Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಷ್ಟ್ರಪತಿಯಿಂದ ಪ್ರಶಸ್ತಿ ಪುರಸ್ಕೃತ...

ರಾಷ್ಟ್ರಪತಿಯಿಂದ ಪ್ರಶಸ್ತಿ ಪುರಸ್ಕೃತ ವೈದ್ಯನೇ ನಕಲಿ !

►ಟಾಪ್ ವೈದ್ಯರ ಅಸಲಿಯತ್ತು ಬಯಲು ►ಈ ವೈದ್ಯರಿಂದ ದೇವರೇ ಕಾಪಾಡಬೇಕು

ವಾರ್ತಾಭಾರತಿವಾರ್ತಾಭಾರತಿ5 July 2017 4:03 PM IST
share
ರಾಷ್ಟ್ರಪತಿಯಿಂದ ಪ್ರಶಸ್ತಿ ಪುರಸ್ಕೃತ ವೈದ್ಯನೇ ನಕಲಿ !

ಕೊಲ್ಕತ್ತಾ,ಜು.5 : ನಿನ್ನೆ ಮೊನ್ನೆಯ ತನಕ ಅವರು ಪಶ್ಚಿಮ ಬಂಗಾಳದ ವೈದ್ಯಕೀಯ ಲೋಕದ ಗಣ್ಯಾತಿಗಣ್ಯರಾಗಿದ್ದರು. ನರೇನ್ ಪಾಂಡೆ ಖ್ಯಾತ ಅಲರ್ಜಿ ಹಾಗೂ ಅಸ್ತಮಾ ತಜ್ಞರಾಗಿ ನಗರದ ಪ್ರಮುಖ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಶುಭೇಂದು ಭಟ್ಟಾಚಾರ್ಯ ಅವರು ಕೂಡ ಜನಪ್ರಿಯ ವೈದ್ಯರಾಗಿದ್ದರಲ್ಲದೆ ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದಲೂ ಸನ್ಮಾನಿತರಾಗಿದ್ದರು. ಇಂಟಗ್ರೇಟಿವ್ ಆಂಕಾಲಜಿಯಲ್ಲಿ ಎಂಡಿ ಪದವಿ ಹೊಂದಿರುವ ಅರದೀಪ್ ಚಟರ್ಜಿ ಕೂಡ ಖ್ಯಾತ ವೈದ್ಯರಾಗಿದ್ದರಲ್ಲದೆ ತಮ್ಮ ವಿಲಾಸಿ ಜೀವನಕ್ಕಾಗಿಯೂ ಹೆಸರು ಪಡೆದವರಾಗಿದ್ದರು.

ಆದರೆ ಈ ಮೂವರೂ ಸೇರಿದಂತೆ ಮೂರು ಡಜನ್ ಇತರರು ನಕಲಿ ವೈದ್ಯಕೀಯ ಪದವಿ ಹೊಂದಿದ್ದಕ್ಕಾಗಿ ಈಗ ಜೈಲುಗಂಬಿ ಎಣಿಸುತ್ತಿದ್ದಾರೆ.

ಆಶ್ಚರ್ಯವೆಂದರೆ ಪಾಂಡೆ ಅವರು 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರಲ್ಲದೆ ವೈದ್ಯರ ಪಾತ್ರ ನಿರ್ವಹಿಸುವ ಮುನ್ನ ಯುನಾನಿ ಔಷಧಿ ವಿತರಕರಾಗಿ ತಮ್ಮ ವೃತ್ತಿ ಆರಂಭಿಸಿದ್ದರು. ಭಟ್ಟಾಚಾರ್ಯ ಅವರು ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದಿರಲಿಲ್ಲ, ಚಟರ್ಜಿ ಎರಡು ಬಾರಿ ಹೋಮಿಯೋಪತಿ ಕಾಲೇಜೊಂದರಿಂದ ಹೊರನಡೆದವರಾಗಿದ್ದರು.

ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಪದವಿ ಇಲ್ಲದೇ ಇದ್ದರೂ ಕೆಲವೊಂದು ಅನಧಿಕೃತ ವೈದ್ಯಕೀಯ ಕಾಲೇಜುಗಳಿಂದಾಗಿ ಇವರೆಲ್ಲರೂ ಯಶಸ್ವೀ ವೈದ್ಯರಾಗಿ ಹೆಸರು ಪಡೆದಿದ್ದರು.

ಮೇ ತಿಂಗಳ ಮೊದಲ ವಾರದಲ್ಲಿ ಕುಶಿರಾಮ್ ಹಲ್ದಾರ್ ಹಾಗೂ ಕೈಝರ್ ಆಲಂ ಎಂಬ ಇಬ್ಬರು ವೈದ್ಯರನ್ನು ಅಲಿಪುರ್ದುವರ್ ಹಾಗೂ ಉತ್ತರ ದಿನಜಪುರ ಜಿಲ್ಲೆಗಳಿಂದ ಬಂಧಿಸಿದಾಗ ಈ ಜಾಲದ ಅಸಲಿಯತ್ತು ಬಯಲಾಗಿತ್ತು. ನಕಲಿ ಕಾಲೇಜುಗಳಿಂದ ಪದವಿ ಪಡೆದು ಇವರು ಸರಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊಲ್ಕತ್ತಾದ ಖ್ಯಾತ ರೂಬಿ ಜನರಲ್ ಹಾಸ್ಪಿಟಲ್ ನಲ್ಲೂ ಆಲಂ ಸೇವೆ ಸಲ್ಲಿಸಿದ್ದರು.

ತನಿಖೆ ತೀವ್ರಗೊಂಡಂತೆ ಉತ್ತರ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಫಲಕಟ ಎಂಬಲ್ಲಿನ ದಂತ ವೈದ್ಯ ಗೋಪಾಲ್ ಬಿಸ್ವಾಸ್ ಸಹಿತ ಹಲವು ಮಂದಿ ಇತರರು ಬಂಧನಕ್ಕೊಳಗಾಗಿದ್ದರು. ರಾಜ್ಯದಲ್ಲಿ ಕನಿಷ್ಠ 500ರಿಂದ 550 ನಕಲಿ ವೈದ್ಯರಿರಬಹುದೆಂದು ಪೊಲೀಸರು ಅಂದಾಜಿಸುತ್ತಾರೆ.

ಪೊಲೀಸರ ಎಫ್ ಐ ಆರ್ ನಲ್ಲಿ ಬರಾಸತ್ ನಲ್ಲಿರುವ ಆಲ್ಟರ್ನೇಟಿವ್ ಮೆಡಿಕಲ್ ಕೌನ್ಸಿಲ್ ಆಫ್ ಕೊಲ್ಕತ್ತಾ, ಭವಾನಿಪೋರ್ ಎಂಬಲ್ಲಿರುವ ಇಂಡಿಯನ್ ಬೋರ್ಡ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಬೆಹಾಲದ ಕೌನ್ಸಿಲ್ ಆಫ್ ಆಲ್ಟರ್ನೇಟಿವ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಹಾಗೂ ಬೌಬಜಾರಿನ ಇಂಡಿಯನ್ ಕೌನ್ಸಿಲ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಸೇರಿವೆ. ಯಾವುದೇ ಮಾನ್ಯತೆಯಿಲ್ಲದ ಈ ಸಂಸ್ಥೆಗಳು ಭಾರತ ಸಹಿತ ಅಮೆರಿಕಾ, ಇಟಲಿ, ರಷ್ಯ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶದ ಸಾವಿರಾರು ಮಂದಿಗೆ ನಕಲಿ ಪದವಿಗಳನ್ನು ನೀಡುತ್ತಿವೆ. ಯಾವುದೇ ತರಗತಿ ನಡೆಸದೆ ಕರೆಸ್ಪಾಂಡೆನ್ಸ್ ಕೋರ್ಸ್ ಮೂಲಕ ಪದವಿಗಳನ್ನು ದಯಪಾಲಿಸಲಾಗುತ್ತಿದೆ.

ಈ ನಕಲಿ ವೈದ್ಯರ ಹಾವಳಿಗೆ ಈಗ ರಾಜ್ಯ ಮೆಡಿಕಲ್ ಕೌನ್ಸಿಲ್ ಎಚ್ಚೆತ್ತುಕೊಂಡಿದ್ದು ಸಿಬಿಐ ಜತೆ ಸೇರಿಕೊಂಡು ಈ ನಕಲಿ ವೈದ್ಯರ ಬಂಡವಾಳ ಬಯಲು ಮಾಡುವುದಾಗಿ, ಕೌನ್ಸಿಲ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮೀಪವರ್ತಿ ನಿರ್ಮಲ್ ಮಜ್ಹಿ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X