Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಜನಾಥ್ ಸಿಂಗ್ ರಿಗೆ 2019ರಲ್ಲಿ...

ರಾಜನಾಥ್ ಸಿಂಗ್ ರಿಗೆ 2019ರಲ್ಲಿ ಸೋಲಿಸುವ ಬೆದರಿಕೆಯೊಡ್ಡಿದ ಟ್ರೋಲ್ ಪಡೆ

ಅಷ್ಟಕ್ಕೂ ಗೃಹ ಸಚಿವರು ಮಾಡಿದ ಪ್ರಮಾದವಾದರೂ ಏನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ11 July 2017 8:32 PM IST
share
ರಾಜನಾಥ್ ಸಿಂಗ್ ರಿಗೆ 2019ರಲ್ಲಿ ಸೋಲಿಸುವ ಬೆದರಿಕೆಯೊಡ್ಡಿದ ಟ್ರೋಲ್ ಪಡೆ

ತಾನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ ...

ಹೊಸದಿಲ್ಲಿ, ಜು.11: ಕಾಶ್ಮೀರಿಗಳನ್ನು “ದೇಶದ್ರೋಹಿಗಳು” ಎಂದು ನಿಂದಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಂಘಪರಿವಾರದ ಮಂದಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ರ ಟ್ವೀಟೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಮರನಾಥ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಕಾಶ್ಮೀರದ ಜನತೆಯನ್ನು ಪ್ರಶಂಸಿಸಿದ್ದರು. ಈ ಟ್ವೀಟ್ ನಿಂದ ಸದಾ ಕಾಶ್ಮೀರಿಗಳನ್ನು ಭಯೋತ್ಪಾದಕರೆಂದು ಹೀಗಳೆಯುವ ಸಂಘಪರಿವಾರದ ಮಂದಿಗೆ ಮುಖಭಂಗವಾಗಿದೆ.

ಕಾಶ್ಮೀರಿ ಜನರ ಅಂತರಂಗದಲ್ಲಿರುವ ಜಾತ್ಯತೀತ ಪ್ರಜ್ಞೆ ಮತ್ತು ಸಹಿಷ್ಣುತೆಯ ಮನೋಭಾವನೆಯನ್ನು “ಕಾಶ್ಮೀರಿಯತ್” ಎಂದು ಬಣ್ಣಿಸಲಾಗುತ್ತದೆ. ಇದೇ ಪದವನ್ನು ಉಲ್ಲೇಖಿಸಿ ರಾಜನಾಥ್ ಟ್ವೀಟ್ ಮಾಡಿದ್ದಾರೆ.

ರಾಜನಾಥ್ ಸಿಂಗ್ ರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಟೀಕೆಗಳನ್ನು ಆರಂಭಿಸಿದ ಈ ಟ್ರೋಲ್ ಪಡೆಗಳು, 2019ರ ಚುನಾವಣೆ ದೂರವಿಲ್ಲ ಎಂದು ಬೆದರಿಸಿದ್ದಾರೆ. ಇಷ್ಟೇ ಅಲ್ಲದೆ ಕೇಂದ್ರ ಸಚಿವರ ವಿರುದ್ಧ ಟೀಕಾಪ್ರಹಾರಗಳನ್ನು ನಡೆಸಿದ್ದಾರೆ.

ತನ್ನನ್ನು “ರಾಷ್ಟ್ರೀಯವಾದಿ “ ಎಂದು ಪರಿಚಯಿಸಿಕೊಂಡ ತ್ರಿಜಾತಾ ಎನ್ನುವ ಟ್ಟಿಟ್ಟರ್ ಖಾತೆಯೊಂದು, ನೀವು ಠಾಕೂರರು ಹೌದಾ?, ಒಮ್ಮೆಯಾದರೂ ಆರೆಸ್ಸೆಸ್ ನ ಶಾಖೆಗಳಿಗೆ ಭೇಟಿ ನೀಡಿದ್ದೀರಾ?, ನಿಮ್ಮಂತಹ ಹೇಳಿಕೆಗಳನ್ನು ಆರೆಸ್ಸೆಸ್ ಎಂದಿಗೂ ಕಲಿಸುವುದಿಲ್ಲ” ಎಂದಿದೆ.

ಇನ್ನೊಂದು ಟ್ವೀಟ್ ಮಾಡಿರುವ ಇದೇ ಖಾತೆ ರಾಜನಾಥ್ ಸಿಂಗ್ ರನ್ನು “ಯಾವುದೇ ಚೇತನವಿಲ್ಲದ ವಯಸ್ಸಾದ ಅಡ್ವಾಣಿ”ಗೆ ಹೋಲಿಸಿದೆ.

ಇಷ್ಟೇ ಅಲ್ಲದೆ ಕೆಲವು ಟ್ವಿಟ್ಟರಿಗರು ರಾಜನಾಥ್ ಸಿಂಗ್ ರನ್ನು “ನಿಂದಾ ಮಾಮ” ಎಂದು ಗೇಲಿ ಮಾಡಿದ್ದಾರೆ. ಆನ್ ಲೈನ್ ಬ್ರಾಂಡಿಂಗ್ ಸಂಸ್ಥೆಯೊಂದರ ಸ್ಥಾಪಕ ಅರುಣ್ ಕುಮಾರ್ ಎಂಬಾತ ಭಗವದ್ಗೀತೆಯನ್ನು ಉಲ್ಲೇಖಿಸಿ, “ಇದು ಯುದ್ಧದ ಸಮಯವೇ ಹೊರತು ಖಂಡಿಸುವ ಸಮಯವಲ್ಲ. ಕೃಷ್ಣ ಅರ್ಜುನನೊಂದಿಗೆ ಹೋರಾಡಲು ಹೇಳಿದ್ದ. ಶಾಂತಿಗಾಗಿ ಕೌರವರನ್ನು ಖಂಡಿಸಲು ಹೇಳಿರಲಿಲ್ಲ” ಎಂದಿದ್ದಾನೆ.

ಇಷ್ಟೇ ಅಲ್ಲದೆ ಬಿಜೆಪಿ ನಾಯಕ ಬಲ್ಬೀರ್ ಪುಂಜ್ ಟ್ವೀಟ್ ಮಾಡಿದ್ದು, “ಈ ಖಂಡನೆ ಅರ್ಥಹೀನವಾದುದು. ಈ ಹೇಡಿತನದ ದಾಳಿಯ ವಾತಾವರಣವನ್ನು ಸೃಷ್ಟಿಸಿರುವುದಕ್ಕೆ ಅವರು ಜವಾಬ್ದಾರರು” ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ “ಕಾಶ್ಮೀರಿಯತ್ ಗೆ ನಾನು ಮಹತ್ವ ನೀಡುತ್ತೇನೆ. ದೇಶದ ಎಲ್ಲಾ ಭಾಗಗಳಲ್ಲೂ ಶಾಂತಿಯನ್ನು ಕಾಪಾಡುವಂತೆ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಎಲ್ಲಾ ಕಾಶ್ಮೀರಿಗಳು ಭಯೋತ್ಪಾದಕರಲ್ಲ” ಎಂದಿದ್ದಾರೆ.

ಒಂದೆಡೆ ಕೇಂದ್ರ ಸಚಿವರ ಟ್ವೀಟ್ ನಿಂದ ಮುಖಭಂಗಕ್ಕೊಳಗಾಗಿರುವ ಸಂಘ ಪರಿವಾರದ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಕೇಂದ್ರ ಸಚಿವರ ಟ್ವೀಟ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೊದಲಿಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ಬಲ್ಬೀರ್ ಪುಂಜ್ ನಂತರ ಉಲ್ಟಾ ಹೊಡೆದು, "ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರಿಂದ ಸಾಮಾನ್ಯ ಕಾಶ್ಮೀರಿಗಳನ್ನು ಪ್ರತ್ಯೇಕಿಸಿದ್ದಕ್ಕೆ ಅಭಿನಂದನೆಗಳು. ಭಯೋತ್ಪಾದನೆಯ ವಿರುದ್ಧ ಇಡೀ ರಾಷ್ಟ್ರವೇ ಒಂದಾಗಿದೆ” ಎಂದಿದ್ದಾರೆ.

“ಈಗಿನ ದ್ವೇಷದ ವಾತಾವರಣದಲ್ಲಿ ನಿಮ್ಮ ಮಾತುಗಳು ಹಿತವಾಗಿದೆ. ನಿಮ್ಮಿಂದ ಈ ಮಾತುಗಳನ್ನು ನಾವು ನಿರೀಕ್ಷಿಸಿದ್ದೆವು” ಎಂದು ಝಫರ್ ಸರೇಶ್ ವಾಲಾ ಎಂಬವರು ಟ್ವೀಟ್ ಮಾಡಿದ್ದಾರೆ.

“ಇದು ಅದ್ಭುತವಾದದ್ದು. ದ್ವೇಷ ಕಾರುವ ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದಕ್ಕೆ ಹಾಗೂ ಕಾಶ್ಮೀರಿಗಳ ಬಗೆಗಿನ ನಿಲುವನ್ನು ಹೇಳಿದ್ದಕ್ಕೆ ನಿಮ್ಮ ಮೇಲೆ ಗೌರವವಿದೆ” ಎಂದು ನಿಧಿ ರಝ್ದಾನ್ ಎಂಬವರು ಟ್ವೀಟ್ ಮಾಡಿದ್ದಾರೆ. “ರಾಜನಾಥ್ ಸಿಂಗ್ ಇಂದು ಇಂಟರ್ ನೆಟ್ ಅನ್ನು ಗೆದ್ದಿದ್ದಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X