ಭಟ್ಕಳ: ಮನೆಗೊಂದು ಮರ, ಮನಸಿಗೊಂದು ಪುಸ್ತಕ ಕಾರ್ಯಕ್ರಮ

ಭಟ್ಕಳ, ಜು.14: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ, ಭಾರತ ವಿಕಾಸ ಪರಿಷತ್ತು, ವೆಂಕಟೇಶ್ವರ ಯುವಕ ಸಂಘ ಆಸರಕೇರಿ, ಭುವನೇಶ್ವರಿ ಕನ್ನಡ ಸಂಘ ಆಸರಕೇರಿ, ಭಟ್ಕಳ ಕ್ರಿಯಾಶಿಲ ಬಳಗ ಇವರ ಸಹಯೋಗದಲ್ಲಿ ವನಮಹೋತ್ಸವದ ಅಂಗವಾಗಿ"ಮನೆಗೊಂದು ಗಿಡ ಮನಸಿಗೊಂದು ಪುಸ್ತಕ" ವಿತರಣಾ ಕಾರ್ಯಕ್ರಮವು ಭಟ್ಕಳದ ಆಸರಕೇರಿಯಲ್ಲಿ ನಡೆಯಿತು.
ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯದ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಆಸರಕೇರಿಯ ಮನೆಗಳಿಗೆ ತೆರಳಿ ಮನೆಗೊಂದು ಗಿಡ ಜೊತೆಗೆ ಪುಸ್ತಕವನ್ನು ನೀಡಲಾಯಿತಲ್ಲದೇ, ಗಿಡಮರಗಳ ಮಹತ್ವದ ಕುರಿತ ವಿವರಗಳು ಹಾಗೂ ಪುಸ್ತಕಗಳು ನಮ್ಮ ಬದುಕಿಗೇಕೆ ಬೇಕು ಎಂಬ ಮಹತ್ವವನ್ನು ಸಾರುವ ನಾಡಿನ ಹಿರಿಯ ಸಾಹಿತಿ ವಿ.ಗ. ನಾಯಕರ "ಪುಸ್ತಕ ಪ್ರೀತಿ" ಎಂಬ ಲೇಖನವನ್ನೂ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ.ಸಾ.ಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ, ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ. ಆರ್. ನಾಯ್ಕ, ಭಾರತ ವಿಕಾಸ ಪರಿಷತ್ನ ಅಧ್ಯಕ್ಷ ವಿರೇಂದ್ರ ಶ್ಯಾನಭಾಗ, ಅರಣ್ಯ ಇಲಾಖೆಯ ಫಾರೆಸ್ಟರ್ ರವಿ, ಕ.ಸಾ.ಪ ಗೌರವ ಸಲಹೆಗಾರ ಅನಂತ ನಾಯ್ಕ ಉಗ್ರಾಣಿಮನೆ, ಕ.ಸಾ.ಪ ಗೌರವ ಕಾರ್ಯದರ್ಶಿ ಎಂ.ಪಿ. ಭಂಡಾಡಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ, ಸದಸ್ಯರಾದ ಸಂತೋಷ ಆಚಾರ್ಯ, ನಿತ್ಯಾನಂದ ಭಟ್, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ಮನೋಜ ನಾಯ್ಕ, ಕಾರ್ಯದರ್ಶಿ ಪಾಂಡು ನಾಯ್ಕ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ, ಭಟ್ಕಳ ಅರ್ಬನ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ ಆಸರಕೇರಿ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಆಸರಕೇರಿ, ವೆಂಕಟೇಶ ಮೊಗೇರ ಜಂಬೂರಮಠ, ಎಮ್. ಎಸ್. ನಾಯ್ಕ ಮಣ್ಕುಳಿ ಭಟ್ಕಳ ಕ್ರೀಯಾಶೀಲ ಬಳಗದ ಸದಸ್ಯರು ಉಪಸ್ಥಿತರಿದ್ದರು.







