ಅಜೆಕಾರು, ಜು.12: ಹೆರ್ಮುಂಡೆ ಗ್ರಾಮದ ಕೈಕಂಬ ಎಂಬಲ್ಲಿ ಗ್ರಾಪಂ ವತಿಯಿಂದ ಅಳವಡಿಸಲಾದ ಸುಮಾರು 20 ಸಾವಿರ ರೂ. ಮೌಲ್ಯದ ಸೋಲಾರ್ ಲೈಟ್ನ್ನು ಸತೀಶ್ ಎಂಬಾತ ಕಳವಿಗೆ ಯತ್ನಿಸಿ, ಅಲ್ಲೇ ರಸ್ತೆಯ ಬದಿಯ ತೋಡಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.