ನರ್ಮ್ ಬಸ್ ನಿಲ್ಲಿಸಿದರೆ ಹೋರಾಟ: ಯುವಕಾಂಗ್ರೆಸ್
ಪಡುಬಿದ್ರಿ,ಜು.6: ಉಡುಪಿ ನಗರದಿಂದ ಹಾಗೂ ಗ್ರಾಮೀಣಾ ಮಟ್ಟದಲ್ಲಿ ಸಂಚಾರಿಸುವ ಕೆ.ಎಸ್.ಆರ್.ಟಿ.ಸಿ (ನರ್ಮ್) ಬಸ್ಗಳ ಪರವಾನಿಗೆ ಸಾರ್ವಜನಿಕರ ಹಿತಾಸಕ್ತಿಗೋಸ್ಕರ ನೀಡಿದೆ. ಯಾವುದೇ ಕಾರಣಕ್ಕೆ ಸರಕಾರಿ ಬಸ್ ಸೇವೆಗಳನ್ನು ಕಡಿತಗೊಳಿಸಬಾರದೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ವಿ.ಅಮೀನ್ ಒತ್ತಾಯಿಸಿದ್ದಾರೆ.
ಸರಕಾರಿ - ಖಾಸಗಿ ಸೇವೆ ಮುಂದುವರಿಯಲಿ: ನಮ್ಮ ಜಿಲ್ಲೆಯಲ್ಲಿ ಆನೇಕ ವರ್ಷಗಳಿಂದ ಖಾಸಗಿ ಬಸ್ಗಳ ಸೇವೆ ದೊರೆಯುತ್ತಿದೆ. ಇದು ಮುಂದುವರಿಯಲಿ ಇದಕ್ಕೆ ನಮ್ಮ ವಿರೋಧ ಇಲ್ಲ. ಇದು ಪೈಪೋಟಿಯ ಯುಗವಾಗಿದ್ದು, ಖಾಸಗಿ ಬಸ್ಸುನವರು ಸರಕಾರಿ ಬಸ್ಸುಗಿಂತ ಇನ್ನಷ್ಟು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡುವತ್ತ ಗಮನಹರಿಸಲಿ.
ಅದರೆ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಸಹಿತ ಹಲವಾರು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಈ ಯೋಜನೆ ಜಾರಿಗೆ ತಂದಿರುತ್ತದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರಾದ ಗೋಪಾಲ ಪೂಜಾರಿಯವನ್ನು ಒತ್ತಾಯಿಸಲಾಗುವುದು. ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಪ್ರಮೋದ್ ಮದ್ವರಾಜ್ರವರು ಖಾಸಗಿ ಬಸ್ಸು ಮಾಲಕರ ಯಾವುದೇ ಲಾಭಿ ಮಾಣಿಯದೆ ಉಡುಪಿ ಜಿಲ್ಲಾದ್ಯಂತ ನರ್ಮ್ ಬಸ್ಸುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಜನಪರವಾದಂತಹ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ವಿಶ್ವಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಸ್ ರದ್ದುಗೊಳಿಸಿದರೆ ಹೋರಾಟ: ಸಾರಿಗೆ ಅಧಿಕಾರಿಗಳು ಜನೋಪಯೋಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳ ಪರವಾನಿಗೆ ರದ್ದುಗೊಳಿಸಲು ಮುಂದಾದರೆ, ಖಾಸಗಿ ಬಸ್ ಮಾಲಕರು ಸರಕಾರಿ ಬಸ್ಸು ಒಡಾಟಗಳನ್ನು ಬಲತ್ಕಾರದಿಂದ ತಡೆ ಮಾಡಲು ಮುಂದಾದರೆ ಜಿಲ್ಲಾಯಾದ್ಯಂತ ಯುವಕರನ್ನು, ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡು ಬೃಹತ್ ಮಟ್ಟದಲ್ಲಿ ನ್ಯಾಯೋಜಿತ ಹೋರಾಟ ಮಾಡುವುದು ಅನಿವಾರ್ಯವಾಗಬಹುದೆಂದು ವಿಶ್ವಾಸ್ ವಿ.ಅಮೀನ್ ಎಚ್ಚರಿಸಿದ್ದಾರೆ.







