Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕನ್ನಡ ಸಿನೆಮಾ: "ಕೋಲಾರ" ರಕ್ತಸಿಕ್ತ...

ಕನ್ನಡ ಸಿನೆಮಾ: "ಕೋಲಾರ" ರಕ್ತಸಿಕ್ತ ಚರಿತ್ರೆ

ಶಶಿಧರ ಚಿತ್ರದುರ್ಗಶಶಿಧರ ಚಿತ್ರದುರ್ಗ9 July 2017 12:29 AM IST
share
ಕನ್ನಡ ಸಿನೆಮಾ: ಕೋಲಾರ ರಕ್ತಸಿಕ್ತ ಚರಿತ್ರೆ

ಉಪೇಂದ್ರ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸಿದ್ದ ‘ಓಂ’ ಸಿನೆಮಾದ ಯಶಸ್ಸಿನ ನಂತರ ಸಾಲು, ಸಾಲಾಗಿ ರೌಡಿಯಿಸಂ ಸಿನೆಮಾಗಳು ತಯಾರಾದವು. ಈ ಚಿತ್ರಗಳ ಪೈಕಿ ಕೆಲವಷ್ಟೆ ಯಶಸ್ಸು ಕಂಡದ್ದು. ಇದು ಏಕತಾನತೆ ಎನಿಸುತ್ತಿದ್ದಂತೆ ಇದರ ಮುಂದುವರಿಕೆಯಾಗಿ ಭೂಗತ ಪಾತಕಿಗಳ ಚಿತ್ರಗಳನ್ನು ಡಾಕ್ಯುಮೆಂಟರಿ ಶೈಲಿಗೆ ಒಗ್ಗಿಸಿಕೊಳ್ಳಲಾಯಿತು. ಇದೀಗ ತೆರೆಕಂಡಿರುವ ‘ಕೋಲಾರ’ ಸಿನೆಮಾ ಇದೇ ಶೈಲಿಯದ್ದು. ಇಲ್ಲಿ ನಿರ್ದೇಶಕ ಆರ್ಯ ಮಹೇಶ್ ಕೋಲಾರದ ಪಾತಕಿ ತಂಗಂ ರಕ್ತಸಿಕ್ತ ಬದುಕನ್ನು ತೆರೆಗೆ ತಂದಿದ್ದಾರೆ. ತಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಬಾಲ್ಯದಲ್ಲಿ ತನಗಾದ ಕೆಟ್ಟ ಅನುಭವಗಳಿಂದಾಗಿ ತಂಗಂ ಪಾತಕಿಯಾಗುತ್ತಾನೆ. ಚಿನ್ನದ ನಾಡು ಕೋಲಾರದಲ್ಲಿ ತಾನೇ ಚಕ್ರವರ್ತಿಯಾಗಿ ಮೆರೆೆಯಬೇಕೆನ್ನುವ ಹಠ ಅವನದ್ದು. ಈ ಹಂತದಲ್ಲಿ ಪೈಪೋಟಿಗಿಳಿಯುವ ಎದುರಾಳಿಗಳನ್ನು ಕೊಚ್ಚುತ್ತಾನೆ. ತನ್ನ ವಿರುದ್ಧ ಸಾಕ್ಷಿ ಹೇಳಲು ಕೋರ್ಟ್‌ಗೆ ಬರುವ ರೌಡಿಯನ್ನು ಕೋರ್ಟ್ ಅಂಗಳದಲ್ಲೇ ಕೊಚ್ಚಿ ಹಾಕುವ ಒಂದು ಭೀಬತ್ಸ ಸನ್ನಿವೇಶವೂ ಇದೆ. ಹೀಗೆ, ತಂಗಂ ಬದುಕಿನ ಕೆಲ ನೈಜ ಫಟನೆಗಳನ್ನು ನಿರ್ದೇಶಕರು ತೆರೆಗೆ ಅಳವಡಿಸಿದ್ದಾರೆ. ಪಾತಕ ಜಗತ್ತಿನ ಕ್ರೌರ್ಯಗಳ ಹಸಿಹಸಿ ಚಿತ್ರಣ ಮನಸಿಗೆ ಕಸಿವಿಸಿ ಉಂಟುಮಾಡಿದರೂ, ಅದು ತಂಗಂ ಬದುಕು ಎನ್ನುವುದನ್ನು ಒಪ್ಪಲೇಬೇಕು. ಇದರ ಮಧ್ಯೆ ವ್ಯವಸ್ಥೆಯಲ್ಲಿನ ದೋಷಗಳೂ ಕತೆಯಲ್ಲಿ ಹಾಸುಹೊಕ್ಕಾಗಿವೆ.
ಚಿನ್ನದ ನಾಡನ್ನು ನಡುಗಿಸಿದ ಪಾತಕಿ ತಂಗಂ ಪಾತ್ರದಲ್ಲಿ ಪೀಚಲು ದೇಹದ ಯೋಗೀಶ್ ಅವರನ್ನು ಕಲ್ಪಿಸಿಕೊಳ್ಳುವುದು ಕಷ್ಟ! ಆದರೆ ಯೋಗೀಶ್ ಉತ್ತಮ ನಟನೆಯಿಂದ ಇದನ್ನು ಸರಿದೂಗಿಸಲು ಯತ್ನಿಸಿದ್ದಾರೆ. ನಾಯಕಿ ನೈನಾ ನಟನೆಯಲ್ಲಿನ್ನೂ ಪಳಗಬೇಕು. ಪಾತಕಗಳಿಂದ ಜನರನ್ನು ಹೆದರಿಸಿಕೊಂಡು ಮೆರೆಯುವ ಬದುಕು ನೀಚತನದ್ದು ಎನ್ನುವ ಸಂದೇಶವನ್ನೇನೋ ದಾಟಿಸಲಾಗಿದೆ. ಆದರೆ ಇದರ ಹಿನ್ನೆಲೆಯಲ್ಲಿ ತೆರೆಯ ಮೇಲೆ ತೋರಿಸುವ ಹಿಂಸೆ, ಕ್ರೌರ್ಯವನ್ನು ನೋಡುವುದು ಕಷ್ಟವಾಗುತ್ತದೆ. ನಿರ್ದೇಶಕರು ಚಿತ್ರಕ್ಕೆ ಡಾಕ್ಯುಮೆಂಟರಿ ಗುಣವನ್ನು ಲೇಪಿಸಲು ಯತ್ನಿಸಿದ್ದಾರೆ. ಇದರಿಂದಾಗಿ ಚಿತ್ರ ಕೆಲವೊಮ್ಮೆ ನಿಧಾನಗತಿ ಪಡೆದುಕೊಂಡು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಮತ್ತಷ್ಟು ಹೋಂವರ್ಕ್ ಮಾಡಿಕೊಂಡಿದ್ದಿದ್ದರೆ ಚಿತ್ರವನ್ನು ಸಹನೀಯವಾಗಿಸುವ ಸಾಧ್ಯತೆಗಳಿದ್ದವು.

ನಿರ್ದೇಶನ: ಆರ್ಯ ಎಂ. ಮಹೇಶ್, ನಿರ್ಮಾಣ: ಲಕ್ಷ್ಮೀನಾರಾಯಣ, ಸಂಗೀತ: ಬಿ.ಆರ್.ಹೇಮಂತ್‌ಕುಮಾರ್, ತಾರಾಗಣ: ಯೋಗೇಶ್, ನೈನಾ ಸರ್ವಾರ್, ಮಹೇಶ್, ಆದಿತ್ಯ, ನೀನಾಸಂ ಅಶ್ವಥ್ ಮತ್ತಿತರರು.
ರೇಟಿಂಗ್ - **1/2

share
ಶಶಿಧರ ಚಿತ್ರದುರ್ಗ
ಶಶಿಧರ ಚಿತ್ರದುರ್ಗ
Next Story
X