾ ರೈ, ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ, ಡಾ. ಸಬಿತಾ ಬನ್ನಾಡಿ, ಡಾ. ವಿಜಯ ಕುಮಾರಿ ಎಸ್. ಕರಿಕಲ್, ಡಾ. ಪ್ರಹ್ಲಾದ ಅಗಸನಕಟ್ಟೆ, ಡಾ. ನಟರಾಜ ಬೂದಾಳು, ವಿ. ಎನ್. ವೆಂಕಟಲಕ್ಷ್ಮೀ, ಡಾ. ಭಾರತೀ ದೇವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಮೊದಲಾದ ಖ್ಯಾತ ಬರಹಗಾರರು ಇಲ್ಲಿ ಬರೆದಿದ್ದಾರೆ. ‘‘ಕುಕ್ಕರಹಳ್ಳಿಯವರ ಕಥಾಲೋಕ ಈವರೆಗೆ ಕಂಡುಕೊಳ್ಳಲು ಯತ್ನಿಸಿರುವ ಸೂಜಿಗಾತ್ರದ ಬೆಳಕಿನ ಪ್ರಮಾಣವೇ ಇರಲಿ, ಅದು ಒಂದು ಸಮುದಾಯದ ಬದುಕಿನ ಬ್ರಹ್ಮಾಂಡ ಸತ್ಯವನ್ನು ತೆರೆದಿಡುತ್ತದೆ’’ ಎಂದು ಖ್ಯಾತ ಕತೆಗಾರ ಕೇಶವ ಮಳಗಿ ಅಭಿಪ್ರಾಯ ಪಡುತ್ತಾರೆ. ಬಾಳಾಟ ಕಥಾ ಸಂಕಲನದ ಕುರಿತಂತೆ ಆರ್. ವಿಜಯರಾಘವನ್ ಬರೆಯುತ್ತಾ, ‘‘ಇಲ್ಲಿ ಅವರ ಭಾಷೆ ಬದಲಾಗಿದೆ. ಬರಹದ ತೀವ್ರತೆಯೂ ಕಡಿಮೆಯಾಗಿದೆ. ಆಯ್ಕೆ ಎಲ್ಲದರಲ್ಲೂ ಕಂಡು ಬರುತ್ತದೆ. ಉದ್ದೇಶವೇ ಮುಖ್ಯವಾಗಿ ಹಾದಿಯ ಬಗ್ಗೆ ಆಸಕ್ತಿ ಕಡಿಮೆಯಾಗಿ ರುವಂತೆ ತೋರುತ್ತದೆ’’ ಎಂದು ಹೇಳುತ್ತಾರೆ. ಕವಿತಾ ರೈ ಅವರು ಬರೆಯುತ್ತಾ ‘‘ಲೋಕಗ್ರಹಿಕೆಯ ಸಂಘರ್ಷ ಇಲ್ಲಿನ ಕತೆಗಳ ಚೌಕಟ್ಟು’’ ಎಂದು ಅಭಿಪ್ರಾಯ ಪಡುತ್ತಾರೆ. ಪುನುಗ ಕಥಾ ಸಂಕಲನದ ಬಗ್ಗೆ ಓ. ಎಲ್. ನಾಗಭೂಷಣ ಸ್ವಾಮಿ ಬರೆಯುತ್ತಾ, ‘‘ದಿನದಿನವೂ ಹೊಸಕಿ ಹೋಗುತ್ತಿರುವ ಇರುವೆಗಳಂಥ ಜನರ ಮಾತನ್ನು ಓದುಗರ ಕಿವಿಗೆ ತಲುಪಿಸಿರುವುದು ಬಸವರಾಜು ಅವರ ಕಥೆಗಳ ಹೆಚ್ಚುಗಾರಿಕೆ’’ ಎನ್ನುತ್ತಾರೆ. ಡಾ. ಸವಿತಾ ಬನ್ನಾಡಿಯವರು, ಕುಕ್ಕರ ಹಳ್ಳಿಯವರದೇ ಸ್ವಂತದ ದಾರಿಯೊಂದು ಕಥಾಲೋಕದಲ್ಲಿ ತೆರೆದಿರುವುದನ್ನು ಗುರುತಿಸುತ್ತಾರೆ. ಕಥಾಸಂಕಲನದ ಮುನ್ನುಡಿಯೊಂದರಲ್ಲಿ ಜಯಂತ ಕಾಯ್ಕಿಣಿಯವರು ಹೀಗೆ ಹೇಳುತ್ತಾರೆ ‘‘ಭಂಗಿಗಳಲ್ಲೇ ದಣಿಯುತ್ತಿರುವ, ಮಾತಿನಲ್ಲೇ ಒಣಗುತ್ತಿರುವ ಕನ್ನಡ ಕಥನಕ್ಕೆ ಬಸವರಾಜು ಕುಕ್ಕರಹಳ್ಳಿಯವರ ಕಥೆಗಳು ಹೊಸ ರಕ್ತ ಸಂಚಾರ ತರುವಂತಿದೆ. ಜಿಟಿಜಿಟಿ ಮಳೆಯಲ್ಲಿ ತನ್ನ ಮಣ್ಣಿನ ಬೊಂಬೆಗಳನ್ನೇ ನೋಡುತ್ತಾ, ಆಡುತ್ತಾ, ಅವುಗಳಿಗೆ ಅನ್ನ ಉಣಿಸುತ್ತಾ ಮೈ ಮರೆತವರಂತೆ ಬಸವರಾಜು ಭಾಸವಾಗುತ್ತಾರೆ’’ ಎಂದು ಸೋಜಿಗಗೊಳ್ಳುತ್ತಾರೆ. ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಇವರು ಹೊರತಂದಿರುವ ಕೃತಿಯ ಮುಖಬೆಲೆ 210 ರೂ. ಆಸಕ್ತರು 94483 50932 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X