Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಆಕೆ: ಪಕ್ಕದ ಮನೆಯಿಂದ ಬಂದ ಹಾರರ್ ಕತೆ

ಆಕೆ: ಪಕ್ಕದ ಮನೆಯಿಂದ ಬಂದ ಹಾರರ್ ಕತೆ

ಶಶಿಧರ ಚಿತ್ರದುರ್ಗಶಶಿಧರ ಚಿತ್ರದುರ್ಗ1 July 2017 11:35 PM IST
share
ಆಕೆ: ಪಕ್ಕದ ಮನೆಯಿಂದ ಬಂದ ಹಾರರ್ ಕತೆ

ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ತಮಿಳು ಸಿನೆಮಾ ‘ಮಾಯಾ’ ಹೊಸ ರೀತಿಯ ಹಾರರ್ ಪ್ರಯೋಗ ಎಂದೇ ಕರೆಸಿಕೊಂಡಿತ್ತು. ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರವನ್ನು ಜನರೂ ಮೆಚ್ಚಿಕೊಂಡಿದ್ದರು. ಆ ವರ್ಷದಲ್ಲಿ ಅತಿ ಹೆಚ್ಚು ಗಳಿಸಿದ ತಮಿಳು ಚಿತ್ರಗಳ ಪಟ್ಟಿಗೆ ಇದೂ ಸೇರ್ಪಡೆಗೊಂಡಿತ್ತು.

‘ಮಯೂರಿ’ ಶೀರ್ಷಿಕೆಯಡಿ ತೆಲುಗಿಗೆ ಡಬ್ ಆದ ಸಿನೆಮಾ ಅಲ್ಲಿಯೂ ಯಶಸ್ಸು ಕಂಡಿತ್ತು. ಅದೇ ಚಿತ್ರವೀಗ ‘ಆಕೆ’ ಶೀರ್ಷಿಕೆಯಡಿ ಕನ್ನಡದಲ್ಲಿ ತಯಾರಾಗಿದೆ. ಆದರೆ ಮೂಲ ತಮಿಳು ಸಿನೆಮಾ ಸೃಷ್ಟಿಸಿದ್ದ ಸಂಚಲನ ಇಲ್ಲಿಲ್ಲ. ಉತ್ತಮ ಕತೆ ಇದ್ದರೂ ಮೊದಲರ್ಧದ ನಿಧಾನಗತಿಯ ನಿರೂಪಣೆ, ಸನ್ನಿವೇಶಗಳ ಮಧ್ಯೆಯ ಬಂಧವಲ್ಲದೆ ಸಾಧಾರಣ ಮೇಕಿಂಗ್ ಎನಿಸುತ್ತದೆ.

ಪ್ರೀತಿಸಿ ಮದುವೆಯಾದ ಅರ್ಜುನ್ ಮತ್ತು ಶರ್ಮಿಳಾ ಸಿನೆಮಾ, ಜಾಹೀರಾತು ಕ್ಷೇತ್ರಗಳಲ್ಲಿ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಈ ಹಂತದಲ್ಲಿ ಸಣ್ಣ ಕಾರಣವೊಂದಕ್ಕಾಗಿ ಇಬ್ಬರ ಮಧ್ಯೆ ವಿರಸ ಏರ್ಪಡುತ್ತದೆ. ಗಂಡನಿಂದ ಬೇರ್ಪಟ್ಟ ಶರ್ಮಿಳಾ ತನ್ನ ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರಬೀಳುತ್ತಾಳೆ. ಸ್ನೇಹಿತೆಯ ಮನೆಯಲ್ಲಿ ಉಳಿದುಕೊಳ್ಳುವ ಆಕೆಗೆ ವಿಚಿತ್ರ ಬಗೆಯ ಅನುಭವಗಳು ಎದುರಾಗುತ್ತವೆ. ಅತ್ತ ಅರ್ಜುನ್‌ಗೂ ತರ್ಕಕ್ಕೆ ನಿಲುಕದ ಕೆಲ ಅನುಭವಗಳಾಗುತ್ತಾ ಹೋಗುತ್ತವೆ. ಶರ್ಮಿಳಾಳನ್ನು ಕಾಡುವ ಶಕ್ತಿ ಯಾವುದು, ಅದರ ಹಿನ್ನೆಲೆಯೇನು, ಅಂತಿಮವಾಗಿ ಶರ್ಮಿಳಾ ಈ ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತಾಳೆಯೇ? ಎನ್ನುವುದರ ಸುತ್ತ ಸಿನೆಮಾ ಕತೆ ಸುತ್ತುತ್ತದೆ.

ಹಾರರ್-ಥ್ರಿಲ್ಲರ್ ಸಿನೆಮಾಗಳು ಬಿಗಿಯಾದ ನಿರೂಪಣೆ ಮತ್ತು ಪ್ರೇಕ್ಷಕರ ಕುತೂಹಲ ಕಾಯ್ದುಕೊಳ್ಳುವ ಹಿನ್ನೆಲೆ ಸಂಗೀತ ಬೇಡುತ್ತವೆ. ಮೂಲ ತಮಿಳು ಸಿನೆಮಾದಲ್ಲಿ ಸಾಧ್ಯವಾದ ತಾಂತ್ರಿಕ ವಿಭಾಗಗಳಲ್ಲಿನ ಯಶಸ್ಸು ಇಲ್ಲೇಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದೇ ಇಲ್ಲ. ಮೊದಲಾರ್ಧವನ್ನು ನಿಧಾನಗತಿಯಲ್ಲಿ ನಿರೂಪಿಸಿರುವುದರಿಂದ ಮುಂದಿನ ಕತೆಯ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕಾಡುವುದಿಲ್ಲ. ದ್ವಿತೀಯಾರ್ಧದಲ್ಲಿ ವೇಗ ಪಡೆಯುವ ಕತೆ ಪ್ರೇಕ್ಷಕರನ್ನು ಒಳಗೊಳ್ಳುತ್ತಾ ಹೋಗುತ್ತದೆ. ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಲಂಡನ್‌ನಲ್ಲಿ ಚಿತ್ರಿಸಲಾಗಿದೆ. ಆದರೆ ಲಂಡನ್‌ನಲ್ಲಿ ಚಿತ್ರಿಸುವ ಅನಿವಾರ್ಯತೆಯೇನೂ ಇರಲಿಲ್ಲ. ಹಾಗೆ ನೋಡಿದರೆ ಅಲ್ಲಿ ಚಿತ್ರಿಸಿರುವ ಸನ್ನಿವೇಶಗಳು ಒಂದಷ್ಟು ಗೊಂದಲಗಳಿಗೂ ಕಾರಣವಾಗಿರುವುದು ಹೌದು!

ಮೂಲ ತಮಿಳು ಸಿನೆಮಾದಲ್ಲಿ ನಟಿ ನಯನತಾರಾ ಹದವರಿತ ನಟನೆಯೊಂದಿಗೆ ಚಿತ್ರವನ್ನು ಆವರಿಸಿಕೊಂಡಿದ್ದರು. ಕನ್ನಡ ಅವತರಣಿಕೆಯಲ್ಲಿ ಶರ್ಮಿಳಾ ಮಾಂಡ್ರೆ ಈ ಪಾತ್ರ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ ಎನ್ನಲಾಗದು. ಇದೇ ಮಾತು ಚಿರಂಜೀವಿ ಸರ್ಜಾ ಅವರಿಗೂ ಅನ್ವಯಿಸುತ್ತದೆ. ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ಬಹುಶಃ ಅವರಿಬ್ಬರ ವೃತ್ತಿ ಬದುಕಿನಲ್ಲಿ ಈ ಪಾತ್ರಗಳು ಅಪರೂಪದವು ಎಂದೇ ಹೇಳಬಹುದು. ಸಂಕಲನ ಮತ್ತು ಹಿನ್ನೆಲೆ ಸಂಗೀತದಲ್ಲಿ ಮತ್ತಷ್ಟು ಬಿಗಿ ಬೇಕಿತ್ತು. ಮೂಲ ತಮಿಳು ಸಿನೆಮಾ ವೀಕ್ಷಿಸದವರು ಒಮ್ಮೆ ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು.

ನಿರ್ದೇಶನ: ಕೆ.ಎಂ.ಚೈತನ್ಯ, ನಿರ್ಮಾಣ: ಸುನಂದ ಮುರಳಿ ಮನೋಹರ್ ಕಲೈ ಮತ್ತು ಸೂರ್ಯ, ಸಂಗೀತ: ಗುರುಕಿರಣ್, ಸಂಕಲನ: ಹರಿದಾಸ್ ಕೆಜಿಎಫ್, ತಾರಾಗಣ: ಶರ್ಮಿಳಾ ಮಾಂಡ್ರೆ, ಚಿರಂಜೀವಿ ಸರ್ಜಾ, ಅಚ್ಯುತ್‌ಕುಮಾರ್, ಪ್ರಕಾಶ್ ಬೆಳವಾಡಿ, ಸ್ನೇಹಾ ಆಚಾರ್ಯ, ಬಾಲಾಜಿ ಮನೋಹರ್ ಮತ್ತಿತರರು.

ರೇಟಿಂಗ್ - ** 1/3

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ಶಶಿಧರ ಚಿತ್ರದುರ್ಗ
ಶಶಿಧರ ಚಿತ್ರದುರ್ಗ
Next Story
X