Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮೋದಿ ದುರ್ಬಲ ಪ್ರಧಾನಿ

ಮೋದಿ ದುರ್ಬಲ ಪ್ರಧಾನಿ

ವಾರ್ತಾಭಾರತಿವಾರ್ತಾಭಾರತಿ10 July 2017 12:21 AM IST
share
ಮೋದಿ ದುರ್ಬಲ ಪ್ರಧಾನಿ


►ಮೋದಿ ದುರ್ಬಲ ಪ್ರಧಾನಿ

-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

♦ದುರ್ಬಲ ವಿರೋಧ ಪಕ್ಷಗಳಿರುವಾಗ ಮೋದಿ ಬಲಿಷ್ಠ ಪ್ರಧಾನಿಯಾಗಿ ಕಾಣುವುದು ಸಹಜ.

---------------------

►ಇರುವವನೇ ಮನೆಯೊಡೆಯ ಯೋಜನೆ ಶೀಘ್ರ ಜಾರಿಯಾಗಲಿದೆ

-ಶಕುಂತಲಾ ಶೆಟ್ಟಿ, ಶಾಸಕಿ

♦ಜನಪ್ರತಿನಿಧಿಗಳೆಲ್ಲ ವಿಧಾನಸೌಧವನ್ನು ತಮ್ಮ ತಮ್ಮ ಹೆಸರಿಗೆ ಬರೆದುಕೊಂಡರೇ?

---------------------

►ಇಸ್ರೇಲ್-ಭಾರತ ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿದೆ

-ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ

♦ಇಸ್ರೇಲ್ ಬೆಂಕಿಯಲ್ಲಿ ಮೋದಿ ಸಹಗಮನ ಮಾಡಿ ತಮ್ಮ ಪಾತಿವ್ರತ್ಯವನ್ನು ಸಾಬೀತು ಮಾಡಬೇಕೇ?

---------------------

►ನನ್ನ ಝಂಡ ಬದಲಾಗಿದೆ ಹೊರತು ಅಜೆಂಡಾ ಅಲ್ಲ

-ಎಚ್.ವಿಶ್ವನಾಥ್, ಮಾಜಿ ಸಚಿವ

♦ಸಿದ್ದರಾಮಯ್ಯರನ್ನು ವಿರೋಧಿಸುವ ಅಜೆಂಡಾ ಕುರಿತು ಹೇಳಿಕೆ.

---------------------

►ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ

-ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ.ರೇವಣ್ಣ ಪುತ್ರ

♦ಅದು ಜೆಡಿಎಸ್‌ನ ಸನಾತನ ಸಂಸ್ಕೃತಿಯಂತೆ.

---------------------

►ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ರಾಜ್ಯದ ನಾನಾ ಕಡೆ ತಿಂಗಳಿಗೊಂದು ಜನಾಂಗದ ಸಮಾವೇಶ ನಡೆಸಲಾಗುವುದು

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

♦ಆ ಜನಾಂಗದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಯಾವಾಗ ಸಮಾವೇಶ ಮಾಡುತ್ತೀರಿ?

---------------------

►ಕಾಂಗ್ರೆಸ್‌ನವರು ದಲಿತರಿಗೆ ಕುರಿ, ಕೋಳಿ ಕೊಟ್ಟು ಮೂಗಿಗೆ ತುಪ್ಪ ಹಚ್ಚಿ ರಾಜಕಾರಣ ಮಾಡುತ್ತಾರೆ

- ಸಿ.ಟಿ.ರವಿ,  ಶಾಸಕ

♦ಕುರಿ, ಕೋಳಿ ಸಾಂಬಾರಿಗೆ ತುಪ್ಪದ ಬದಲು ಎಣ್ಣೆ ಬಳಸಿದರಾಯಿತು.

--------------------
►ರಾಹುಲ್ ಗಾಂಧಿಗೆ ಇನ್ನೂ ಮೆಚ್ಯೂರಿಟಿ ಬಂದಿಲ್ಲ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

♦ಅವರಿಗಾಗಿ ಹುಡುಗಿ ಹುಡುಕುತ್ತಿದ್ದೀರಾ?

---------------------

►ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಎರಡೇ ಮಂದಿ ಸ್ಪರ್ಧೆ

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

♦ಉಳಿದವರೆಲ್ಲ ಬೇರೆ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದಾಯಿತು.

---------------------
►ರಾಹುಲ್ ಗಾಂಧಿಯಂತಹ ಬಚ್ಚಾನಿಂದ ನರೇಂದ್ರ ಮೋದಿ ಏನೂ ಕಲಿಯಬೇಕಾಗಿಲ್ಲ

-ಶೋಭಾ ಕರಂದ್ಲಾಜೆ, ಸಂಸದೆ

♦ಯಾರಿಂದಲಾದರೂ ಸರಿ, ಮೊದಲು ಒಂದಿಷ್ಟು ಕಲಿಯಲಿ.

---------------------

►ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿರುವುದಕ್ಕೆ ಆಷಾಢ ಕಾರಣವಲ್ಲ

- ಸಿದ್ದರಾಮಯ್ಯ, ಮುಖ್ಯಮಂತ್ರಿ

♦ಅಷಾಢಭೂತಿ ಹೇಳಿಕೆ ಎಂದರಂತೆ ದೇವೇಗೌಡ.

---------------------

►ರಜನಿಕಾಂತ್ ಆರೋಗ್ಯವೃದ್ಧಿಗಾಗಿ ಅಮೆರಿಕದಲ್ಲಿ ಜೂಜಾಡುತ್ತಿದ್ದಾರೆ

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

♦ನನ್ನೊಂದಿಗೆ ಜೂಜಾಟದಲ್ಲಿ ಸೋತವರ ಹತಾಶೆ ಹೇಳಿಕೆ ಎನ್ನುತ್ತಿದ್ದಾರಂತೆ ರಜನಿಕಾಂತ್.

---------------------

►ಉಡುಪಿಯಲ್ಲಿ ನಡೆದಿರುವುದು ಇಫ್ತಾರ್ ಕೂಟವಲ್ಲ, ಸೌಹಾರ್ದ ಭೋಜನ

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

♦ಜೊತೆಗೆ, ನಡೆದಿರುವುದು ನಮಾಝ್ ಅಲ್ಲ ಯೋಗಾಸನ ಎಂಬ ಹೇಳಿಕೆಯನ್ನೂ ಕೊಟ್ಟು ಬಿಡಿ.

---------------------

►ದತ್ತಪೀಠ ವಿವಾದ ಕುರಿತಾದ ತೀರ್ಮಾನವನ್ನು ದಿಢೀರಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ

- ರೋಶನ್ ಬೇಗ್, ಸಚಿವ

♦ಅಂದರೆ ವಿವಾದ ನಿನ್ನೆ ಶುರುವಾದದ್ದಷ್ಟೇ ಎನ್ನುತ್ತೀರಾ?

 ---------------------

►ಆಪರೇಷನ್ ಕಮಲದಿಂದ ನಮಗೆ ಬಹಳಷ್ಟು ಅನುಭವ ಆಗಿದೆ

- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

♦ಆ ಅನುಭವವನ್ನು ಬಳಸಿಕೊಂಡು ನೀವೂ ಆಪರೇಷನ್‌ಗೆ ಇಳಿಯುವ ಯೋಜನೆ ಇದೆಯೇ?

---------------------

►ದಲಿತರು ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತಾರೆ

- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

♦ತಲೆ ತಲಾಂತರಗಳಿಂದ ಮಲ ಹೊರುತ್ತಾ ಬಂದದ್ದು ಇದೇ ಕಾರಣದಿಂದ.

---------------------

►ಬೇರೆಯವರ ಮೇಲೆ ತಮ್ಮ ನಿಲುವು, ವಿಚಾರಗಳನ್ನು ಬಲವಂತವಾಗಿ ಹೇರುವ ಜನರನ್ನು ದೂರವಿಡಬೇಕು

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

♦ಮತ್ತೇಕೆ ತಡ, ಆರೆಸ್ಸೆಸ್‌ನಿಂದ ದೂರವಿದ್ದರಾಯಿತು.

---------------------

►ಗೋವಾ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಎಂದೂ ಅಪಮಾರ್ಗ ಹಿಡಿಯುವುದಿಲ್ಲ

-ಗಿರೀಶ್ ಚೂಡನ್‌ಕರ್, ಎಐಸಿಸಿ ಕಾರ್ಯದರ್ಶಿ

♦ಮತ್ಯಾವ ಮಾರ್ಗ ಹಿಡಿದಿದ್ದೀರಿ ಎನ್ನುವುದನ್ನು ಹೇಳಿ.

---------------------

►ಪ್ರಣವ್ ಮುಖರ್ಜಿ ನನ್ನ ತಂದೆಯಂತೆ

-ನರೇಂದ್ರ ಮೋದಿ, ಪ್ರಧಾನಿ

♦ಪ್ರಣವ್ ಅವರನ್ನು ಜಶೋದಾ ಬೆನ್ ಮಾವ ಎಂದು ಕರೆಯಬಹುದೇ?

---------------------

►ಜಿಎಸ್‌ಟಿ ಕ್ರಾಂತಿಯಲ್ಲ

-ಯು.ಟಿ.ಖಾದರ್, ಸಚಿವ

♦ಕಾರ್ಪೊರೇಟ್ ವಾಂತಿ ಎಂದು ಕರೆಯಬಹುದೇ?

---------------------

►ಗಂಗಾ-ಯಮುನಾ ಜೀವಂತ ಘಟಕಗಳಲ್ಲ

-ಸುಪ್ರೀಂಕೋರ್ಟ್

♦ಮನುಷ್ಯರು ಜೀವಂತ ಘಟಕ ಎನ್ನುವುದರ ಕುರಿತಂತೆ ಒಂದು ತೀರ್ಪನ್ನು ಬೇಗ ನೀಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X