Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 800 ಕುರಿಗಳು, 59 ಯಾಕ್‌ಗಳಿಗಾಗಿ 1967ರ...

800 ಕುರಿಗಳು, 59 ಯಾಕ್‌ಗಳಿಗಾಗಿ 1967ರ ಸಂಘರ್ಷ!

ವಾರ್ತಾಭಾರತಿವಾರ್ತಾಭಾರತಿ5 July 2017 5:11 PM IST
share
800 ಕುರಿಗಳು, 59 ಯಾಕ್‌ಗಳಿಗಾಗಿ 1967ರ ಸಂಘರ್ಷ!

ಬೀಜಿಂಗ್, ಜು. 5: ಸಿಕ್ಕಿಂ ಗಡಿಯ ವಿಚಾರದಲ್ಲಿ ಭಾರತ ಮತ್ತು ಚೀನಾಗಳ ನಡುವೆ ಈಗ ತಲೆದೋರಿರುವ ಉದ್ವಿಗ್ನತೆಯನ್ನೇ ಹೋಲುವ ಬಿಕ್ಕಟ್ಟೊಂದು 1967ರಲ್ಲೂ ಉದ್ಭವಿಸಿತ್ತು. ಚೀನಾದ ಕುರುಬರಿಗೆ ಸೇರಿದ 800 ಕುರಿಗಳು ಮತ್ತು 59 ಯಾಕ್‌ಗಳು ನಾಪತ್ತೆಯಾಗಿದ್ದು ಅಂದು ಬಿಕ್ಕಟ್ಟು ಸೃಷ್ಟಿಯಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಜೊತೆಗೆ ಭೂ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣ ಚಟುವಟಿಕೆಗಳ ಆರೋಪಗಳು ಉದ್ವಿಗ್ನತೆಗೆ ತುಪ್ಪ ಸುರಿದವು.

ಸಿಕ್ಕಿಂ ಗಡಿಯ ಸಮೀಪ ಕೆಲಸ ಮಾಡುತ್ತಿರುವ ಟಿಬೆಟ್ ಕುರುಬರ ಸಾಕು ಪ್ರಾಣಿಗಳ ಹಿಂಡನ್ನು ಭಾರತೀಯ ಸೈನಿಕರು ಕದ್ದಿದ್ದಾರೆ ಎಂಬುದಾಗಿ ಚೀನಾ ಆರೋಪಿಸಿತ್ತು ಎನ್ನುವುದು 1965ರಲ್ಲಿ ಉಭಯ ಸರಕಾರಗಳ ನಡುವೆ ನಡೆದ ವಿನಿಮಯಗಳಿಂದ ಬಹಿರಂಗಗೊಂಡಿದೆ. ಆ ಪ್ರಾಣಿಗಳನ್ನು ಹಿಂದಿರುಗಿಸುವಂತೆ ಚೀನಾ ಭಾರತೀಯ ಸೈನಿಕರನ್ನು ಒತ್ತಾಯಿಸಿತ್ತು.

1967ರ ಸಂಘರ್ಷವೂ ಇಂದು ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಸ್ಥಳದಲ್ಲೇ ನಡೆದಿರುವುದನ್ನು ಸ್ಮರಿಸಬಹುದಾಗಿದೆ.

ಚೀನಾ ಮಾಡಿರುವ ಆರೋಪಗಳು ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈ ಆರೋಪದಿಂದ ಕೆರಳಿದ ಜನರು ಹೊಸದಿಲ್ಲಿಯ ಶಾಂತಿಪಥ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ಎದುರು ನಾಟಕೀಯ ಪ್ರತಿಭಟನೆಯನ್ನೂ ಮಾಡಿದ್ದರು.

ಚೀನಾ ಪ್ರತಿಭಟನೆ

    ‘‘1965 ಸೆಪ್ಟಂಬರ್ 24ರ ಅಪರಾಹ್ನ ಭಾರತೀಯ ದುಂಡಾವರ್ತಿಗಳ ತಂಡವೊಂದು ಭಾರತೀಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಹೊಸದಿಲ್ಲಿಯ ಚೀನಾ ರಾಯಭಾರ ಕಚೇರಿಯ ದ್ವಾರದತ್ತ ಕುರಿಗಳ ಹಿಂಡೊಂದನ್ನು ಅಟ್ಟುತ್ತಾ ಬಂದರು. ಭಾರೀ ಗದ್ದಲ ಮಾಡಿದ ಅವರು, ಭಾರತವನ್ನು ಬೆದರಿಸುವುದಕ್ಕಾಗಿ ಚೀನಾ ಅಸಂಗತ ನೆಪಗಳನ್ನು ಸಂಶೋಧಿಸಿದೆ ಎಂದು ಆರೋಪಿಸಿದರು. ಕೆಲವು ಕುರಿ ಮತ್ತು ಕೆಲವು ಯಾಕ್‌ಗಳಿಗಾಗಿ ಚೀನಾ ಜಾಗತಿಕ ಯುದ್ಧವೊಂದನ್ನು ನಡೆಸಲು ಬಯಸಿದೆ ಎಂದು ಅವರು ಆರೋಪಿಸಿದರು’’ ಎಂಬುದಾಗಿ 1965 ಸೆಪ್ಟಂಬರ್ 26ರಂದು ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯವು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.

 ‘‘ಈ ಅಸಹ್ಯ ಪ್ರಹಸನವನ್ನು ಸಂಪೂರ್ಣವಾಗಿ ಭಾರತ ಸರಕಾರವೇ ರೂಪಿಸಿದೆ ಮತ್ತು ಪ್ರದರ್ಶಿಸಿದೆ. ಚೀನಾ ಸರಕಾರವು ಈ ಮೂಲಕ ಭಾರತ ಸರಕಾರಕ್ಕೆ ತನ್ನ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸುತ್ತದೆ’’ ಎಂದು ಅದು ಹೇಳಿತ್ತು.

ಕುರುಬರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ: ಭಾರತದ ಪ್ರತಿಕ್ರಿಯೆ

ಚೀನಾದ ಆರೋಪಗಳಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಐದು ದಿನಗಳ ಬಳಿಕ, ಅಂದರೆ ಅಕ್ಟೋಬರ್ 1ರಂದು ಉತ್ತರಿಸಿತು.

 ಟಿಬೆಟ್‌ನ ನಾಲ್ವರು ಕುರುಬರು ತಮ್ಮ ಪ್ರಾಣಿಗಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ ಭಾರತೀಯ ವಿದೇಶ ಸಚಿವಾಲಯವು, ‘‘ಇತರ ಟಿಬೆಟ್ ನಿರಾಶ್ರಿತರಂತೆ, ಈ ನಾಲ್ವರು ಕುರುಬರು ತಮ್ಮದೇ ಇಚ್ಛೆಯಲ್ಲಿ ನಮ್ಮ ಒಪ್ಪಿಗೆಯಿಲ್ಲದೆ ಭಾರತಕ್ಕೆ ಬಂದಿದ್ದಾರೆ ಹಾಗೂ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರು ಬಯಸಿದರೆ ಯಾವಾಗ ಬೇಕಾದರೂ ಟಿಬೆಟ್‌ಗೆ ಮರಳಲು ಅವರು ಸ್ವತಂತ್ರರಾಗಿದ್ದಾರೆ. 800 ಕುರಿಗಳು ಮತ್ತು 59 ಯಾಕ್‌ಗಳಿಗೆ ಸಂಬಂಧಿಸಿದಂತೆ, ಭಾರತ ಸರಕಾರವು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಈಗಾಗಲೇ ಉತ್ತರಿಸಿದೆ’’ ಎಂದು ಹೇಳಿದೆ.

‘‘ನಮಗೆ ಯಾಕ್‌ಗಳ ಬಗ್ಗೆ ಗೊತ್ತಿಲ್ಲ. ಕುರಿಗಳ ಬಗ್ಗೆ ಹೇಳುವುದಾದರೆ, ಸಂಬಂಧಿತ ಕುರುಬರು ಟಿಬೆಟ್‌ಗೆ ಮರಳಲು ಇಚ್ಛಿಸಿದರೆ ಯಾವಾಗ ಬೇಕಾದರೂ ಅವುಗಳನ್ನು ಟಿಬೆಟ್‌ಗೆ ತೆಗೆದುಕೊಂಡು ಹೋಗಬಹುದಾಗಿದೆ’’ ಎಂದು ಭಾರತದ ಉತ್ತರ ತಿಳಿಸಿದೆ.

ಚೀನಾ ರಾಯಭಾರ ಕಚೇರಿಯ ಮುಂದೆ ಪ್ರದರ್ಶನ ನಡೆಸಿದ ಪ್ರತಿಭಟನಕಾರರು ತಮ್ಮಂದಿಗೆ 800 ಕುರಿಗಳನ್ನು ಕರೆದುಕೊಂಡು ಹೋಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X