Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಂಕಷ್ಟದಲ್ಲಿರುವ ಹಿಂದೂ, ಕ್ರೈಸ್ತ...

ಸಂಕಷ್ಟದಲ್ಲಿರುವ ಹಿಂದೂ, ಕ್ರೈಸ್ತ ಕುಟುಂಬಗಳಿಗೆ ಹೆಗಲಾದ "ಹಿದಾಯ ಫೌಂಡೇಶನ್"

ಕೋಮುದಳ್ಳುರಿಗೆ ಬಲಿಯಾದ ಜಿಲ್ಲೆಯಲ್ಲಿ ಮಾನವೀಯತೆಯ ದರ್ಶನ

ರಶೀದ್ ವಿಟ್ಲರಶೀದ್ ವಿಟ್ಲ9 July 2017 10:28 PM IST
share
ಸಂಕಷ್ಟದಲ್ಲಿರುವ ಹಿಂದೂ, ಕ್ರೈಸ್ತ ಕುಟುಂಬಗಳಿಗೆ ಹೆಗಲಾದ ಹಿದಾಯ ಫೌಂಡೇಶನ್

ಮಂಗಳೂರು, ಜು.9: ದ.ಕ. ಜಿಲ್ಲೆ ಕೋಮುಜ್ವಾಲೆಯಲ್ಲಿ ಬೇಯುತ್ತಿದೆ. ಇರಿತ, ಕೊಲೆ, ಕಲ್ಲು ತೂರಾಟ, ಹಲ್ಲೆ ನಿರಂತರವಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ. ಇವೆಲ್ಲದರ ಮಧ್ಯೆ ಸಂಕಷ್ಟದಲ್ಲಿರುವ ಅನ್ಯಧರ್ಮೀಯ ಕುಟುಂಬಗಳಿಗೆ ನೆರವಾಗುವ ಮೂಲಕ ಮಂಗಳೂರಿನ ಹಿದಾಯ ಫೌಂಡೇಶನ್ ಕೋಮು ಸಾಮರಸ್ಯವನ್ನು ಸಾರಿದೆ.

ಘಟನೆ 1: ಮಂಗಳೂರು ಸರಿಪಳ್ಳ ರಸ್ತೆಯ ಅಳಪೆ ನಿವಾಸಿ 55ರ ಹರೆಯದ ಭವಾನಿ ಶೆಟ್ಟಿ ಅನಾರೋಗ್ಯ ಪೀಡಿತರು. ಮನೆಯಲ್ಲಿ ಒಂಟಿ ಜೀವನ. ಗಂಡ ಹಾಗೂ ಇದ್ದ ಒಬ್ಬ ಮಗ ಮೃತಪಟ್ಟಿದ್ದಾರೆ. ಇರುವ ಜೋಪಡಿಯಲ್ಲಿ ಶೌಚಾಲಯವಿಲ್ಲ. ವಿದ್ಯುತ್ ಇಲ್ಲ. ಆ ಮನೆಗೆ ಭೇಟಿ ನೀಡಿದ ತಂಡ ಶೌಚಾಲಯ ನಿರ್ಮಾಣದ ಭರವಸೆ ನೀಡಿದೆ.

ಘಟನೆ 2: ವಾಮಂಜೂರು ದಿವ್ಯಜ್ಯೋತಿ ಶಾಲೆಯ ಹಿಂಬದಿ ವಾಸವಾಗಿರುವ ಕೊರಗ ಜನಾಂಗದ 44ರ ಹರೆಯದ ಅವಿವಾಹಿತರಾದ ಐತಪ್ಪ ಕಳೆದ 7 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ನಿಲ್ಲಲು ಕೂರಲು ಆಗದ ಅವರನ್ನು ಓರ್ವ ಕುಟುಂಬ ಸದಸ್ಯರು ನೋಡಿಕೊಳ್ಳುತ್ತಿದ್ದಾರೆ. ಭೇಟಿ ನೀಡಿದ ಹಿದಾಯ ಫೌಂಡೇಶನ್ ತಂಡದ ಸದಸ್ಯರು ಐತಪ್ಪರಿಗೆ ನಿರಂತರ ಔಷಧಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ಘಟನೆ 3: ಇರುವೈಲ್ ನ ಕೆತ್ತಿಕಲ್ ನಿವಾಸಿ ಮೋಹಿನಿ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಮೂವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನದ ಬಗ್ಗೆ ಭರವಸೆ ಇಲ್ಲದೆ ಬದುಕು ಸವೆಸುತ್ತಿದ್ದಾರೆ. ಭೇಟಿಯಿತ್ತ ತಂಡ ಒಂದು ವರ್ಷದ ಮಟ್ಟಿಗೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತಂಡ ತೀರ್ಮಾನಿಸಿದೆ.

ಘಟನೆ 4: ಮೂಡುಶೆಡ್ಡೆ ಶಿವನಗರದ ವೆರೋನಿಕಾ ಡಿಸಿಲ್ವ ತನ್ನ ಗಂಡನ ಜೊತೆ ವಾಸಿಸುತ್ತಿದ್ದಾರೆ. ಅವರಿಗೆ ಮಕ್ಕಳಿಲ್ಲ. ಸಣ್ಣ ಜೋಪಡಿಯಲ್ಲಿ ವಿದ್ಯುತ್ ಕೂಡ ಇಲ್ಲ. ಸಂದರ್ಶಿಸಿದ ನಿಯೋಗ ವಿದ್ಯುತ್ ಒದಗಿಸಲು ನಿರ್ಣಯಿಸಿದೆ.

ಘಟನೆ 5: ವಾಮಂಜೂರು ಆದರ್ಶ ನಗರದ ಪಿಯಾಡ್ ಕ್ರಾಸ್ತಾ ವಿಧವೆ. ಇರುವ ಒಬ್ಬ 40ರ ಹರೆಯದ ಮಗನಿಗೆ ಅನಾರೋಗ್ಯ ಪೀಡಿತನಾಗಿದ್ದಾನೆ. ಜೋಪಡಿಯಲ್ಲಿರುವ ಆ ಕುಟುಂಬಕ್ಕೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತಂಡ ತೀರ್ಮಾನಿಸಿದೆ.

ಮೂರು ಹಿಂದೂ, ಎರಡು ಕ್ರೈಸ್ತ ಕುಟುಂಬಗಳನ್ನು ಸಂದರ್ಶಿಸಿದ ತಂಡ ಸಮಸ್ಯೆಗಳಿಗೆ ಸ್ಪಂದಿಸಿದೆ. ಈ ಸಂದರ್ಭ ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಆಸಿಫ್ ಡೀಲ್ಸ್ ಜುಬೈಲ್, ಬಶೀರ್ ಟಿ.ಕೆ. ಫರಂಗಿಪೇಟೆ, ಅಬ್ದುರ್ರಝಾಕ್ ಅನಂತಾಡಿ, ತಂಡಕ್ಕೆ ಮಾಹಿತಿ ನೀಡಿದ ವಾಮಂಜೂರು ಧರ್ಮಜ್ಯೋತಿ ಸೋಶಿಯಲ್ ಆರ್ಗನೈಸೇಶನ್ ನ ಲಿಲ್ಲಿ ಮೇರಿ ಮೊದಲಾದವರು ಉಪಸ್ಥಿತರಿದ್ದರು.

"5 ಮನೆಗಳಿಗೆ ಭೇಟಿ ನೀಡಿ ಭರವಸೆ ಕೊಟ್ಟ ತಕ್ಷಣ ಸೇವೆ ಪ್ರಾರಂಭಿಸಲಾಗಿದೆ. ಭವಾನಿ ಶೆಟ್ಟಿ ಮನೆಯ ಶೌಚಾಲಯ ಕೆಲಸ ಪ್ರಾರಂಭವಾಗಿದೆ. ಮೋಹಿನಿ ಹಾಗೂ ಪಿಯಾಡ್ ಕ್ರಾಸ್ತಾ ಅವರಿಗೆ ಜುಲೈ ತಿಂಗಳಿನಿಂದ ಆಹಾರ ಸಾಮಗ್ರಿ ನೀಡಲು ಪ್ರಾರಂಭಿಸಿದ್ದೇವೆ. ವೆರೋನಿಕಾ ಡಿಸಿಲ್ವ ಮನೆಯ ವಿದ್ಯುತ್ ಕಾಮಗಾರಿ ಆರಂಭವಾಗಿದೆ. ಐತಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಔಷಧಿ ಒದಗಿಸುವ ಕೆಲಸ ಮಾಡುತ್ತೇವೆ" ಎಂದು ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ತಿಳಿಸಿದ್ದಾರೆ.

ಹಿದಾಯ ಫೌಂಡೇಶನ್ ತಂಡ ಕಾವಳಕಟ್ಟೆ ಎಂಬಲ್ಲಿ ಹಿದಾಯ ಕಾಲನಿಯನ್ನು ಹೊಂದಿದೆ. 5 ಎಕ್ರೆಯ ವಿಶಾಲ ಕಾಲನಿಯಲ್ಲಿ 60 ವಿಧವಾ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದೆ. ವಿಕಲಚೇತನ ಮಕ್ಕಳ ಶಾಲೆಯನ್ನೂ ತೆರೆದಿದೆ. ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಬೇಧವಿಲ್ಲದೆ 285 ಬಡ ಕುಟುಂಬಗಳಿಗೆ ಪ್ರತಿ ತಿಂಗಳು ನಿರಂತರ ರೇಶನ್ ಸಾಮಗ್ರಿ ಒದಗಿಸುತ್ತಿದೆ.

ಕೋಮುಗಲಭೆಗಳಿಗೆ ತುತ್ತಾದ ಜಿಲ್ಲೆಯಲ್ಲಿ ಒಬ್ಬರನ್ನೊಬ್ಬರು ಸಂಶಯದ ದೃಷ್ಟಿಯಿಂದ ನೋಡುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಜಾತಿ-ಮತಗಳ ಭೇದವಿಲ್ಲದೆ ಅಸಹಾಯಕರಿಗೆ ಸಹಾಯಹಸ್ತ ಚಾಚಿದ "ಹಿದಾಯ ಫೌಂಡೇಶನ್"ನ ಕಾರ್ಯ ಅಭಿನಂದನಾರ್ಹ.

share
ರಶೀದ್ ವಿಟ್ಲ
ರಶೀದ್ ವಿಟ್ಲ
Next Story
X