ವೇಣೂರು: ಗುರುಪೂರ್ಣಿಮೆ ಆಚರಣೆ

ಬೆಳ್ತಂಗಡಿ, ಜು. 11: ಪುಷ್ಪಗಿರಿ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸ ವರ್ಷಾಯೋಗವು ಚಾತುರ್ಮಾಸ ಸಂಕಲ್ಪದೊಂದಿಗೆ ರವಿವಾರ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಆರಂಭಗೊಂಡಿತು.
ಗುರುಪೂರ್ಣಿಮೆ ನಿಮಿತ್ತ ಗುರುಪೂಜೆ ಪೂಜೆ ನೆರವೇರಿಸಿ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರಿಗೆ ಗುರುಮಂತ್ರ ಬೋಧಿಸಿ ಆಶೀರ್ವಚನ ನೀಡಿದ ಶ್ರೀ ಪ್ರಸಂಗಸಾಗರ ಮುನಿಯವರು, ಜೈನ ಧರ್ಮದಲ್ಲಿ ಅಷ್ಟಾಹ್ನಿಕ ಪರ್ವದ ಅಂತಿಮ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುತ್ತಿದ್ದು, ಭಗವಾನ್ ಮಹಾವೀರ ಸ್ವಾಮಿ ಸಮವಸರಣದಲ್ಲಿ ವಿರಾಜಮಾನವಾಗಿ ದಿವ್ಯಧ್ವನಿ ಹೊರಡಿಸಿದ ಪವಿತ್ರ ದಿನ ಗುರುಪೂರ್ಣಿಮೆಯಾಗಿರುತ್ತದೆ. ಯಾರ ಜೀವನದಲ್ಲಿ ಗುರು ಇಲ್ಲವೋ ಅವನು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಗುರುವು ನಮ್ಮ ಪಾಲಿಗೆ ಜ್ಞಾನದ ಬೆಳಕನ್ನು ನೀಡುವವರು ಎಂದು ನುಡಿದರು.
ಸಮಾರಂಭದಲ್ಲಿ ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಬೈಯ್ಯಜಿ, ಶ್ರೀ ಶ್ರೀಕಾಂತ ಬೈಯ್ಯಜಿ ಆಶೀರ್ವಚನ ನೀಡಿದರು. ಬಾಲಬ್ರಹ್ಮಚಾರಿ ಶ್ರೀ ಧರ್ಮನಾಥ ಬೈಯ್ಯಜಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಆಚರಣೆ ಸಮಿತಿ ಅಧ್ಯಕ್ಷ ತಿಮ್ಮಣ್ಣರಸ ಡಾ ಪದ್ಮಪ್ರಸಾದ ಅಜಿಲ, ಜಿ.ಪಂ. ಸದಸ್ಯ ವಿ. ಪದ್ಮಶೇಖರ ಜೈನ್, ಉದ್ಯಮಿ ಧನ್ಯ ಕುಮಾರ್ ರೈ ಬಿಳಿಯೂರುಗುತ್ತು, ಪುಷ್ಪರಾಜ ಹೆಗ್ಡೆ, ಜಯಕೀರ್ತಿ ಜೈನ್, ಉದಯಕುಮಾರ್ ಕಟ್ಟೆಮನೆ, ಡಾ ಶಾಂತಿಪ್ರಸಾದ್, ಉದಯ ಕುಮಾರ್ ಸೇಮಿತ, ಪ್ರಸನ್ನ ಆರ್. ಹೆಗ್ಡೆ, ಪ್ರವೀಣ್ ಪಡಿವಾಳ್, ಶರ್ಮಿತ್ ಕುಮಾರ್, ಸುಧೀರ್ ಕುಮಾರ್, ಪ್ರಮೋದ್ ಕುಮಾರ್, ಡಾ ಅಶೋಕ್, ಭರತ್ ಆರಿಗ, ಸ್ವಪ್ನ, ಪ್ರಿಯದರ್ಶಿನಿ, ಪೂರ್ಣಿ ಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಡಾ ಬಿ.ಪಿ. ಇಂದ್ರ ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.







